ಆ್ಯಪ್ನಗರ

ಭಕ್ತರನ್ನು ಸೆಳೆಯುವ ಅಯ್ಯಪ್ಪಸ್ವಾಮಿ

ತಾಲೂಕಿನ ಯಗವಕೋಟೆ ರಸ್ತೆಯ ಬೆಟ್ಟದ ತಪ್ಪಲಿನಲ್ಲಿಮನಮೋಹಕ ಪರಿಸರದಲ್ಲಿಪ್ರತಿಷ್ಠಾಪಿಸಿವ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾಪನೆಯಾದ ಮೂರೇ ವರ್ಷಗಳಲ್ಲಿಅಪಾರ ಭಕ್ತರನ್ನು ಸೆಳೆಯುತ್ತಿದೆ.

Vijaya Karnataka 27 Aug 2019, 5:00 am
ಪ್ರಕೃತಿ ಮಡಿಲಲ್ಲಿರುವ ಸ್ವಾಮಿಯ ದರ್ಶನಕ್ಕೆ ಭಕ್ರ ದಂಡು | ಪ್ರತಿ ಶನಿವಾರ ವಿಶೇಷ ಪೂಜೆ
Vijaya Karnataka Web 26cmyv2_10

ಡಿ.ಎನ್‌.ವೆಂಕಟೇಶ
ಚಿಂತಾಮಣಿ ಗ್ರಾ.:
ತಾಲೂಕಿನ ಯಗವಕೋಟೆ ರಸ್ತೆಯ ಬೆಟ್ಟದ ತಪ್ಪಲಿನಲ್ಲಿಮನಮೋಹಕ ಪರಿಸರದಲ್ಲಿಪ್ರತಿಷ್ಠಾಪಿಸಿವ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾಪನೆಯಾದ ಮೂರೇ ವರ್ಷಗಳಲ್ಲಿಅಪಾರ ಭಕ್ತರನ್ನು ಸೆಳೆಯುತ್ತಿದೆ.

ಪ್ರತಿ ಶನಿವಾರ ವಿಶೇಷ ಪೂಜೆ: ಮುರಗಮಲ್ಲಾದ ಮತ್ತೊಂದು ಪ್ರಸಿದ್ಧ ಹಿಂದೂ ಧಾರ್ಮಿಕ ಕೇಂದ್ರವಾಗಿರುವ ಮುಕ್ತೀಶ್ವರ ದೇವಾಲಯದ ಕೆಳಭಾಗದಲ್ಲಿರುವ ಈ ದೇವಾಲಯವು ಕೇವಲ ಶ್ರಾವಣ ಮಾಸದಲ್ಲಿಮಾತ್ರವಲ್ಲ, ಪ್ರತಿ ಶನಿವಾರವೂ ಇಲ್ಲಿವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶ್ರಾವಣ ಶನಿವಾರ ಮತ್ತು ಕಾರ್ತೀಕ ಮಾಸದಲ್ಲೂಅಪಾರ ಭಕ್ತರು ಆಗಮಿಸಿ ಪೂಜಿಸುತ್ತಾರೆ.

ಅಗಸ್ತತ್ರ್ಯ ಮುನಿಗಳ ತಪಸ್ಸು: ಇನ್ನು ಈ ಕ್ಷೇತ್ರದಲ್ಲಿಮಹಾಭಾರತದ ಅಗಸ್ತ್ಯ ಮುನಿಗಳು ತಪಸ್ಸು ಮಾಡಿ ಸಿದ್ಧಿ ಪಡೆದ ಬೆಟ್ಟವೆಂಬ ಕಾರಣಕ್ಕೆ ಇದನ್ನು ಸಿದ್ಧ್ದಕ್ಷೇತ್ರ ಎಂದು ಕರೆಯುತ್ತಾರೆ. ಇಲ್ಲಿಮೊದಲಿಗೆ ಆಂಜನೇಯಸ್ವಾಮಿ ದೇವಾಲಯ ಪ್ರತಿಷ್ಠಾಪನೆಗೆ ಸಿದ್ದತೆಗಳು ನಡೆದಿದ್ದವು. ಆದರೆ ದೇವಾಲಯ ಸ್ಥಾಪನೆಯ ಪ್ರಮುಖ ರುವಾರಿ ಬಿ.ಆರ್‌.ಶಂಕರ್‌ ಕನಸಲ್ಲಿಶ್ರೀ ಅಯ್ಯಪ್ಪಸ್ವಾಮಿ ಬಂದು ನಾನು ಇಲ್ಲಿನೆಲೆಸಿರುವ ರೀತಿ ಕಂಡಾಗ, ಅವರು ಇಲ್ಲಿಸ್ವಾಮಿಯನ್ನು ಪ್ರತಿಷ್ಠಾಪಿಸಿದರು ಎನ್ನುತ್ತಾರೆ ದೇವಾಲಯದ ವ್ಯವಸ್ಥಾಪಕ ನಂಜುಡಪ್ಪ.

ಇಷ್ಟಾರ್ಥ ಸಿದ್ಧಿ: ಇನ್ನು ಕಡಿಮೆ ಅವಧಿಯಲ್ಲಿಈ ಕ್ಷೇತ್ರ ಇಷ್ಟೊಂದು ಭಕ್ತರನ್ನು ಸೆಳೆಯಲು ಕಾರಣ ಇಲ್ಲಿಗೆ ಬಂದ ಭಕ್ತರು ಅಯ್ಯಪ್ಪನಲ್ಲಿಕೇಳುವ ಹರಕೆಗಳು ಬೇಗ ಈಡೇರುತ್ತವೆ. ಆದ್ದರಿಂದ ಭಕ್ತರು ಇಲ್ಲಿಗೆ ಬಂದು ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಬರವಿಲ್ಲ: ಇನ್ನು ಈ ಕ್ಷೇತ್ರದಲ್ಲಿಸೋಮವಾರ ಮತ್ತು ಶನಿವಾರಗಳಲ್ಲಿವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಚಿಂತಾಮಣಿ ತಾಲೂಕು ಕೇಂದ್ರದಲ್ಲಿರುವ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಘಗಳು ಒಂದಿಲ್ಲಾಒಂದು ಕಾರ್ಯಕ್ರಮಗಳನ್ನು ಈ ದೇವಾಲಯದಲ್ಲಿಮಾಡುತ್ತಿರುತ್ತಾರೆ. ಅದಕ್ಕೆ ಬೇಕಾದ ಎಲ್ಲಾವ್ಯವಸ್ಥೆಗಳನ್ನು ದೇವಾಲಯದ ವತಿಯಿಂದ ಮಾಡಲಾಗುತ್ತದೆ.

ಒಟ್ಟಾರೆ ಚಿಂತಾಮಣಿ ತಾಲೂಕಿನ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿರು ಮುರಗಮಲ್ಲಾಬೆಟ್ಟದ ತಪ್ಪಲಿನಲ್ಲಿಇರುವ ಮುಕ್ತೀಶ್ವರ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯಗಳು ದಿನೇ ದಿನೇ ಭಕ್ತರನ್ನು ಆಕರ್ಷಿಸುತ್ತಿವೆ. ಒಂದು ದೇವಾಲಯಕ್ಕೆಂದು ಬರುವ ಭಕ್ತರು ಮತ್ತೊಂದು ದೇವಾಲಯವನ್ನು ದರ್ಶಿಸದೆ ಹೋಗರು. ಆದ್ದರಿಂದ ಶಿವ ಮತ್ತು ಅಯ್ಯಪ್ಪನ ದೇವಾಲಯಗಳು ಇಂದು ಪ್ರಮುಖ ಆಕರ್ಷಣೀಯ ಸ್ಥಳಗಳಾಗಿ ಪರಿವರ್ತನೆಯಾಗುತ್ತಿವೆ.

ಪ್ರತಿ ಶನಿವಾರವೂ ವಿಶೇಷ ಪೂಜೆ ನಡೆಯುತ್ತದೆ. ಆದರೆ ಶ್ರಾವಣ ಮಾಸದಲ್ಲಿಮತ್ತಷ್ಟು ವಿಶೇಷತೆಯಿಂದ ಕೂಡಿರುತ್ತದೆ. ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸುಂದರವಾದ ಪ್ರಕೃತಿಯ ಮಡಿಲಲ್ಲಿನೆಲೆಸಿರುವ ಅಯ್ಯಪ್ಪ ಸ್ವಾಮಿ ಭಕ್ತರ ಇಷ್ಟಾರ್ಥ ನೆರವೇಸುತ್ತಿದ್ದಾನೆ.
-ನಂಜುಂಡಪ್ಪ, ವ್ಯವಸ್ಥಾಪಕರು, ಅಯ್ಯಪ್ಪಸ್ವಾಮಿ ದೇವಾಲಯ, ಮುರಗಮಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ