ಆ್ಯಪ್ನಗರ

ಕನಿಷ್ಠ ವೇತನಕ್ಕೆ ಇಒ, ಪಿಡಿಒಗಳೇ ಅಡ್ಡಿ

ರಾಜ್ಯದ ಎಲ್ಲಾ ಗ್ರಾಪಂ ನೌಕಕರಿಗೆ ಕನಿಷ್ಠ 12 ಸಾವಿರ ವೇತನ ನೀಡಬೇಕೆಂದು ಸರಕಾರ ಘೋಷಿಸಿದ್ದರೂ ತಾಪಂ ಇಒ, ಗ್ರಾಪಂ ಪಿಡಿಒಗಳು ನಿರ್ಲಕ್ಷ ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯ ಕಾರ‍್ಯದರ್ಶಿ ರಾಮಕೃಷ್ಣ ಆರೋಪಿಸಿದರು.

Vijaya Karnataka 26 Jun 2019, 4:07 pm
ಗ್ರಾಪಂ ನೌಕರರ 5ನೇ ತಾಲೂಕು ಸಮ್ಮೇಳನದಲ್ಲಿ ರಾಮಕೃಷ್ಣ ಆರೋಪ
Vijaya Karnataka Web
ಕನಿಷ್ಠ ವೇತನಕ್ಕೆ ಇಒ, ಪಿಡಿಒಗಳೇ ಅಡ್ಡಿ

ಬಾಗೇಪಲ್ಲಿ:
ರಾಜ್ಯದ ಎಲ್ಲಾ ಗ್ರಾಪಂ ನೌಕಕರಿಗೆ ಕನಿಷ್ಠ 12 ಸಾವಿರ ವೇತನ ನೀಡಬೇಕೆಂದು ಸರಕಾರ ಘೋಷಿಸಿದ್ದರೂ ತಾಪಂ ಇಒ, ಗ್ರಾಪಂ ಪಿಡಿಒಗಳು ನಿರ್ಲಕ್ಷ ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯ ಕಾರ‍್ಯದರ್ಶಿ ರಾಮಕೃಷ್ಣ ಆರೋಪಿಸಿದರು.

ಪಟ್ಟಣದ ಡಾ. ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ತಾಲೂಕು ಗ್ರಾಪಂ ನೌಕರರ ಸಂಘ ಮತ್ತು ಸಿಐಟಿಯು ವತಿಯಿಂದ ಏರ್ಪಡಿಸಿದ್ದ ಗ್ರಾಪಂ ನೌಕರರ 5ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

2018ಕ್ಕಿಂತ ಮೊದಲು ಎಲ್ಲಾ ಗ್ರಾಪಂ ನೌಕರರು 1, 2, 3 ಸಾವಿರ ಪಡೆಯುತ್ತಿದ್ದರು. ಆದರೆ ನಮ್ಮ ಗ್ರಾಪಂ ನೌಕರರ ಸಂಘ ಮತ್ತು ತಾಲೂಕು ಸಿಯಟಿಯು ಉಗ್ರ ಹೋರಾಟದ ಮೂಲಕ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸಳೆದು ಮತ್ತು ಅವಿರತ ಶ್ರಮದಿಂದ ಇಂದು ಗ್ರಾಪಂ ನೌಕರರು ಇಎಫ್‌ಎಸ್‌ನ ಮೂಲಕ ನೇರವಾಗಿ 11 ಸಾವಿರ ಮೇಲೆ ವೇತನ ಪಡೆಯುತ್ತಿದ್ದಾರೆ. ಇನ್ನು ಬಹುತೇಕ ಗ್ರಾಪಂ ನೌಕರರು ಈಗಲೂ ಇಎಫ್‌ಎಸ್‌ ಸೌಲಭ್ಯವಿಲ್ಲದೆ ಕನಿಷ್ಠ ವೇತನ ಪಡೆಯುತ್ತಿದ್ದಾರೆ ಎಂದು ವಿಷಾದಿಸಿದರು.

ಸಿಐಟಿಯು ತಾಲೂಕು ಅಧ್ಯಕ್ಷ ಬಿ.ಆಂಜನೇಯರೆಡ್ಡಿ ಮಾತನಾಡಿ, ತಾಲೂಕಿನಲ್ಲಿ 534 ಗ್ರಾಪಂ ನೌಕರರಿದ್ದಾರೆ. ಆದರೆ ಸಮ್ಮೇಳನ ಇದೆ ಎಂದು ತಿಳಿದರೂ ಕೇವಲ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದಾರೆ. ನಿಮ್ಮ ವೇತನ ಹೆಚ್ಚಿಸಲು ಕೆಂಬಾವುಟ ಬೇಕು, ನಿಮ್ಮ ಏನೇ ಸಮಸ್ಯೆಗಳಿಗೆ ನಾವಿರಬೇಕು. ಆದರೆ ಸಮ್ಮೇಳನಕ್ಕೆ ಬರಲು ಏಕೆ ಮೀನಾ ಮೇಷ ಎಣಿಸುತ್ತಿದ್ದೀರಾ, ನಿಮಗೆ ಸಂಘಟನಾತ್ಮಕವಾಗಿ ನಿಮಗೆ ಜವಾಬ್ದಾರಿ ಇಲ್ಲವೆ, ಗ್ರಾಪಂ ನೌಕರರ ಸಂಘಟನೆಯ ಸದಸ್ಯತ್ವಕ್ಕೆ ಕೇವಲ 100 ರೂ. ಕೊಡಿ ಎಂದು ಕೇಳಿದರೆ ಕೊಡಲ್ಲ. ಆದರೆ ನಿಮ್ಮ ವೇತನದ ಸಂಬಂಧಪಟ್ಟಂತೆ ದಾಖಲೆಗಳಿಗೆ ಸಾವಿರ ಗಟ್ಟಲೆ ಲಂಚ ನೀಡುತ್ತೀರಾ, ಇದೇನಾ ಸಂಘಟನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪಾಪಣ್ಣ, ಸಿಐಟಿಯು ರಾಜ್ಯ ಮುಖಂಡ ಮುಸ್ತಾಫ, ಗ್ರಾಪಂ ನೌಕರರ ತಾಲೂಕು ಅಧ್ಯಕ್ಷ ವೆಂಕಟರಾಮಯ್ಯ, ಈಶ್ವರಪ್ಪ ಸೇರಿದಂತೆ ಗ್ರಾಪಂ ನೌಕರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ