ಯೋಜನೆಗಳಿಗೆ ಮಧ್ಯವರ್ತಿಗಳೇ ಆಧಾರ | ಕಮಿಷನ್ ಇದ್ದರಷ್ಟೇ ಸೌಲಭ್ಯ | ಪ್ರಭಾವಿಗಳ ಹಿಡಿತದಲ್ಲೇ ಸಾಲ
ಎಂ.ಕೃಷ್ಣಪ್ಪ ಕೆಎನ್ಹಳ್ಳಿ
ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಸಮುದಾಯಗಳ ಉನ್ನತೀಕರಣಕ್ಕೆ ಸರಕಾರ ಜಾರಿಗೊಳಿಸಿರುವ ಅನೇಕ ಯೋಜನೆಗಳಿಗೆ ಕಮಿಷನ್ ದಂಧೆ ಅಡ್ಡಗಾಲು ಹಾಕಿದೆ. ಮಧ್ಯವರ್ತಿಗಳು ಇದ್ದರಷ್ಟೇ ಯೋಜನೆಗಳ ಲಾಭ ಎನ್ನುವಂತ ಪರಿಸ್ಥಿತಿ ಇದೆ..!
ಸಮಾಜದಲ್ಲಿ ತೀರಾ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆಗೆ ಒಂದೆಡೆ ಏಜೆಂಟರ್ಗಳೇ ಕೊಕ್ಕೆ ಹಾಕುತ್ತಿದ್ದಾರೆ. ಇನ್ನೊಂದೆಡೆ ಸೌಲಭ್ಯ ಪಡೆದಿರುವ ಪ್ರಭಾವಿಗಳೇ ಅಧಿಕಾರಿಗಳಿಗೆ ಒತ್ತಡ ತಂದು ತಮಗೆ ಬೇಕಾದವರಿಗೆ ಸೌಲಭ್ಯ ನೀಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ.
ಮಧ್ಯವರ್ತಿಗಳಿಗಿಲ್ಲ ಅಡೆ-ತಡೆ
ಪರಿಶಿಷ್ಟ ವರ್ಗದವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮಹಾಗೂ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ವಾಲ್ಮೀಕಿ ಅಭಿವೃದ್ಧಿ ಇಲಾಖೆಯು ಸಾಲ ಸೌಲಭ್ಯಗಳನ್ನು ನೀಡಲಿದೆ. ಎರಡು ಇಲಾಖೆಗಳಿಂದ ನೇರ ಸಾಲ, ಸ್ವಯಂ ಉದ್ಯೋಗ, ಕಿರು ಸಾಲ, ಉದ್ಯಮ ಶೀಲತಾ ಸಾಲ, ಗಂಗ ಕಲ್ಯಾಣ, ಮಹಿಳಾ ಸಮೃದ್ಧಿ ಯೋಜನೆಯಡಿ ಕನಿಷ್ಟ 25 ಸಾವಿರದಿಂದ 5 ಲಕ್ಷದ ವರೆಗೂ ಸಾಲ ಸೌಲಭ್ಯ ನೀಡಲಿದೆ. ಆದರೆ, ಈ ಸಾಲಗಳನ್ನು ಪಡೆಯುವ ಫಲಾನುಭವಿಗಳಿಗೆ ಪ್ರಭಾವಿಗಳ ಕೃಪಾಕಟಾಕ್ಷ ಇಲ್ಲವಾದಲ್ಲಿ ಸಾಲ ಪಡೆಯುವುದು ಕನಸಿನ ಮಾತು.
ಇನ್ನು ಪ್ರಭಾವಿಗಳ ಹೆಸರಿಲ್ಲದೇ, ಮಧ್ಯವರ್ತಿಗಳ ಮೂಲಕವೇ ಸಾಲ ಪಡೆಯಬೇಕು. ಇಲ್ಲವಾದಲ್ಲಿ ತಿಂಗಳಾನುಗಟ್ಟಲೇ ಇಲಾಖೆಗಳ ಮೆಟ್ಟಿಲು ಹತ್ತಬೇಕು ಎಂಬ ಆರೋಪಕ್ಕೆ ಹೆದರುವ ಫಲಾನುಭವಿಗಳು ಏಜೆಂಟರ ಮೂಲಕ ಸಾಲ ಸೌಲಭ್ಯ ಪಡೆಯುತ್ತಿರುವುದು ಬಹಿರಂಗ ಸತ್ಯ. ಆದರೆ, ಸಾಲ ಪಡೆದ ಹಣಕ್ಕೆ ತಕ್ಕಂತೆ ಕಮಿಷನ್ ನೀಡಬೇಕು ಎಂಬ ಷರತ್ತು ಫಲಾನುಭವಿಗಳ ಜೀವ ತೆಗೆಯುತ್ತಿದೆ.
ಉದಾಹರಣೆಗೆ 1 ಲಕ್ಷ ಸಾಲ ದೊರೆತರೆ, 25ರಿಂದ 30 ಸಾವಿರಗಳವರೆಗೂ ಕಮಿಷನ್ ನೀಡಬೇಕು. 50 ಸಾವಿರದ ಸಾಲಕ್ಕೆ ಕನಿಷ್ಟ 10ರಿಂದ 15 ಸಾವಿರ ರೂ.ಗಳವರೆಗೂ ಕಮಿಷನ್ ನೀಡಬೇಕು. ಪಡೆದ ಸಾಲದಲ್ಲಿ ಶೇ.25ರಷ್ಟು ಹಣವನ್ನು ಮಧ್ಯವರ್ತಿಗಳೇ ನುಂಗಿ ನೀರು ಕುಡಿಯುತ್ತಿದ್ದಾರೆ.
ಪ್ರಭಾವಿಗಳ ಒತ್ತಡಕ್ಕೆ ಸಾಲ !
ನಾವು ಎಂಎಲ್ಎ ಕಡೆಯವರು, ಸಂಸದರ ಬೆಂಲಿಗರು ಎಂದು ಹೇಳಿಕೊಂಡು ಬರುವ ಕೆಲ ಪ್ರಭಾವಿಗಳು ಬೊಟ್ಟು ಮಾಡಿದವರಿಗೆ ಮಾತ್ರವೇ ಸಾಲ ಸೌಲಭ್ಯ ದೊರೆಯುತ್ತಿದೆ ಎಂಬ ಆರೋಪ ಫಲಾನುಭವಿಗಳಿಂದ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಅಸಹಾಯಕರಾಗಿರುವುದು ಸರಕಾರದ ಯೋಜನೆಗಳ ಉದ್ದೇಶವನ್ನೇ ಬದಲಿಸಿದೆ. ಹೀಗಾಗಿ ಸರಕಾರದ ಸೌಲಭ್ಯ ಕೆಲವರಿಗಷ್ಟೆ ಸೀಮಿತವಾಗಿದೆ. ಇನ್ನೊಂದೆಡೆ ಇಲಾಖೆಗಳು ಬಿಡುಗಡೆ ಮಾಡುವ ಸಾಲದ ಮೊತ್ತವನ್ನೇ ಮಧ್ಯವರ್ತಿಗಳು ನುಂಗಿ ನೀರು ಕುಡಿದರೆ, ಸಬ್ಸಿಡಿ ಹಣ ಬಿಡುಗಡೆಗೊಂಡ ಬಳಿಕವಷ್ಟೆ ಅರ್ಹ ಫಲಾನುಭವಿಗಳು ನೆಮ್ಮದ್ದಿಯ ನಿಟ್ಟುಸಿರು ಬಿಡಬೇಕು. ಇನ್ನು ತಿಂಗಳಾದರೆ, ಸಾಲದ ಕಂತು ತೀರಸಲು ಮತ್ತೆ ಇದೇ ಮಧ್ಯವರ್ತಿಗಳಿಂದಲೇ ಬಡ್ಡಿಗೆ ಸಾಲ ತರಬೇಕಾದ ಅನಿವಾರ್ಯತೆ ಎದುರಾಗಿರುವುದು ವಿರ್ಪಯಾಸ.
ನಿಗಮದಿಂದ ಪಡೆಯುವ ಸಾಲದಲ್ಲಿ ಶೇ.25ರಿಂದ 30ರಷ್ಟು ಮದ್ಯವರ್ತಿಗಳಿಗೆ ನೀಡಬೇಕು. ಪಡೆದ ಸಾಲದಲ್ಲಿ ಯಾವುದೇ ಸೌಲಭ್ಯವನ್ನೂ ಪಡೆದುಕೊಳ್ಳಲು ಆಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅರ್ಹ ಫಲಾನುಭವಿಗಳಿಗೆ ಅವಕಾಶ ನೀಡಬೇಕು.
-ರಂಗನಾಥ್, ದಿನ್ನೂರು ಗ್ರಾಮ
ಪ್ರಸಕ್ತ ಸಾಲಿನಿಂದ ಎಲ್ಲವನ್ನೂ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಈ ಸಮಸ್ಯೆ ಇದ್ದರೂ, ನಮ್ಮ ಗಮನಕ್ಕೆ ಯಾವುದೇ ದೂರುಗಳು ಬಂದಿಲ್ಲ. ದೂರು ಬಂದರೆ ಖಂಡಿತಾ ಕ್ರಮ ವಹಿಸಲಾಗುವುದು.
-ಪ್ರ್ಯಾನ್ಸಿಸ್, ಜಿಲ್ಲಾ ವ್ಯವಸ್ಥಾಪಕ, ಅಂಬೇಡ್ಕರ್ ಅಭಿವೃದ್ದಿ ಇಲಾಖೆ
ಎಂ.ಕೃಷ್ಣಪ್ಪ ಕೆಎನ್ಹಳ್ಳಿ
ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಸಮುದಾಯಗಳ ಉನ್ನತೀಕರಣಕ್ಕೆ ಸರಕಾರ ಜಾರಿಗೊಳಿಸಿರುವ ಅನೇಕ ಯೋಜನೆಗಳಿಗೆ ಕಮಿಷನ್ ದಂಧೆ ಅಡ್ಡಗಾಲು ಹಾಕಿದೆ. ಮಧ್ಯವರ್ತಿಗಳು ಇದ್ದರಷ್ಟೇ ಯೋಜನೆಗಳ ಲಾಭ ಎನ್ನುವಂತ ಪರಿಸ್ಥಿತಿ ಇದೆ..!
ಸಮಾಜದಲ್ಲಿ ತೀರಾ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆಗೆ ಒಂದೆಡೆ ಏಜೆಂಟರ್ಗಳೇ ಕೊಕ್ಕೆ ಹಾಕುತ್ತಿದ್ದಾರೆ. ಇನ್ನೊಂದೆಡೆ ಸೌಲಭ್ಯ ಪಡೆದಿರುವ ಪ್ರಭಾವಿಗಳೇ ಅಧಿಕಾರಿಗಳಿಗೆ ಒತ್ತಡ ತಂದು ತಮಗೆ ಬೇಕಾದವರಿಗೆ ಸೌಲಭ್ಯ ನೀಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ.
ಮಧ್ಯವರ್ತಿಗಳಿಗಿಲ್ಲ ಅಡೆ-ತಡೆ
ಪರಿಶಿಷ್ಟ ವರ್ಗದವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮಹಾಗೂ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ವಾಲ್ಮೀಕಿ ಅಭಿವೃದ್ಧಿ ಇಲಾಖೆಯು ಸಾಲ ಸೌಲಭ್ಯಗಳನ್ನು ನೀಡಲಿದೆ. ಎರಡು ಇಲಾಖೆಗಳಿಂದ ನೇರ ಸಾಲ, ಸ್ವಯಂ ಉದ್ಯೋಗ, ಕಿರು ಸಾಲ, ಉದ್ಯಮ ಶೀಲತಾ ಸಾಲ, ಗಂಗ ಕಲ್ಯಾಣ, ಮಹಿಳಾ ಸಮೃದ್ಧಿ ಯೋಜನೆಯಡಿ ಕನಿಷ್ಟ 25 ಸಾವಿರದಿಂದ 5 ಲಕ್ಷದ ವರೆಗೂ ಸಾಲ ಸೌಲಭ್ಯ ನೀಡಲಿದೆ. ಆದರೆ, ಈ ಸಾಲಗಳನ್ನು ಪಡೆಯುವ ಫಲಾನುಭವಿಗಳಿಗೆ ಪ್ರಭಾವಿಗಳ ಕೃಪಾಕಟಾಕ್ಷ ಇಲ್ಲವಾದಲ್ಲಿ ಸಾಲ ಪಡೆಯುವುದು ಕನಸಿನ ಮಾತು.
ಇನ್ನು ಪ್ರಭಾವಿಗಳ ಹೆಸರಿಲ್ಲದೇ, ಮಧ್ಯವರ್ತಿಗಳ ಮೂಲಕವೇ ಸಾಲ ಪಡೆಯಬೇಕು. ಇಲ್ಲವಾದಲ್ಲಿ ತಿಂಗಳಾನುಗಟ್ಟಲೇ ಇಲಾಖೆಗಳ ಮೆಟ್ಟಿಲು ಹತ್ತಬೇಕು ಎಂಬ ಆರೋಪಕ್ಕೆ ಹೆದರುವ ಫಲಾನುಭವಿಗಳು ಏಜೆಂಟರ ಮೂಲಕ ಸಾಲ ಸೌಲಭ್ಯ ಪಡೆಯುತ್ತಿರುವುದು ಬಹಿರಂಗ ಸತ್ಯ. ಆದರೆ, ಸಾಲ ಪಡೆದ ಹಣಕ್ಕೆ ತಕ್ಕಂತೆ ಕಮಿಷನ್ ನೀಡಬೇಕು ಎಂಬ ಷರತ್ತು ಫಲಾನುಭವಿಗಳ ಜೀವ ತೆಗೆಯುತ್ತಿದೆ.
ಉದಾಹರಣೆಗೆ 1 ಲಕ್ಷ ಸಾಲ ದೊರೆತರೆ, 25ರಿಂದ 30 ಸಾವಿರಗಳವರೆಗೂ ಕಮಿಷನ್ ನೀಡಬೇಕು. 50 ಸಾವಿರದ ಸಾಲಕ್ಕೆ ಕನಿಷ್ಟ 10ರಿಂದ 15 ಸಾವಿರ ರೂ.ಗಳವರೆಗೂ ಕಮಿಷನ್ ನೀಡಬೇಕು. ಪಡೆದ ಸಾಲದಲ್ಲಿ ಶೇ.25ರಷ್ಟು ಹಣವನ್ನು ಮಧ್ಯವರ್ತಿಗಳೇ ನುಂಗಿ ನೀರು ಕುಡಿಯುತ್ತಿದ್ದಾರೆ.
ಪ್ರಭಾವಿಗಳ ಒತ್ತಡಕ್ಕೆ ಸಾಲ !
ನಾವು ಎಂಎಲ್ಎ ಕಡೆಯವರು, ಸಂಸದರ ಬೆಂಲಿಗರು ಎಂದು ಹೇಳಿಕೊಂಡು ಬರುವ ಕೆಲ ಪ್ರಭಾವಿಗಳು ಬೊಟ್ಟು ಮಾಡಿದವರಿಗೆ ಮಾತ್ರವೇ ಸಾಲ ಸೌಲಭ್ಯ ದೊರೆಯುತ್ತಿದೆ ಎಂಬ ಆರೋಪ ಫಲಾನುಭವಿಗಳಿಂದ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಅಸಹಾಯಕರಾಗಿರುವುದು ಸರಕಾರದ ಯೋಜನೆಗಳ ಉದ್ದೇಶವನ್ನೇ ಬದಲಿಸಿದೆ. ಹೀಗಾಗಿ ಸರಕಾರದ ಸೌಲಭ್ಯ ಕೆಲವರಿಗಷ್ಟೆ ಸೀಮಿತವಾಗಿದೆ. ಇನ್ನೊಂದೆಡೆ ಇಲಾಖೆಗಳು ಬಿಡುಗಡೆ ಮಾಡುವ ಸಾಲದ ಮೊತ್ತವನ್ನೇ ಮಧ್ಯವರ್ತಿಗಳು ನುಂಗಿ ನೀರು ಕುಡಿದರೆ, ಸಬ್ಸಿಡಿ ಹಣ ಬಿಡುಗಡೆಗೊಂಡ ಬಳಿಕವಷ್ಟೆ ಅರ್ಹ ಫಲಾನುಭವಿಗಳು ನೆಮ್ಮದ್ದಿಯ ನಿಟ್ಟುಸಿರು ಬಿಡಬೇಕು. ಇನ್ನು ತಿಂಗಳಾದರೆ, ಸಾಲದ ಕಂತು ತೀರಸಲು ಮತ್ತೆ ಇದೇ ಮಧ್ಯವರ್ತಿಗಳಿಂದಲೇ ಬಡ್ಡಿಗೆ ಸಾಲ ತರಬೇಕಾದ ಅನಿವಾರ್ಯತೆ ಎದುರಾಗಿರುವುದು ವಿರ್ಪಯಾಸ.
ನಿಗಮದಿಂದ ಪಡೆಯುವ ಸಾಲದಲ್ಲಿ ಶೇ.25ರಿಂದ 30ರಷ್ಟು ಮದ್ಯವರ್ತಿಗಳಿಗೆ ನೀಡಬೇಕು. ಪಡೆದ ಸಾಲದಲ್ಲಿ ಯಾವುದೇ ಸೌಲಭ್ಯವನ್ನೂ ಪಡೆದುಕೊಳ್ಳಲು ಆಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅರ್ಹ ಫಲಾನುಭವಿಗಳಿಗೆ ಅವಕಾಶ ನೀಡಬೇಕು.
-ರಂಗನಾಥ್, ದಿನ್ನೂರು ಗ್ರಾಮ
ಪ್ರಸಕ್ತ ಸಾಲಿನಿಂದ ಎಲ್ಲವನ್ನೂ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಈ ಸಮಸ್ಯೆ ಇದ್ದರೂ, ನಮ್ಮ ಗಮನಕ್ಕೆ ಯಾವುದೇ ದೂರುಗಳು ಬಂದಿಲ್ಲ. ದೂರು ಬಂದರೆ ಖಂಡಿತಾ ಕ್ರಮ ವಹಿಸಲಾಗುವುದು.
-ಪ್ರ್ಯಾನ್ಸಿಸ್, ಜಿಲ್ಲಾ ವ್ಯವಸ್ಥಾಪಕ, ಅಂಬೇಡ್ಕರ್ ಅಭಿವೃದ್ದಿ ಇಲಾಖೆ