ಇಡಗೂರು ಸ್ತ್ರೀಶಕ್ತಿ ಸಂಘಕ್ಕೆ ದ್ವಿತೀಯ ರಾಜ್ಯ ಪ್ರಶಸ್ತಿ ಗೌರಿಬಿದನೂರು: ತಾಲೂಕಿನ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದ್ದು ಇಡಗೂರು ಗ್ರಾಮದ ಸ್ತ್ರೀ ಶಕ್ತಿ ಸಂಘ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.
ತಾಲೂಕಿನ ಕಸಬಾ ಹೋಬಳಿಯ ಇಡಗೂರು ಗ್ರಾಮ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಗ್ರಾಮದ ರುದ್ರಕವಿ ಮೈಸೂರು ಸಂಸ್ಥಾನದಲ್ಲಿ ಕವಿಗಳಾಗಿದ್ದರು. ನಂತರದಲ್ಲಿ ಡಾ.ಎಲ್.ಬಸವರಾಜು ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದರು. ಇತಿಹಾಸ ಹೊಂದಿರುವ ಇಡಗೂರು ಗ್ರಾಮ, ಮಹಿಳಾ ಸ್ವಸಹಾಯ ಸಂಘಗಳು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಗ್ರಾಮದ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ.
2001ರಲ್ಲಿ ಶ್ರೀ ಗಂಗಾಬಿಕ ಸ್ತ್ರೀ ಶಕ್ತಿ ಸ್ವಸಹಾಯ ಸಂಘ 19 ಮಂದಿ ಸದಸ್ಯರೊಂದಿಗೆ ಪ್ರಾರಂಭಗೊಂಡು ಗುಂಪು ಚಟುವಟಿಕೆಗಳಾದ ಹಪ್ಪಳ, ಸಂಡಿಗೆ, ಫೇಣಿ, ಚಕ್ಕುಲಿ, ಚಟ್ನಿಪುಡಿ, ರಾಗಿಮಾಲ್ಟ್ಗಳನ್ನು ತಯಾರಿಸಿ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇದರ ಜತೆಗೆ ಸ್ವಚ್ಛತಾ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಮರಳು ಸಾಗಣೆ ತಡೆಯುವ ಮೂಲಕ ಪರಿಸರ ಕಾಳಜಿಯನ್ನು ವಹಿಸಿಕೊಂಡು ಬಂದಿದೆ.
ಈ ಹಿನ್ನೆಲೆಯಲ್ಲಿ 2014-15ನೇ ಸಾಲಿನಲ್ಲ್ ರಾಜ್ಯ ಸರಕಾರ ಗುರುತಿಸಿ ದ್ವಿತೀಯ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ, ಇದೇ ಗ್ರಾಮದಲ್ಲಿನ ಶ್ರೀ ಲಕ್ಷ್ಮೀ ಸ್ತ್ರೀಲಕ್ಷ್ಮಿ ಸ್ವಸಹಾಯ ಸಂಘವೂ ಸಹ ತನ್ನ ಅಭಿವೃದ್ಧಿಯಲ್ಲಿ ಸಾಧನೆ ಮಾಡುವುದರ ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳಾದ ಪೌಷ್ಟಿಕ ಆಹಾರ ಶಿಬಿರ, ಲಸಿಕಾ ಕಾರ್ಯಕ್ರಮ ಹಾಗೂ ತಾಯಂದಿರ ಚಾವಡಿ (ಮಹಿಳೆಯರ ಮತ್ತು ಮಕ್ಕಳ ಸಾಗಾಟ ತಡೆಯುವ) ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಹಿನ್ನೆಲೆಯಲ್ಲಿ 2015-16ನೇ ಸಾಲಿನ ದ್ವಿತೀಯ ಸ್ಥಾನದ ರಾಜ್ಯ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಪ್ರದಾನ ಮಾಡುತ್ತಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಸಲುವಾಗಿ ಸ್ತ್ರೀಶಕ್ತಿ ಸ್ವಸಹಾಯ ಸಂಘವನ್ನು ಮಾಡಿಕೊಂಡು ಉಳಿತಾಯದ ಜತೆಗೆ ಆಹಾರ ಪದಾರ್ಥಗಳನ್ನು ತಯಾರಿಸುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಿದ್ದು, ಗ್ರಾಮದ ಕೆರೆ ಅಭಿವೃದ್ಧಿಗೆ 1 ಲಕ್ಷ ರೂ. ಠೇವಣಿ ಮಾಡುವ ಮೂಲಕ ಕೆರೆ ಅಭಿವೃದ್ಧಿ ಯೋಜನೆ ಕಾಮಗಾರಿಗೆ ಚಾಲನೆ ಪಡೆಯುವ ಹೆಗ್ಗಳಿಕೆಗೆ ಶ್ರೀ ಗಂಗಾಬಿಕಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಪಾತ್ರವಾಗಿದೆ. -ನಾಗರತ್ನಮ್ಮ, ಅಧ್ಯಕ್ಷೆ, ಶ್ರೀ ಗಂಗಾಬಿಕಾ ಸ್ತ್ರೀಶಕ್ತಿ ಸಂಘ, ಇಡಗೂರು
2001ರಲ್ಲಿ 19 ಸದಸ್ಯರೊಂದಿಗೆ ಪ್ರಾರಂಭವಾದ ಶ್ರೀ ಲಕ್ಷ್ಮಿ ಸ್ತ್ರೀಶಕ್ತಿ ಸ್ವಸಹಾಯ ಸಂಘ ಕೇವಲ ಆರ್ಥಿಕ ಅಭಿವೃದ್ಧಿಗೆ ಸೀಮಿತವಾಗದೆ ಸಮಾಜಮುಖಿಯಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಂಬಾರು ಪದಾರ್ಥಗಳನ್ನು ತಯಾರಿಸುತ್ತಿದ್ದು, 40 ಲಕ್ಷ ರೂಗಳ ವಹಿವಾಟು ನಡೆಸಿದೆ. ಜತೆಗೆ ವ್ಯವಸಾಯ, ಹೈನುಗಾರಿಕೆ ಕೇತ್ರಗಳಿಗೆ ಸಾಲವನ್ನು ನೀಡುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ನೇಪಾಳದ ಸಂತ್ರಸ್ತರಿಗೂ ಸಹ ಧನಸಹಾಯವನ್ನು ಮಾಡಲಾಗಿದೆ. -ಗೌರಮ್ಮ, ಶ್ರೀಲಕ್ಷ್ಮೀ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ, ಇಡಗೂರು
ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಉತ್ಪಾದಿಸುವ ವಸ್ತುಗಳನ್ನು ಮಾರಾಟ ಮಾಡಲು ಪ್ರತಿ ತಾಲೂಕು ಕೇಂದ್ರಕ್ಕೆ ತಮ್ಮ ಅನುದಾನದಿಂದ ಮೊಬೈಲ್ ಯೂನಿಟ್ ವ್ಯಾನ್ ಒದಗಿಸಲಾಗಿದೆ. ಇದರಿಂದ ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಲಭಿಸಿದಂತಾಗಿದೆ. ಜತೆಗೆ ಸಂಘಗಳ ಆರ್ಥಿಕ ಅಭಿವೃದ್ಧಿಯೂ ಆಗುತ್ತಿದೆ. -ಎನ್.ಎಚ್.ಶಿವಶಂಕರರೆಡ್ಡಿ, ವಿಧಾನಸಭೆ ಉಪಸಭಾಧ್ಯಕ್ಷ
ತಾಲೂಕಿನಲ್ಲಿ 1084 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿದ್ದು, ಹಲವಾರು ಸಂಘಗಳು ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಮಹಿಳೆಯರ ಕಾರ್ಯಚಟುವಟಿಕೆ ಹಾಗೂ ಉಳಿತಾಯದಲ್ಲಿ ಅಭಿವೃದ್ಧಿಯಲ್ಲಿ ಮೇಲುಗೈ ಸಾಧಿಸಿದೆ. ತಾಲೂಕಿನಲ್ಲಿ ಶೇ.80 ಸ್ತ್ರೀಶಕ್ತಿ ಸಂಘಗಳು ಅಭಿವೃದ್ಧಿ ಸಾಧಿಸಿದೆ. ಅನಕ್ಷರಸ್ಥರೂ ಸಹ ಬ್ಯಾಂಕ್ಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ. -ರಾಜೇಂದ್ರಪ್ರಸಾದ್, ಸಿಡಿಪಿಒ, ಗೌರಿಬಿದನೂರು
ತಾಲೂಕಿನ ಕಸಬಾ ಹೋಬಳಿಯ ಇಡಗೂರು ಗ್ರಾಮ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಗ್ರಾಮದ ರುದ್ರಕವಿ ಮೈಸೂರು ಸಂಸ್ಥಾನದಲ್ಲಿ ಕವಿಗಳಾಗಿದ್ದರು. ನಂತರದಲ್ಲಿ ಡಾ.ಎಲ್.ಬಸವರಾಜು ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದರು. ಇತಿಹಾಸ ಹೊಂದಿರುವ ಇಡಗೂರು ಗ್ರಾಮ, ಮಹಿಳಾ ಸ್ವಸಹಾಯ ಸಂಘಗಳು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಗ್ರಾಮದ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ.
2001ರಲ್ಲಿ ಶ್ರೀ ಗಂಗಾಬಿಕ ಸ್ತ್ರೀ ಶಕ್ತಿ ಸ್ವಸಹಾಯ ಸಂಘ 19 ಮಂದಿ ಸದಸ್ಯರೊಂದಿಗೆ ಪ್ರಾರಂಭಗೊಂಡು ಗುಂಪು ಚಟುವಟಿಕೆಗಳಾದ ಹಪ್ಪಳ, ಸಂಡಿಗೆ, ಫೇಣಿ, ಚಕ್ಕುಲಿ, ಚಟ್ನಿಪುಡಿ, ರಾಗಿಮಾಲ್ಟ್ಗಳನ್ನು ತಯಾರಿಸಿ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇದರ ಜತೆಗೆ ಸ್ವಚ್ಛತಾ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಮರಳು ಸಾಗಣೆ ತಡೆಯುವ ಮೂಲಕ ಪರಿಸರ ಕಾಳಜಿಯನ್ನು ವಹಿಸಿಕೊಂಡು ಬಂದಿದೆ.
ಈ ಹಿನ್ನೆಲೆಯಲ್ಲಿ 2014-15ನೇ ಸಾಲಿನಲ್ಲ್ ರಾಜ್ಯ ಸರಕಾರ ಗುರುತಿಸಿ ದ್ವಿತೀಯ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ, ಇದೇ ಗ್ರಾಮದಲ್ಲಿನ ಶ್ರೀ ಲಕ್ಷ್ಮೀ ಸ್ತ್ರೀಲಕ್ಷ್ಮಿ ಸ್ವಸಹಾಯ ಸಂಘವೂ ಸಹ ತನ್ನ ಅಭಿವೃದ್ಧಿಯಲ್ಲಿ ಸಾಧನೆ ಮಾಡುವುದರ ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳಾದ ಪೌಷ್ಟಿಕ ಆಹಾರ ಶಿಬಿರ, ಲಸಿಕಾ ಕಾರ್ಯಕ್ರಮ ಹಾಗೂ ತಾಯಂದಿರ ಚಾವಡಿ (ಮಹಿಳೆಯರ ಮತ್ತು ಮಕ್ಕಳ ಸಾಗಾಟ ತಡೆಯುವ) ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಹಿನ್ನೆಲೆಯಲ್ಲಿ 2015-16ನೇ ಸಾಲಿನ ದ್ವಿತೀಯ ಸ್ಥಾನದ ರಾಜ್ಯ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಪ್ರದಾನ ಮಾಡುತ್ತಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಸಲುವಾಗಿ ಸ್ತ್ರೀಶಕ್ತಿ ಸ್ವಸಹಾಯ ಸಂಘವನ್ನು ಮಾಡಿಕೊಂಡು ಉಳಿತಾಯದ ಜತೆಗೆ ಆಹಾರ ಪದಾರ್ಥಗಳನ್ನು ತಯಾರಿಸುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಿದ್ದು, ಗ್ರಾಮದ ಕೆರೆ ಅಭಿವೃದ್ಧಿಗೆ 1 ಲಕ್ಷ ರೂ. ಠೇವಣಿ ಮಾಡುವ ಮೂಲಕ ಕೆರೆ ಅಭಿವೃದ್ಧಿ ಯೋಜನೆ ಕಾಮಗಾರಿಗೆ ಚಾಲನೆ ಪಡೆಯುವ ಹೆಗ್ಗಳಿಕೆಗೆ ಶ್ರೀ ಗಂಗಾಬಿಕಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಪಾತ್ರವಾಗಿದೆ. -ನಾಗರತ್ನಮ್ಮ, ಅಧ್ಯಕ್ಷೆ, ಶ್ರೀ ಗಂಗಾಬಿಕಾ ಸ್ತ್ರೀಶಕ್ತಿ ಸಂಘ, ಇಡಗೂರು
2001ರಲ್ಲಿ 19 ಸದಸ್ಯರೊಂದಿಗೆ ಪ್ರಾರಂಭವಾದ ಶ್ರೀ ಲಕ್ಷ್ಮಿ ಸ್ತ್ರೀಶಕ್ತಿ ಸ್ವಸಹಾಯ ಸಂಘ ಕೇವಲ ಆರ್ಥಿಕ ಅಭಿವೃದ್ಧಿಗೆ ಸೀಮಿತವಾಗದೆ ಸಮಾಜಮುಖಿಯಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಂಬಾರು ಪದಾರ್ಥಗಳನ್ನು ತಯಾರಿಸುತ್ತಿದ್ದು, 40 ಲಕ್ಷ ರೂಗಳ ವಹಿವಾಟು ನಡೆಸಿದೆ. ಜತೆಗೆ ವ್ಯವಸಾಯ, ಹೈನುಗಾರಿಕೆ ಕೇತ್ರಗಳಿಗೆ ಸಾಲವನ್ನು ನೀಡುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ನೇಪಾಳದ ಸಂತ್ರಸ್ತರಿಗೂ ಸಹ ಧನಸಹಾಯವನ್ನು ಮಾಡಲಾಗಿದೆ. -ಗೌರಮ್ಮ, ಶ್ರೀಲಕ್ಷ್ಮೀ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ, ಇಡಗೂರು
ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಉತ್ಪಾದಿಸುವ ವಸ್ತುಗಳನ್ನು ಮಾರಾಟ ಮಾಡಲು ಪ್ರತಿ ತಾಲೂಕು ಕೇಂದ್ರಕ್ಕೆ ತಮ್ಮ ಅನುದಾನದಿಂದ ಮೊಬೈಲ್ ಯೂನಿಟ್ ವ್ಯಾನ್ ಒದಗಿಸಲಾಗಿದೆ. ಇದರಿಂದ ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಲಭಿಸಿದಂತಾಗಿದೆ. ಜತೆಗೆ ಸಂಘಗಳ ಆರ್ಥಿಕ ಅಭಿವೃದ್ಧಿಯೂ ಆಗುತ್ತಿದೆ. -ಎನ್.ಎಚ್.ಶಿವಶಂಕರರೆಡ್ಡಿ, ವಿಧಾನಸಭೆ ಉಪಸಭಾಧ್ಯಕ್ಷ
ತಾಲೂಕಿನಲ್ಲಿ 1084 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿದ್ದು, ಹಲವಾರು ಸಂಘಗಳು ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಮಹಿಳೆಯರ ಕಾರ್ಯಚಟುವಟಿಕೆ ಹಾಗೂ ಉಳಿತಾಯದಲ್ಲಿ ಅಭಿವೃದ್ಧಿಯಲ್ಲಿ ಮೇಲುಗೈ ಸಾಧಿಸಿದೆ. ತಾಲೂಕಿನಲ್ಲಿ ಶೇ.80 ಸ್ತ್ರೀಶಕ್ತಿ ಸಂಘಗಳು ಅಭಿವೃದ್ಧಿ ಸಾಧಿಸಿದೆ. ಅನಕ್ಷರಸ್ಥರೂ ಸಹ ಬ್ಯಾಂಕ್ಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ. -ರಾಜೇಂದ್ರಪ್ರಸಾದ್, ಸಿಡಿಪಿಒ, ಗೌರಿಬಿದನೂರು