ಆ್ಯಪ್ನಗರ

ರಸ್ತೆಯೇ ಇಲ್ಲಿ ಪಾದಚಾರಿ ಮಾರ್ಗಗಳು!

ನಗರದ ಬಿ.ಬಿ ರಸ್ತೆ, ಬಜಾರ್‌ ರಸ್ತೆ, ಗಂಗಮ್ಮ ಗುಡಿ ರಸ್ತೆ, ಎಂಜಿ ರಸ್ತೆ, ತಾಲೂಕು ಕಚೇರಿ ಮುಂಭಾಗ, ಸರಕಾರಿ ಆಸ್ಪತ್ರೆ ರಸ್ತೆ, ಕೆಎಸ್‌ಆರ್‌ಟಿಸಿ ಗ್ಯಾರೇಜ್‌ ರಸ್ತೆ, ಪ್ರಶಾಂತ್‌ ನಗರ, ಕೃಷ್ಣ ಟಾಕೀಸ್‌ ಮುಂಭಾಗದ ರಸ್ತೆ, ಎಚ್‌.ಎಸ್‌.ಗಾರ್ಡನ್‌, ನಂದಿ, ಗರ್ಲ್ಸ್ ಸ್ಕೂಲ್‌ ರಸ್ತೆ ಇಂತಹ ಮುಖ್ಯ ರಸ್ತೆಗಳಲ್ಲಿ ಎಲ್ಲಿಯೂ ಪಾದಚಾರಿಗಳಿಗೆ ಅಡೆತಡೆಗಳಿಲ್ಲದೆ ನಡೆದಾಡುವ ಸ್ಥಿತಿ ಇಲ್ಲ. ಇನ್ನೂ ಒಳಭಾಗದ ರಸ್ತೆಗಳ ಪಾಡಂತೂ ಹೇಳತೀರದಷ್ಟು ಕೆಟ್ಟದಾಗಿವೆ.

Vijaya Karnataka 26 Jul 2019, 5:00 am
ರಸ್ತೆಯೇ ಇಲ್ಲಿ ಪಾದಚಾರಿ ಮಾರ್ಗಗಳು!
Vijaya Karnataka Web
ರಸ್ತೆಯೇ ಇಲ್ಲಿ ಪಾದಚಾರಿ ಮಾರ್ಗಗಳು!


ಕೆಂಪೇಗೌಡ ಎನ್‌.ವೆಂಕಟೇನಹಳ್ಳಿ ಚಿಕ್ಕಬಳ್ಳಾಪುರ


ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 11 ವರ್ಷ ಕಳೆದರೂ ಜಿಲ್ಲಾ ಕೇಂದ್ರದಲ್ಲಿ ಸರಿಯಾದ ಪಾದಚಾರಿ ಮಾರ್ಗಗಳೇ ಇಲ್ಲ!

ನಗರದ ಬಿ.ಬಿ ರಸ್ತೆ, ಬಜಾರ್‌ ರಸ್ತೆ, ಗಂಗಮ್ಮ ಗುಡಿ ರಸ್ತೆ, ಎಂಜಿ ರಸ್ತೆ, ತಾಲೂಕು ಕಚೇರಿ ಮುಂಭಾಗ, ಸರಕಾರಿ ಆಸ್ಪತ್ರೆ ರಸ್ತೆ, ಕೆಎಸ್‌ಆರ್‌ಟಿಸಿ ಗ್ಯಾರೇಜ್‌ ರಸ್ತೆ, ಪ್ರಶಾಂತ್‌ ನಗರ, ಕೃಷ್ಣ ಟಾಕೀಸ್‌ ಮುಂಭಾಗದ ರಸ್ತೆ, ಎಚ್‌.ಎಸ್‌.ಗಾರ್ಡನ್‌, ನಂದಿ, ಗರ್ಲ್ಸ್ ಸ್ಕೂಲ್‌ ರಸ್ತೆ ಇಂತಹ ಮುಖ್ಯ ರಸ್ತೆಗಳಲ್ಲಿ ಎಲ್ಲಿಯೂ ಪಾದಚಾರಿಗಳಿಗೆ ಅಡೆತಡೆಗಳಿಲ್ಲದೆ ನಡೆದಾಡುವ ಸ್ಥಿತಿ ಇಲ್ಲ. ಇನ್ನೂ ಒಳಭಾಗದ ರಸ್ತೆಗಳ ಪಾಡಂತೂ ಹೇಳತೀರದಷ್ಟು ಕೆಟ್ಟದಾಗಿವೆ. ಸಂಚಾರ ಪೊಲೀಸರಂತೂ ಪಾದಚಾರಿ ಮಾರ್ಗಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಳಲು.

ಎಲ್ಲೆಂದರಲ್ಲಿ ಪಾರ್ಕಿಂಗ್‌: ನಗರದ ಬಹುತೇಕ ಚರಂಡಿ ಮಾರ್ಗಗಳನ್ನು ಇಂದಿಗೂ ಮುಚ್ಚದೇ ಹಾಗೇ ಬಿಟ್ಟಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದೆ. ದ್ವಿಮುಖ ಸಂಚಾರ ವ್ಯವಸ್ಥೆ ಇರುವ ರಸ್ತೆಗಳಲ್ಲಂತೂ ಎರಡೂ ಕಡೆಗಳಿಂದ ವಾಹನಗಳು ಬಂದು ದಟ್ಟಣೆಯಾದರೆ ಪಾದಚಾರಿಗಳು ಪರದಾಡುವಂತಾಗುತ್ತದೆ. ಅನೇಕ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಜನರು ಪ್ರಾಣ ಭಯದಿಂದ ನಡೆದಾಡುವಂತಾಗಿದೆ.

ಸಿಗ್ನಲ್‌ನಲ್ಲಿ ಮೈ ಮರೆತರೆ ಬಲಿ!: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸುತ್ತ ಸಹ ಫುಟ್‌ಪಾತ್‌ ಎಲ್ಲಿದೆ ಎಂದು ಹುಡುಕಾಡಬೇಕಾದ ಸ್ಥಿತಿ ಇದೆ. ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಇಲ್ಲಿ ಪಾದಚಾರಿಗಳು ಸ್ವಲ್ಪ ಮೈ ಮರೆತರೂ ಅಪಘಾತಕ್ಕೆ ಒಳಗಾಗುವ ಸ್ಥಿತಿ ಇದೆ. ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಮುಂಭಾಗದಲ್ಲಿ ಜನರು ವೇಗದಿಂದ ಬರುವ ವಾಹನಗಳ ಪಕ್ಕವೇ ರಸ್ತೆಯಲ್ಲಿಯೇ ಹೆಜ್ಜೆ ಹಾಕಬೇಕಿದೆ.

ಸುರಕ್ಷ ತೆ ನಿರ್ಲಕ್ಷ ್ಯ: ಸುತ್ತಲಿನ ಹಳ್ಳಿಗಳಿಂದ ನಗರಕ್ಕೆ ಬರುವ ರೈತರು, ವಿದ್ಯಾರ್ಥಿಗಳು ಅಧಿಕವಾಗಿ ಓಡಾಡುವ ಈ ಪ್ರದೇಶದಲ್ಲಿ ಪಾದಚಾರಿಗಳ ಸುರಕ್ಷ ತೆ ನಿರ್ಲಕ್ಷ ್ಯಕ್ಕೆ ಒಳಗಾಗಿದೆ. ಇನ್ನು ಜಿಲ್ಲಾಡಳಿತವೇ ನೆಲೆಗೊಂಡಿರುವ ಶಿಡ್ಲಘಟ್ಟ ರಸ್ತೆಯ ಅವ್ಯವಸ್ಥೆಯಂತೂ ಬಣ್ಣಿಸಲಾಗದಷ್ಟು ಕೆಟ್ಟು ಹೋಗಿದೆ.

ವರ್ತಕರಿಂದ ಒತ್ತುವರಿ: ನಗರದ ಬಹುಪಾಲು ವಾಣಿಜ್ಯ ಚಟುವಟಿಕೆಯುಳ್ಳ ರಸ್ತೆಗಳ ಪಾದಚಾರಿ ಮಾರ್ಗಗಳು ವರ್ತಕರು, ತಳ್ಳುಗಾಡಿಯವರಿಂದ ಒತ್ತುವರಿಯಾಗಿವೆ. ಕೆಲವಡೆಯಂತೂ ಏಕಮುಖ ಸಂಚಾರ ವ್ಯವಸ್ಥೆ ಸಮರ್ಪಕ ರೀತಿಯಲ್ಲಿ ಜಾರಿಗೆ ಬಂದಿಲ್ಲ. ಇದರಿಂದಾಗಿ ಪಾದಚಾರಿ ಮಾರ್ಗದ ಸಮಸ್ಯೆ ಉಲ್ಬಣಗೊಂಡಿದೆ.

ಮರದ ಬುಡಗಳ ಕಾಟ: ಇನ್ನೂ ಎಂ.ಜಿ ರಸ್ತೆಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಎಪಿಎಂಸಿ ಮಾರುಕಟ್ಟೆ ಇರುವುದರಿಂದ ಜನದಟ್ಟಣೆ ಸದಾ ಇರುತ್ತದೆ. ಇಲ್ಲಿ ರಸ್ತೆ ಬದಿಯಲ್ಲಿಯೇ 20ಕ್ಕೂ ಹೆಚ್ಚು ಮರದ ಬುಡಗಳನ್ನು ತೆರವುಗೊಳಿಸದೇ ಬಿಟ್ಟಿರುವುದರಿಂದ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗಿದೆ. ಇನ್ನಾದರೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂಬುದು ನಾಗರಿಕರ ಆಗ್ರಹ.

ಎಂಜಿ ರಸ್ತೆ, ಬಜಾರ್‌ ರಸ್ತೆ ತೆರವು ಯಾವಾಗ?

ಇತ್ತೀಚೆಗೆ ಬಿಬಿ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದ್ದ ಅಂಗಡಿಗಳನ್ನು ತೆರವುಗೊಳಿಸಿರುವ ನಗರಸಭೆ, ಅದೇ ಮಾದರಿಯಲ್ಲಿ ನಗರದ ಗಂಗಮ್ಮನಗುಡಿ ರಸ್ತೆ, ಬಜಾರ್‌ ರಸ್ತೆ ಮತ್ತು ಎಂಜಿ ರಸ್ತೆಗಳಲ್ಲಿ ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ತೆಗೆದಿರುವವರನ್ನೂ ತೆರವುಗೊಳಿಸುವ ಕಾರ್ಯ ಮುಂದುವರಿಸುವಂತೆ ನಾಗರಿಕರು ಮನವಿ ಮಾಡಿದ್ದಾರೆ.

ಎಂಜಿ ರಸ್ತೆಯ ಇಕ್ಕೆಲಗಳಲ್ಲಿ ಹಳೇ ಸೋಫ, ಕೋಳಿ ಮರಿ, ಗಿಡಗಳ ಮಾರಾಟ ಸೇರಿದಂತೆ ಇತರೆ ವ್ಯಾಪಾರಿಗಳು ರಸ್ತೆ ಆಕ್ರಮಿಸಿಕೊಂಡಿರುವುದು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ. ನಗರದಲ್ಲಿ ಕಿರಿದಾಗಿರುವ ಬಜಾರ್‌ ರಸ್ತೆ ಬಹುತೇಕ ಫುಟ್‌ಪಾತ್‌ ವ್ಯಾಪಾರಿಗಳ ಪಾಲಾಗಿದೆ. ಇದರಿಂದಾಗಿ ವಾಹನಗಳಿರಲಿ, ಜನರ ಓಡಾಟಕ್ಕೂ ಸಮಸ್ಯೆ ಆಗಿದ್ದು, ಈ ರಸ್ತೆಯ ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಬೇಕೆಂದು ನಾಗರಿಕರ ಒತ್ತಾಯ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದ ಮುಂಭಾಗದಲ್ಲಿದ್ದ ಎಲ್ಲ ಫುಟ್‌ಪಾತ್‌ ಅಂಗಡಿಗಳನ್ನೂ ಇತ್ತೀಚೆಗೆ ತೆರವುಗೊಳಿಸಲಾಗಿದೆ. ಅದೇ ರೀತಿ ಎಂಜಿ ರಸ್ತೆಯ ಫುಟ್‌ಪಾತ್‌ ಆಕ್ರಮಿಸಿಕೊಂಡಿರುವ ಅಂಗಡಿಗಳನ್ನೂ ಶೀಘ್ರದಲ್ಲಿಯೇ ತೆರವುಗೊಳಿಸುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಲಾಗುವುದು.
-ಉಮಾಕಾಂತ್‌ | ನಗರಸಭೆ ಪೌರಾಯುಕ್ತ, ಚಿಕ್ಕಬಳ್ಳಾಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ