ಆ್ಯಪ್ನಗರ

ನೆರೆ ಪರಿಹಾರಕ್ಕಿಂತ ಬಿಜೆಪಿ ಸರಕಾರ ಪ್ರಚಾರ ಪಡೆದಿದ್ದೇ ಹೆಚ್ಚು: ಶಿವಶಂಕರರೆಡ್ಡಿ

ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿಕೈಗೊಳ್ಳಬೇಕಾದ ಪುನರ್ವಸತಿಗೆ ಕೇಂದ್ರ ಸರಕಾರದಿಂದ ಅಗತ್ಯವಾದ ಪರಿಹಾರ ತರುವುದಕ್ಕಿಂತ ನೆರೆ ವಿಚಾರದಲ್ಲಿರಾಜ್ಯ ಬಿಜೆಪಿ ಸರಕಾರ ಪ್ರಚಾರ ಪಡೆದಿದ್ದೇ ಹೆಚ್ವು ಎಂದು ಮಾಜಿ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಟೀಕಿಸಿದರು.

Vijaya Karnataka 17 Sep 2019, 4:06 pm
ಚಿಕ್ಕಬಳ್ಳಾಪುರದಲ್ಲಿಮಾಜಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಟೀಕೆ
Vijaya Karnataka Web
ನೆರೆ ಪರಿಹಾರಕ್ಕಿಂತ ಬಿಜೆಪಿ ಸರಕಾರ ಪ್ರಚಾರ ಪಡೆದಿದ್ದೇ ಹೆಚ್ಚು: ಶಿವಶಂಕರರೆಡ್ಡಿ


ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ


ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿಕೈಗೊಳ್ಳಬೇಕಾದ ಪುನರ್ವಸತಿಗೆ ಕೇಂದ್ರ ಸರಕಾರದಿಂದ ಅಗತ್ಯವಾದ ಪರಿಹಾರ ತರುವುದಕ್ಕಿಂತ ನೆರೆ ವಿಚಾರದಲ್ಲಿರಾಜ್ಯ ಬಿಜೆಪಿ ಸರಕಾರ ಪ್ರಚಾರ ಪಡೆದಿದ್ದೇ ಹೆಚ್ವು ಎಂದು ಮಾಜಿ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಟೀಕಿಸಿದರು.

ನಗರದ ಹೊರವಲಯದ ಕೆವಿ ಕ್ಯಾಂಪಸ್‌ನ ಕೆವಿಟಿ ಪಾಲಿಟೆಕ್ನಿಕ್‌ ಮಹಾ ವಿದ್ಯಾಲಯದಲ್ಲಿಸೋಮವಾರ ಹಮ್ಮಿಕೊಂಡಿದ್ದ ಸರ್‌.ಎಂ.ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮದಲ್ಲಿಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರೇ ಹೇಳಿರುವಂತೆ ನೆರೆ ಹಾವಳಿಯಿಂದ 38 ಸಾವಿರ ಕೋಟಿ ನಷ್ಟ ಉಂಟಾಗಿದೆ. ನೆರೆ ಹಾವಳಿಯಿಂದ ಹಾನಿಗೀಡಾದ ಪ್ರದೇಶಗಳನ್ನು ಖುದ್ದು ಕೇಂದ್ರ ಸಚಿವರು ಸಮೀಕ್ಷೆ ನಡೆಸಿ ಹೆಚ್ಚಿನ ಪರಿಹಾರ ನೀಡುವುದಾಗಿ ಭರವಸೆ ನೀಡಿ ಹೋದರು. ಆದರೆ ಕೇಂದ್ರ ಸರಕಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ 3800 ಕೋಟಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ. ಆ ಮೂಲಕ ರಾಜ್ಯ ಸರಕಾರ ಸಲ್ಲಿಸಿದ್ದ ಪರಿಹಾರ ಮೊತ್ತವನ್ನು ಕೇಂದ್ರ ಸರಕಾರ ಕಡಿಮೆ ಮಾಡಿದೆ. ಅಂದರೆ ಬಿಜೆಪಿ ಸರಕಾರ ನೆರೆ ಸಂತ್ರಸ್ತರ ವಿಚಾರದಲ್ಲಿಪ್ರಚಾರ ಪಡೆದುಕೊಂಡಿದ್ದು ಬಿಟ್ಟರೆ ಪರಿಹಾರ ಒದಗಿಸಲಿಲ್ಲ. ಈ ವಿಚಾರದಲ್ಲಿರಾಜ್ಯ ಬಿಜೆಪಿ ಸರಕಾರ ಕೂಡ ವಿಫಲವಾಗಿದೆ. ಬರೀ ಬಾಯಿ ಮಾತಿನಲ್ಲಿಸಂತ್ರಸ್ತರಿಗೆ ಸಾಂತ್ವನ ಹೇಳಿದರೆ ಸಾಕೆ? ಎಂದು ಮಾಜಿ ಸಚಿವ ಶಿವಶಂಕರರೆಡ್ಡಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಶೀಘ್ರ ಪ್ರತಿಪಕ್ಷ ನಾಯಕರ ಆಯ್ಕೆ
ರಾಜ್ಯ ವಿಧಾನಸಭೆಯ ಪ್ರತಿ ಪಕ್ಷದ ನಾಯಕನ ವಿಚಾರದಲ್ಲಿಕಾಂಗ್ರೆಸ್‌ ಪಕ್ಷದಲ್ಲಿಯಾವುದೇ ಗೊಂದಲ ಇಲ್ಲ. ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉತ್ತರ ಕರ್ನಾಟಕದ ಪ್ರವಾಸದಲ್ಲಿಇದ್ದಾರೆ. ಶೀಘ್ರದಲ್ಲೇ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲಾಗುತ್ತದೆ ಎಂದು ಶಿವಶಂಕರರೆಡ್ಡಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ