ಆ್ಯಪ್ನಗರ

ಬೆಳ್ಳಂ ಬೆಳಗ್ಗೆಯೇ 3.10 ಲಕ್ಷ ದೋಚಿ ಪರಾರಿಯಾದ ಕಳ್ಳರು

ಭಾನುವಾರ ಬೆಳ್ಳಂಬೆಳಗ್ಗೆಯೇ ವ್ಯಾಪಾರಕ್ಕೆಂದು ಚಿನ್ನಸಂದ್ರದಿಂದ ಚಿಂತಾಮಣಿಗೆ ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಂಬಾಲಿಸಿದ ದರೋಡೆಕೋರರು ಬೈಕ್‌ ಅಡ್ಡಗಟ್ಟಿ, ಲಾಂಗ್‌ ತೋರಿಸಿ ಆತನಲ್ಲಿದ್ದ ಸುಮಾರು 3.10 ಲಕ್ಷ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ನಗರದ ಹೊರವಲಯದ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಆರ್‌ಕೆ ಇಂಟರ್‌ನ್ಯಾಷನಲ್‌ ಶಾಲೆಯ ಬಳಿ ನಡೆದಿದೆ.

Vijaya Karnataka 23 Sep 2019, 4:46 pm
ಚಿಂತಾಮಣಿ ಗ್ರಾ.: ಭಾನುವಾರ ಬೆಳ್ಳಂಬೆಳಗ್ಗೆಯೇ ವ್ಯಾಪಾರಕ್ಕೆಂದು ಚಿನ್ನಸಂದ್ರದಿಂದ ಚಿಂತಾಮಣಿಗೆ ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಂಬಾಲಿಸಿದ ದರೋಡೆಕೋರರು ಬೈಕ್‌ ಅಡ್ಡಗಟ್ಟಿ, ಲಾಂಗ್‌ ತೋರಿಸಿ ಆತನಲ್ಲಿದ್ದ ಸುಮಾರು 3.10 ಲಕ್ಷ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ನಗರದ ಹೊರವಲಯದ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಆರ್‌ಕೆ ಇಂಟರ್‌ನ್ಯಾಷನಲ್‌ ಶಾಲೆಯ ಬಳಿ ನಡೆದಿದೆ.
Vijaya Karnataka Web 3 10 lakh dochi parari
ಬೆಳ್ಳಂ ಬೆಳಗ್ಗೆಯೇ 3.10 ಲಕ್ಷ ದೋಚಿ ಪರಾರಿಯಾದ ಕಳ್ಳರು


ಹಣ ಕಳೆದುಕೊಂಡ ವ್ಯಕ್ತಿಯನ್ನು ತಾಲೂಕಿನ ಬೆಂಗಳೂರು ರಸ್ತೆಯ ಚಿನ್ನಸಂದ್ರ ಗ್ರಾಮದ ಸೈಯದ್‌ ಜಮೀರ್‌ ಪಾಷಾ ಎಂದು ಗುರುತಿಸಲಾಗಿದೆ. ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ ಚಿಂತಾಮಣಿಯಲ್ಲಿಜಾನುವಾರುಗಳ ಸಂತೆ ಇದ್ದುದರಿಂದ ವ್ಯಾಪಾರಕ್ಕೆಂದು ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಸಯ್ಯದ್‌ ಜಮೀರ್‌ ಪಾಷಾ 3.10 ಲಕ್ಷ ಹಣದೊಂದಿಗೆ ತೆರಳಿದ್ದರು. ಸ್ವಂತ ಊರಾದ ಚಿನ್ನಸಂದ್ರದಿಂದ ಚಿಂತಾಮಣಿಗೆ ತೆರಳುತ್ತಿದ್ದ ಸಂದರ್ಭದಲ್ಲಿಅವರನ್ನು ಹಿಂಬಾಲಿಸಿಕೊಂಡು ಎರಡು ಪಲ್ಸರ್‌ ಮತ್ತು ಒಂದು ಆಕ್ಟೀವಾ ವಾಹನದಲ್ಲಿಬಂದ ನಾಲ್ವರು ಮುಸುಕುಧಾರಿಗಳು ಸೈಯದ್‌ ಜಮೀರ್‌ ಪಾಷಾ ಅವರ ಮೇಲೆ ದಾಳಿ ಮಾಡಿ ಅವರ ಬಳಿಯಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಜಮೀರ್‌ ಸಂಬಂಧಿಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ