ಆ್ಯಪ್ನಗರ

ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಒಂದೇ ಮನೆಯಲ್ಲಿ 15 ಕೊರೊನಾ ಶಂಕಿತರ ನಿಗೂಢ ವಾಸ್ತವ್ಯ!

ಕೊರೊನಾ ವೈರಸ್‌ ಬಗ್ಗೆ ಜಗತ್ತೇ ತಲೆಕೆಡಿಸಿಕೊಳ್ಳುತ್ತಿದ್ದರು ಜನರ ಬೇಜವಾಬ್ದಾರಿತನ ಮುಂದುವರಿದಿದೆ. 105 ಡಿಗ್ರಿ ವರೆಗೆ ಜ್ವರವಿದ್ದರೂ ಆಸ್ಪತ್ರೆಗೆ ಹೋಗದೆ ಒಂದೇ ಮನೆಯಲ್ಲಿ 15 ಮಂದಿ ನಿಗೂಢವಾಗಿ ವಾಸ್ತವ್ಯ ಹೂಡಿದ್ದ ಘಟನೆ ಬೆಳಕಿಗೆ ಚಿಕ್ಕಬಳ್ಳಾಪುರದಲ್ಲಿ ಬಂದಿದೆ.

Vijaya Karnataka Web 6 Apr 2020, 12:10 pm
ಗುಡಿಬಂಡೆ: ಲಾಕ್‌ಡೌನ್‌ ಟೈಟ್‌ ಆಗಿದ್ದರೂ ಒಂದೇ ಮನೆಯಲ್ಲಿ ಸೋಂಕಿನ ಲಕ್ಷಣ ಇಟ್ಟುಕೊಂಡು ಅಜ್ಞಾತವಾಗಿದ್ದ 15 ಮಂದಿಗೆ ಸೀಲ್‌ ಹಾಕಿ, ಸರಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
Vijaya Karnataka Web Coronavirus


ಬಾಪೂಜಿನಗರದ ಮುಸ್ಲಿಂ ಸಮುದಾಯದವರ ಮನೆಗೆ ಶನಿವಾರ ಆರೋಗ್ಯಾಧಿಕಾರಿಗಳು ಮತ್ತು ಸ್ವಯಂ ಸೇವಕರು ಬಂದು 3-4 ಬಾರಿ ತಪಾಸಣೆ ಮಾಡಿದ್ದರು. ಈ ಮನೆ ಮಾಲೀಕ ಮಾತ್ರ ಪ್ರತಿ ಬಾರಿ ಸಂಖ್ಯೆಯನ್ನು ತಪ್ಪಾಗಿ ಹೇಳುತ್ತಿದ್ದರು. ಇದರಿಂದ ಅನುಮಾನಗೊಂಡ ಆರೋಗ್ಯ ಸಿಬ್ಬಂದಿ, ಪೊಲೀಸರ ಸಹಾಯದಿಂದ ಮನೆಯನ್ನು ಶೋಧಿಸಿದಾಗ ಯಲಹಂಕ ಹಾಗೂ ಗೌರಿಬಿದನೂರಿನ ಹಿರೇಬಿದನೂರಿನಿಂದ ಬಂದ 9 ಮಂದಿ ಸೇರಿ 15 ಜನರಿದ್ದರು. ಇವರ ಪೈಕಿ ನಾಲ್ವರಲ್ಲಿ 105 ಡಿಗ್ರಿವರೆಗೆ ಜ್ವರವಿತ್ತು.

15 ಮಂದಿಗೆ ಸೀಲ್‌ ಹಾಕಿ ಹೋಂ ಕ್ವಾಧಿರಂಟೈನ್‌ಗೆ ಸೇರಿಸಲು ಎರಡು ಆ್ಯಂಬುಧಿಲೆನ್ಸ್‌ನಲ್ಲಿ ಬಂದಾಗ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಹೆದರಿದರು. ಕೊನೆಗೂ ವೈದ್ಯರು ತಮ್ಮ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಇವರನ್ನು ಮರಳಿ ಬೆಡ್‌ಗಳಿಗೆ ಕರೆ ತಂದರು.

ಏಪ್ರಿಲ್‌ ಅಂತ್ಯದವರೆಗೆ ಲಾಕ್‌ಡೌನ್‌ ಮುಂದುವರಿಸಬೇಕೆ? ಬೇಡವೇ? ಸರಕಾರದ ನಿಲುವೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ