ಆ್ಯಪ್ನಗರ

ಶಿಡ್ಲಘಟ್ಟ ನಗರಸಭೆಗೆ ಶಾಂತಿಯುತ ಮತದಾನ

ಶಿಘಟ್ಟ: ರೇಷ್ಮೆನಗರಿ ಶಿಡ್ಲಘಟ್ಟ ನಗರಸಭೆಗೆ ಬುಧವಾರ ಶಾಂತಿಯುತವಾಗಿ ಚುನಾವಣೆ ನಡೆದಿದ್ದು, ಶೇ.76.83ರಷ್ಟು ಮತದಾನವಾಗಿದೆ.

Vijaya Karnataka 30 May 2019, 3:53 pm
ಶಿಘಟ್ಟ: ರೇಷ್ಮೆನಗರಿ ಶಿಡ್ಲಘಟ್ಟ ನಗರಸಭೆಗೆ ಬುಧವಾರ ಶಾಂತಿಯುತವಾಗಿ ಚುನಾವಣೆ ನಡೆದಿದ್ದು, ಶೇ.76.83ರಷ್ಟು ಮತದಾನವಾಗಿದೆ.
Vijaya Karnataka Web CBP-29SDL2


ನಗರದ 31 ವಾರ್ಡ್‌ಗಳಲ್ಲಿ ನಾನಾ ಕಡೆ ಸ್ಥಾಪಿಸಿದ್ದ 43 ಮತಗಟ್ಟೆಗಳ ಮುಂದೆಯೂ ಬೆಳಗ್ಗೆಯೇ ಮತದಾರರು ಸರತಿ ಸಾಲಲ್ಲಿ ನಿಂತು ತಮ್ಮ ತಮ್ಮ ವಾರ್ಡುಗಳ ಅಭ್ಯರ್ಥಿಗಳಿಗೆ ಮತ ಹಾಕಿದರು.

ಸೂರ್ಯ ತಲೆ ಮೇಲೆ ಬಂದು ಬಿಸಿಲೇರುವ ಮುನ್ನವೇ ಎಲ್ಲ ವಾರ್ಡ್‌ಗಳಲ್ಲೂ ಸರಾಸರಿ ಶೇ.50ರಷ್ಟು ಮತದಾನ ಮುಗಿದಿತ್ತು. ಮಧ್ಯಾಹ್ನದ ನಂತರ ಮತದಾನದ ವೇಗ ಸ್ವಲ್ಪ ತಗ್ಗಿದ್ದು, ಸಂಜೆಯವರೆಗೂ ನಿಧಾನಗತಿಯಲ್ಲಿ ಮತದಾನ ಸಾಗಿತು.

ಕೊನೆ ಕ್ಷಣದವ ಮನವೊಲಿಕೆ ತಂತ್ರ: ಎಲ್ಲ ವಾರ್ಡ್‌ಗಳ ಮತಗಟ್ಟೆಗಳ ಬಳಿಯೂ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು, ಆಯಾ ಪಕ್ಷ ದ ಮುಖಂಡರು ಕಾರ್ಯಕರ್ತರು ಗುಂಪುಗುಂಪಾಗಿ ಜಮಾಯಿಸಿದ್ದು, ಕೊನೆ ಕ್ಷ ಣದವರೆಗೂ ಮತದಾರರ ಮನವೊಲಿಸಿ ಮತಯಾಚನೆ ನಡೆಸಿದರು.

ನಗರದಲ್ಲಿನ ಎಲ್ಲ 31 ವಾರ್ಡ್‌ಗಳಲ್ಲೂ ಯಾವುದೇ ಅಡ್ಡಿ ಆತಂಕ ಇಲ್ಲದೆ ಮತದಾನ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ ್ಮ, ಅತಿಸೂಕ್ಷ ್ಮ ಮತಗಟ್ಟೆಗಳಿಗೆ ಅನುಗುಣವಾಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿತ್ತು.

ಮತದಾನ ಮುಗಿದಾದ ಮೇಲೆ ಎಲ್ಲ ಇವಿಎಂ ಮತ ಯಂತ್ರಗಳನ್ನು ನಗರದ ಸರಕಾರಿ ಪದವಿಪೂರ್ವ ಕಾಲೇಜಿನ ಸ್ಟ್ರಾಂಗ್‌ರೂಂಲ್ಲಿ ಭದ್ರಪಡಿಸಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಮೇ 31ರಂದು ಯಾರಾಗಲಿದ್ದಾರೆ ಪುರಪಿತೃಗಳು ಎಂದು ತಿಳಿಯಲಿದ್ದು, ಅದುವರೆಗೂ ಕಾಯಬೇಕಿದೆ.

ಮತದಾರ ಸ್ನೇಹಿ ಮತಗಟ್ಟೆಗಳು
ನಗರದಲ್ಲಿನ ಎಲ್ಲ ಮತಗಟ್ಟೆಗಳನ್ನು ಕೂಡ ಮತದಾರರ ಸ್ನೇಹಿ ಹಾಗೂ ವಿಶೇಷಚೇತನ ಸ್ನೇಹಿಯಾಗಿ ಸ್ಥಾಪಿಸಲಾಗಿತ್ತು. ಎಲ್ಲ ಮತಗಟ್ಟೆಗಳ ಬಳಿಯೂ ವಿಶೇಷಚೇತನರು ಸಹ ಸರಾಗವಾಗಿ ತೆರಳಿ ಮತಚಲಾಯಿಸಲು ರಾರ‍ಯಂಪ್‌ಗಳನ್ನು ನಿರ್ಮಿಸಲಾಗಿತ್ತು.

ವಿಶೇಷಚೇತನರು, ಹಿರಿಯರು, ವೃದ್ಧರು ಮತಗಟ್ಟೆಗೆ ಬಂದು ಮತಚಲಾಯಿಸಲು ವ್ಹೀಲ್‌ಚೇರ್‌ ವ್ಯವಸ್ಥೆ ಮಾಡಿದ್ದು, ನಗರಸಭೆ ಸಿಬ್ಬಂದಿ ನೆರವಾದರು. ಮತಗಟ್ಟೆಯ ಸುತ್ತಲೂ 200 ಮೀಟರ್‌ ದೂರದರವೆಗೂ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ತಂಪು ಪಾನೀಯಕ್ಕೆ ಮೊರೆಹೋದ ಬೆಂಬಲಿಗರು
ಮತದಾನದ ಸಮಯದಲ್ಲಿ ಮತಗಟ್ಟೆಗಳ ಬಳಿ ಜಮಾಯಿಸಿದ್ದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಮತದಾರರು ಬಿಸಿಲ ಝಳಕ್ಕೆ ತಂಪು ಪಾನೀಯ, ಐಸ್‌ಕ್ರೀಂಗೆ ಮೊರೆಹೋದರು.

ಈ ಮೊದಲು ಚುನಾವಣೆಗಳ ವೇಳೆ ಸಾಮಾನ್ಯವಾಗಿ ಮತಗಟ್ಟೆಗಳ ಬಳಿ ಸಮಯದೂಡಲು ಕಡಲೆಕಾಯಿ, ಸೌತೆಕಾಯಿ, ಕಾಫಿ, ಟೀ, ಎಲೆ ಅಡಕೆಗಳ ಮೊರೆಹೋಗುತ್ತಿದ್ದರು. ಆದರೆ ಇದೀಗ ಹೆಚ್ಚಾದ ಬಿಸಿಲ ಝಳದಿಂದ ಪಾರಾಗಲಿ ತಂಪು ಪಾನೀಯಗಳಿಗೆ ಮೊರೆಹೋದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ