ಆ್ಯಪ್ನಗರ

71 ಸರಕಾರಿ ಪ್ರೌಢಶಾಲೆಗಳಿಗೆ 100 ಸಂಚಾರಿ ಪ್ರೊಜೆಕ್ಟರ್‌ ವಿತರಣೆ

ಜಿಲ್ಲೆಯಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ‌ ಹಾಗೂ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸುವ ಮತ್ತು ಡಿಜಿಟಲೀಕರಣ ಮಾಡುವ ಉದ್ದೇಶದಿಂದ ಜಿಲ್ಲೆಯ 71 ಸರಕಾರಿ ಪ್ರೌಢಶಾಲೆಗಳಿಗೆ 58 ಲಕ್ಷ ರೂ. ವೆಚ್ಚದಲ್ಲಿ 100 ಸಂಚಾರಿ ಪ್ರೊಜೆಕ್ಟರ್‌ಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌ ಹೇಳಿದರು.

Vijaya Karnataka 19 Feb 2019, 5:00 am
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
Vijaya Karnataka Web 100 mobile projector distribution for 71 government high schools
71 ಸರಕಾರಿ ಪ್ರೌಢಶಾಲೆಗಳಿಗೆ 100 ಸಂಚಾರಿ ಪ್ರೊಜೆಕ್ಟರ್‌ ವಿತರಣೆ


ಜಿಲ್ಲೆಯಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ‌ ಹಾಗೂ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸುವ ಮತ್ತು ಡಿಜಿಟಲೀಕರಣ ಮಾಡುವ ಉದ್ದೇಶದಿಂದ ಜಿಲ್ಲೆಯ 71 ಸರಕಾರಿ ಪ್ರೌಢಶಾಲೆಗಳಿಗೆ 58 ಲಕ್ಷ ರೂ. ವೆಚ್ಚದಲ್ಲಿ 100 ಸಂಚಾರಿ ಪ್ರೊಜೆಕ್ಟರ್‌ಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌ ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗುಣಾತ್ಮಕ ಕಲಿಕೆಗೆ ಪ್ರಯೋಜನಕಾರಿಯಾಗಲೆಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷ ಣ ಇಲಾಖೆ, ರೋಟರಿ ಬೆಂಗಳೂರು ದಕ್ಷಿಣ (ಆರ್‌.ಐ.ಡಿಸ್ಟ್ರಿಕ್ಟ್-3190) ಮತ್ತು ಟಾಟಾ ಪವರ್‌ ಸೋಲಾರ್‌ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ 1000 ಮಕ್ಕಳಿರುವ ಒಂದು ಶಾಲೆಗೆ 3 ಪ್ರೊಜೆಕ್ಟರ್‌, 450ಕ್ಕಿಂತ ಅಧಿಕ ಮಕ್ಕಳಿರುವ 6 ಶಾಲೆಗಳಿಗೆ ತಲಾ 2 ಪ್ರೊಜೆಕ್ಟರ್‌, ಉಳಿದ ಶಾಲೆಗಳಿಗೆ ತಲಾ 1 ಪ್ರೊಜೆಕ್ಟರ್‌ ನೀಡಲಾಗುವುದು. ಇದರಲ್ಲಿ 20 ವಸತಿ ಶಾಲೆಗಳೂ ಸೇರಿವೆ ಎಂದರು.

ಪ್ರೊಜೆಕ್ಟರ್‌ಗಳಲ್ಲಿ ಪಠ್ಯ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಳವಡಿಸಲಾಗಿದ್ದು, ಶಿಕ್ಷ ಕರು ಮಕ್ಕಳಿಗೆ ಕಲಿಸುವಲ್ಲಿ ಹೆಚ್ಚು ಪ್ರಯೋಜನವಾಗಲಿದೆ. ಮೊಬೈಲ್‌ ಪ್ರೊಜೆಕ್ಟರ್‌ ತಂತ್ರಾಂಶ ಬಳಸಿಕೊಳ್ಳುವುದರ ಮೂಲಕ ಜಿಲ್ಲೆಯ ಪ್ರೌಢ ಶಾಲಾ ಮಕ್ಕಳ ಕಲಿಕೆ ಹೆಚ್ಚಾಗಲಿದೆ. ಇದರಿಂದ ಫಲಿತಾಂಶವೂ ಉತ್ತಮವಾಗಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಧಿಕಾರಿ ಅನಿರುದ್ಧ್‌ ಶ್ರವಣ್‌ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಜಿ.ಪಂ. ಅಧ್ಯಕ್ಷರು ಹೆಚ್ಚಿನ ಒಲವು ತೋರುತ್ತಿದ್ದು, ಅವರ ಈ ಉದ್ದೇಶಕ್ಕೆ ರೋಟರಿ ಸಂಸ್ಥೆ ಕೈಜೋಡಿಸುವುದು ಅತ್ಯಂತ ಶ್ಲಾಘನೀಯ. ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಶಿಕ್ಷ ಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎನ್‌. ಪವಿತ್ರ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಿ. ನರಸಿಂಹಮೂರ್ತಿ, ರೋಟರಿ ಸಂಸ್ಥೆಯ ಅಧ್ಯಕ್ಷ ಹೆಚ್‌.ಆರ್‌.ಸತೀಶ್‌, ಯೋಜನಾ ಮುಖ್ಯಸ್ಥ ಶ್ರೀಧರ್‌, ಟಾಟಾ ಪವರ್‌ ಸೋಲಾರ್‌ ಸಿ.ಎಸ್‌.ಆರ್‌ ಮುಖ್ಯಸ್ಥ ಎನ್‌.ಮುರಳಿ, ಶ್ರೀನಾಥ್‌, ರೋಟರಿ ಜಿಲ್ಲಾ ಪಾಲಕ 20-21 ರೋಟರಿಯನ್‌ ನಾಗೇಂದ್ರ ಪ್ರಸಾದ್‌, ಜಿಲ್ಲಾ ಪ್ರತಿನಿಧಿ ಶ್ರೀನಿವಾಸ್‌ಮೂರ್ತಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ