ಸೋಮೇನಹಳ್ಳಿ : ಬರದ ಹಿನ್ನೆಲೆಯಲ್ಲಿತೆರೆಯಲಾಗಿದ್ದ ಗೋಶಾಲೆಯನ್ನು 15 ದಿನಗಳ ಹಿಂದೆ ಮುಚ್ಚಿದ್ದು, ಶೇಖರಿಸಿದ್ದ ಮೇವು ಪ್ರಸ್ತುತ ಬೀಳುತ್ತಿರುವ ಮಳೆಗೆ ಕೊಳೆಯುತ್ತಿದೆ.
ಮಳೆಯ ಅಭಾವದಿಂದಾಗಿ ಕಳೆದ ಎರಡು ತಿಂಗಳ ಹಿಂದೆ ಜಾನುವಾರುಗಳ ಮೇವಿಗಾಗಿ ಗೋಶಾಲೆಯನ್ನು ಸೋಮೇನಹಳ್ಳಿ ಹುಣಸೇ ತೋಪಿನ ಆವರಣದಲ್ಲಿತೆರೆಯಲಾಗಿತ್ತು. ಆದರೆ ಮಳೆ ಬಂದು ಹಸಿರು ಮೇವು ಬೆಳೆದಿದ್ದರಿಂದ ಗೋಶಾಲೆಗೆ ದನಕರುಗಳು ಬರದ ಕಾರಣ 15 ದಿನಗಳ ಹಿಂದೆ ಗೋಶಾಲೆ ಮುಚ್ಚಲಾಯಿತು. ಗೋಶಾಲೆಗೆ ತರಿಸಿದ್ದ ಹಸಿರು ಮುಸಕಿನಜೋಳದ ಮೇವನ್ನು ವಿತರಿಸದೆ ನಿರ್ಲಕ್ಷಿಸಿದ್ದರಿಂದ ಕೊಳೆತಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಒಣಗಿದ ಮೇಲೆ ದನಕರುಗಳು ಮೇಯುತ್ತದೆ ಎಂದು ಹಾಗೇ ಬಿಡಲಾಗಿತ್ತು. ಈಗ ಸುಮಾರು 15 ದಿನಗಳಿಂದಲೂ ಗ್ರಾಮದಲ್ಲಿಮಳೆ ಸುರಿಯುತ್ತಿರುವುದರಿಂದ ಮೇವು ಕೊಳೆತು ದುರ್ವಾಸನೆ ಬೀರುತ್ತಿದೆ. ಹೋಬಳಿ ಕೇಂದ್ರಕ್ಕೆ ಬಸ್ ಹಿಡಿಯಲು ಬರುವ ಪ್ರಯಾಣಿಕರಿಗೆ ಬಯಲು ಮಲ ವಿಸರ್ಜನೆಯ ಕೇಂದ್ರ ಸ್ಥಾನವೂ ಆಗಿದೆ. ಜತೆಗೆ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮುಂಗಟ್ಟಿನವರು ವಾಳೆಗೊನೆಯ ದಿಂಡು, ಕಸಕಡ್ಡಿ ಮುಂತಾದವುಗಳನ್ನು ಹಾಕಿ ತಿಪ್ಪೆ ಮಾಡುತ್ತಿದ್ದಾರೆ. ಮೇವು ಗ್ರಾಪಂ ಕಟ್ಟಡದ ಕಂಪೌಂಡ್ ಗೋಡೆಗೆ ಹಾಕಿರುವುದರಿಂದ ನುತನವಾಗಿ ನಿರ್ಮಿಸಿರುವ ಕಾಂಪೌಂಡ್ ಗೋಡೆಯೂ ಹಾಳಾಗುತ್ತದೆ.
ಮಳೆಯ ಅಭಾವದಿಂದಾಗಿ ಕಳೆದ ಎರಡು ತಿಂಗಳ ಹಿಂದೆ ಜಾನುವಾರುಗಳ ಮೇವಿಗಾಗಿ ಗೋಶಾಲೆಯನ್ನು ಸೋಮೇನಹಳ್ಳಿ ಹುಣಸೇ ತೋಪಿನ ಆವರಣದಲ್ಲಿತೆರೆಯಲಾಗಿತ್ತು. ಆದರೆ ಮಳೆ ಬಂದು ಹಸಿರು ಮೇವು ಬೆಳೆದಿದ್ದರಿಂದ ಗೋಶಾಲೆಗೆ ದನಕರುಗಳು ಬರದ ಕಾರಣ 15 ದಿನಗಳ ಹಿಂದೆ ಗೋಶಾಲೆ ಮುಚ್ಚಲಾಯಿತು. ಗೋಶಾಲೆಗೆ ತರಿಸಿದ್ದ ಹಸಿರು ಮುಸಕಿನಜೋಳದ ಮೇವನ್ನು ವಿತರಿಸದೆ ನಿರ್ಲಕ್ಷಿಸಿದ್ದರಿಂದ ಕೊಳೆತಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಒಣಗಿದ ಮೇಲೆ ದನಕರುಗಳು ಮೇಯುತ್ತದೆ ಎಂದು ಹಾಗೇ ಬಿಡಲಾಗಿತ್ತು. ಈಗ ಸುಮಾರು 15 ದಿನಗಳಿಂದಲೂ ಗ್ರಾಮದಲ್ಲಿಮಳೆ ಸುರಿಯುತ್ತಿರುವುದರಿಂದ ಮೇವು ಕೊಳೆತು ದುರ್ವಾಸನೆ ಬೀರುತ್ತಿದೆ. ಹೋಬಳಿ ಕೇಂದ್ರಕ್ಕೆ ಬಸ್ ಹಿಡಿಯಲು ಬರುವ ಪ್ರಯಾಣಿಕರಿಗೆ ಬಯಲು ಮಲ ವಿಸರ್ಜನೆಯ ಕೇಂದ್ರ ಸ್ಥಾನವೂ ಆಗಿದೆ. ಜತೆಗೆ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮುಂಗಟ್ಟಿನವರು ವಾಳೆಗೊನೆಯ ದಿಂಡು, ಕಸಕಡ್ಡಿ ಮುಂತಾದವುಗಳನ್ನು ಹಾಕಿ ತಿಪ್ಪೆ ಮಾಡುತ್ತಿದ್ದಾರೆ. ಮೇವು ಗ್ರಾಪಂ ಕಟ್ಟಡದ ಕಂಪೌಂಡ್ ಗೋಡೆಗೆ ಹಾಕಿರುವುದರಿಂದ ನುತನವಾಗಿ ನಿರ್ಮಿಸಿರುವ ಕಾಂಪೌಂಡ್ ಗೋಡೆಯೂ ಹಾಳಾಗುತ್ತದೆ.