ಆ್ಯಪ್ನಗರ

ಮಧ್ಯರಾತ್ರಿಯಲ್ಲಿಪೊಲೀಸರ ವಸತಿಗೃಹಕ್ಕೆ ನುಗ್ಗಿದ ಅನುಮಾನಸ್ಪದ ವ್ಯಕ್ತಿ

ಮಧ್ಯರಾತ್ರಿ ಪೊಲೀಸರ ವಸತಿಗೃಹಕ್ಕೆ ಅನುಮಾನಸ್ಪದ ವ್ಯಕ್ತಿಯೊಬ್ಬ ನುಗ್ಗಿ 12 ಮನೆಗಳಿಗೆ ಹೊರಗಡೆಯಿಂದ ಲಾಕ್‌ ಹಾಕಿ ಅರೆ ಹುಚ್ಚನಂತೆ ಚೀರಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿಸæೂೕಮವಾರ ತಡರಾತ್ರಿ ನಡೆದಿದೆ.

Vijaya Karnataka 28 Aug 2019, 4:18 pm
12 ಮನೆಗಳಿಗೆ ಹೊರಗಡೆಯಿಂದ ಲಾಕ್‌ ಮಾಡಿ ''ಸೋನು ಸೋನು,'' ಎಂದು ಚೀರಾಟ
Vijaya Karnataka Web 27CBPK4_10

ಚಿಕ್ಕಬಳ್ಳಾಪುರ :
ಮಧ್ಯರಾತ್ರಿ ಪೊಲೀಸರ ವಸತಿಗೃಹಕ್ಕೆ ಅನುಮಾನಸ್ಪದ ವ್ಯಕ್ತಿಯೊಬ್ಬ ನುಗ್ಗಿ 12 ಮನೆಗಳಿಗೆ ಹೊರಗಡೆಯಿಂದ ಲಾಕ್‌ ಹಾಕಿ ಅರೆ ಹುಚ್ಚನಂತೆ ಚೀರಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿಸæೂೕಮವಾರ ತಡರಾತ್ರಿ ನಡೆದಿದೆ.

ಘಟನೆಗೂ ಮುನ್ನ ನಗರದ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣದಲ್ಲಿಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆಂಧ್ರದ ಪುಟ್ಟಪರ್ತಿ ಮೂಲದ ರಾಜೇಂದ್ರ ಧಾಮಿ ಎಂಬುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿಬಿಡುಗಡೆ ಮಾಡಿದರು. ಆದರೆ, ಪೊಲೀಸ್‌ ಠಾಣೆಯಿಂದ ಹೊರಬಂದ ಅಸಾಮಿ ಸೀದಾ ಪೊಲೀಸ್‌ ಠಾಣೆಯ ಪಕ್ಕದಲ್ಲೇ ಇದ್ದ ಪೊಲೀಸ್‌ ವಸತಿಗೃಹದ ಕಟ್ಟಡಕ್ಕೆ ನುಗ್ಗಿ ವಿಚಿತ್ರವಾಗಿ ವರ್ತಿಸಿದ್ದಾನೆ.

ಕಟ್ಟಡದಲ್ಲಿದ್ದ 12 ಮನೆಗಳಿಗೆ ಹೊರಗಡೆಯಿಂದ ಲಾಕ್‌ ಮಾಡಿ ''ಸೋನು ಸೋನು,'' ಎಂದು ಕೂಗಾಟ ಚೀರಾಟ ನಡೆಸಿದ್ದಾನೆ. ಇದರಿಂದ ನಿದ್ರೆಗೆ ಜಾರಿದ್ದ ಪೊಲೀಸರು ಹಾಗೂ ಕುಟುಂಬಸ್ಥರು ಮನೆಯಿಂದ ಹೊರಬರಲಾಗದೆ ಒದ್ದಾಡಿದರು. ಅಷ್ಟರಲ್ಲೇ ಅಕ್ಕಪಕ್ಕದ ಮನೆಯವರು ಅನುಮಾನಸ್ಪದ ವ್ಯಕ್ತಿಯನ್ನು ಹಿಡಿಯಲು ಯತ್ನಿಸಿದಾಗ ಅವರ ಮೇಲೆ ಕಲ್ಲುಹಾಗೂ ಅಲ್ಲಿದ್ದ ಕೋಲಿನಿಂದ ಹಲ್ಲೆ ಮಾಡಲು ಯತ್ನಿಸದ್ದಾನೆ. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಅನುಮಾನಸ್ಪದ ವ್ಯಕ್ತಿಯನ್ನು ಮರಳಿ ವಶಕ್ಕೆ ಪಡೆದರು. ಅನುಮಾನಸ್ಪದ ವ್ಯಕ್ತಿಯ ವರ್ತನೆಗೆ ಹೈರಾಣಾದ ಪೊಲೀಸರು, ಥೇಟ್‌ ಸಿನಿಮಾ ಶೈಲಿಯಲ್ಲಿಹಿಡಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ನಗರ ಪೊಲೀಸರು, ಅರೆ ಹುಚ್ಚನಂತೆ ವಿಚಿತ್ರವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಂದೆಡೆ ಆತನ ಬಳಿ ಇದ್ದ ಬ್ಯಾಗಿನಲ್ಲಿಬ್ಲೇಡ್‌, ನೇಪಾಳ ದೇಶದ ನೋಟುಗಳು ಸಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ