ಆ್ಯಪ್ನಗರ

ಹಳ್ಳಿಯಲ್ಲಿಹುಚ್ಚಾಟವಾಡಿ ಜೈಲು ಸೇರಿದ ಬೆಂಗಳೂರಿನ ಯುವಕರು

ತಾಲೂಕಿನ ಮುದ್ದಲಹಳ್ಳಿಯ ಗ್ರಾಮದಲ್ಲಿಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ಕು ಯುವಕರನ್ನು ಗ್ರಾಮಸ್ಥರ ಮಾಹಿತಿ ಮೇರೆಗೆ ಬಂಧಿಸಿದ ಬಟ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Vijaya Karnataka 10 Oct 2019, 4:50 pm
ಚಿಂತಾಮಣಿ ಗ್ರಾ: ತಾಲೂಕಿನ ಮುದ್ದಲಹಳ್ಳಿಯ ಗ್ರಾಮದಲ್ಲಿಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ಕು ಯುವಕರನ್ನು ಗ್ರಾಮಸ್ಥರ ಮಾಹಿತಿ ಮೇರೆಗೆ ಬಂಧಿಸಿದ ಬಟ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Vijaya Karnataka Web
ಹಳ್ಳಿಯಲ್ಲಿಹುಚ್ಚಾಟವಾಡಿ ಜೈಲು ಸೇರಿದ ಬೆಂಗಳೂರಿನ ಯುವಕರು

ಗ್ರಾಮದ ಸಮೀಪದ ನಿಮ್ಮಕಾಯಲಹಳ್ಳಿಯ ಬಳಿಯಿರುವ ದರ್ಗಾಗೆ ಬಂದಿದ್ದ 23ರಿಂದ 25 ವರ್ಷದೊಳಗಿನ ಯುವಕರಾದ ಬೆಂಗಳೂರಿನ ಇರ್ಫಾನ್‌, ತನ್ವೀರ್‌, ಮುಜಾಸಿನ್‌ ಮತ್ತು ಮಹಮ್ಮದ್‌ ಆಜಾದ್‌ ಪೊಲೀಸರ ಅತಿಥಿಗಳಾಗಿದ್ದಾರೆ.
ನಾಲ್ಕು ಜನ ಯುವಕರು ನಿಮ್ಮಕಾಯಲಹಳ್ಳಿಯ ಬಳಿಯಿರುವ ಮುದ್ದಲಹಳ್ಳಿಗೆ ತೆರಳಿ ಅಲ್ಲಿಪರಸ್ಪರ ಜಗಳ, ಕಾದಾಟಕ್ಕೆ ಇಳಿದಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಇವರನ್ನು ಕಳ್ಳರೆಂದು, ಭಯಭೀತರಾಗಿ ಬಟ್ಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ