ಆ್ಯಪ್ನಗರ

ಕಲಬೆರೆಕೆ ಸೇಂದಿ ಸೇವಿಸಿ 10 ಜನ ಅಸ್ವಸ್ಥ

ನಾಲ್ವರು ಮಹಿಳೆಯರು, ಓರ್ವ ಬಾಲಕ ಸೇರಿದಂತೆ ಒಟ್ಟು 10 ಜನರು ಕಲಬೆರೆಕೆ ಸೇಂದಿ ಸೇವಿಸಿ ಅಸ್ವಸ್ಥರಾಗಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka 5 Jun 2019, 5:00 am
ಬಾಗೇಪಲ್ಲಿ: ನಾಲ್ವರು ಮಹಿಳೆಯರು, ಓರ್ವ ಬಾಲಕ ಸೇರಿದಂತೆ ಒಟ್ಟು 10 ಜನರು ಕಲಬೆರೆಕೆ ಸೇಂದಿ ಸೇವಿಸಿ ಅಸ್ವಸ್ಥರಾಗಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Vijaya Karnataka Web  10
ಕಲಬೆರೆಕೆ ಸೇಂದಿ ಸೇವಿಸಿ 10 ಜನ ಅಸ್ವಸ್ಥ


ತಾಲೂಕಿನ ಗುಟ್ಟಪಾಳ್ಯ ನಿವಾಸಿಗಳಾದ ಎನ್‌.ಆರ್‌.ಗಂಗುಲಪ್ಪ, ಗಂಗುಲಮ್ಮ, ಲಕ್ಷ್ಮೀನರಸಮ್ಮ, ಯಾಮಕ್ಕ, ಸಿ.ಜಿ.ರಂಗಪ್ಪ, ಶ್ರೀನಾಥ, ತಿಪ್ಪನ್ನ, ಗೋರ್ಲಾಯಪ್ಪ, ಹರೀಶ್‌, ಲಕ್ಷ್ಮೀನಾರಾಯಣ, ಬಸ್ಯಾಯಪ್ಪ, ಅರವಿಂದ(15 ವರ್ಷ) ಕಲಬೆರೆಕೆ ಸೇಂದಿ ಸೇವಿಸಿ ಅಸ್ವಸ್ಥರಾದವರು.

10 ಜನ ಕೂಲಿ ಕಾರ್ಮಿಕರು ಕೂಲಿ ಕೆಲಸದ ನಿಮಿತ್ತ ಗುಟ್ಟಪಾಳ್ಯ ಗ್ರಾಮದ ಗಡಿಯಲ್ಲಿರುವ ಆಂಧ್ರಪ್ರದೇಶಧ ಅಮಡಗೂರು ಮಂಡಲ್‌ನ ಕಮ್ಮವಾರಪಲ್ಲಿ ಗ್ರಾಮದ ರೈತ ಚಂದ್ರ ತೋಟದ ಜಮೀನಿಗೆ ಕೂಲಿ ಕೆಲಸಕ್ಕೆ ಹೋಗಿದ್ದಾರೆ. ಕೂಲಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ವಾಪಸ್‌ ಆಗುವ ವೇಳೆ ರೈತ ಆಂಧ್ರದಲ್ಲಿ ತಯಾರಿಸುವ ಸೇಂದಿ ಕುಡಿಯುಲು ನೀಡಿದ್ದಾರೆ. ಕೂಲಿ ಕಾರ್ಮಿಕರು ಸೇಂದಿಯನ್ನು ಕಂಠಪೂರ್ತಿ ಕುಡಿದು ಸ್ವಗ್ರಾಮಕ್ಕೆ ಬಂದಿದ್ದಾರೆ. ಬೆಳಗಿನಜಾವದಿಂದಲೇ ವಾಂತಿ, ಭೇದಿ ಪ್ರಾರಂಭವಾಗಿ ಅಸ್ವಸ್ಥಗೊಂಡಿದ್ದಾರೆ. ಮಧ್ಯಾಹ್ನದ ವೇಳೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಜಿ.ಮದ್ದೇಪಲ್ಲಿ ಕ್ರಾಸ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಯಾವುದೇ ರೀತಿ ಚೇತರಿಕೆ ಕಾಣಸದೆ ವಾಂತಿ ಮತ್ತು ಭೇದಿ ಮತ್ತಷ್ಟು ತೀವ್ರವಾಗಿದೆ.

ತಕ್ಷಣ ಗ್ರಾಮದ ಮುಖಂಡರು ಕೂಲಿ ಕಾರ್ಮಿಕರನ್ನು ಬಾಗೇಪಲ್ಲಿ ಸಾರ್ವಜನಿಕ ಅಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ರಾತ್ರಿ ಸಮಯಕ್ಕೆ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಿಸಿದೆ.

ಬಾಗೇಪಲ್ಲಿ ಸಾರ್ವಜನಿಕ ಅಸ್ಪತ್ರೆಗೆ ಪೊಲೀಸ್‌ ವೃತ್ತ ನಿರೀಕ್ಷ ಕ ಕೆ.ಎಂ.ಶ್ರೀನಿವಾಸಪ್ಪ, ಸಬ್‌ ಇನ್ಸ್‌ಪೆಕ್ಟರ್‌ ಪಿ.ಎಂ.ನವೀನ್‌ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ