ಆ್ಯಪ್ನಗರ

ಗಂಟೆ ಹನ್ನೆರಡಾದರೂ ಬಿಸಿಯೂಟ ನೀಡದ ಶಿಕ್ಷಕಿ; ಅಧಿಕಾರಿಗಳ ತರಾಟೆ

ನಗರದ 1ನೇ ನಗರ್ತಪೇಟೆಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಬಡಿಸಬೇಕಿದ್ದ ಊಟವನ್ನು ಸಮಯ 12 ಗಂಟೆಯಾದರೂ ಮಕ್ಕಳಿಗೆ ಬಡಿಸಿರಲಿಲ್ಲ. ಇದಿರಂದಾಗಿ ಶಾಲಾ ಮಕ್ಕಳು ಹಸಿವಿನಿಂದ ಬಳಲುವಂತಾಯಿತು.

Vijaya Karnataka 29 Dec 2018, 5:00 am
ಸರಕಾರಿ ಉರ್ದು ಶಾಲೆಯಲ್ಲಿ ಬಿಸಿಯೂಟವಿಲ್ಲದೆ ಹಸಿವಿನಲ್ಲಿದ್ದ ಮಕ್ಕಳು
Vijaya Karnataka Web CBP-28SDL2


ವಿಕ ಸುದ್ದಿಲೋಕ ಶಿಡ್ಲಘಟ್ಟ


ನಗರದ 1ನೇ ನಗರ್ತಪೇಟೆಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಬಡಿಸಬೇಕಿದ್ದ ಊಟವನ್ನು ಸಮಯ 12 ಗಂಟೆಯಾದರೂ ಮಕ್ಕಳಿಗೆ ಬಡಿಸಿರಲಿಲ್ಲ. ಇದಿರಂದಾಗಿ ಶಾಲಾ ಮಕ್ಕಳು ಹಸಿವಿನಿಂದ ಬಳಲುವಂತಾಯಿತು.

ಶಾಲೆಯ ಮುಖ್ಯ ಶಿಕ್ಷ ಕಿ ಹಾಗೂ ಅಡುಗೆ ಸಿಬ್ಬಂದಿ ನಡುವೆ ಹೊಂದಾಣಿಕೆ ಕೊರತೆಯಿಂದ ಸಮಯ ಮೀರಿದರೂ ಬಿಸಿಯೂಟ ತಯಾರಿಸದೆ ಮುಖ್ಯ ಶಿಕ್ಷ ಕಿ ಹಾಗೂ ಅಡುಗೆ ಸಿಬ್ಬಂದಿ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳಿಗೆ ಇಳಿದಿದ್ದರು.

'ಮೇಡಂನವರು ಅಡುಗೆ ಸಾಮಗ್ರಿಗಳು ಕೊಡಲಿಲ್ಲ. ಹಾಗಾಗಿ ನಾವು ಅಡುಗೆ ಮಾಡಲಿಲ್ಲ'ಎಂದು ಅಡುಗೆ ಸಿಬ್ಬಂದಿ ಆರೋಪಿಸಿದರೆ, 'ನಾನು ಎಲ್ಲ ಸಾಮಗ್ರಿಗಳನ್ನು ಕೊಟ್ಟರೂ ಉದ್ದೇಶಪೂರ್ವಕವಾಗಿ ನನಗೆ ಕೆಟ್ಟ ಹೆಸರು ಬರುವಂತೆ ಮಾಡಲು ಅಡುಗೆ ಮಾಡಿಲ್ಲ' ಎಂದು ಮುಖ್ಯ ಶಿಕ್ಷ ಕಿ ಪ್ರತ್ಯಾರೋಪ ಮಾಡಿದರು.

ವಿಚಾರ ತಿಳಿದು ಎನ್‌ಎಸ್‌ಐಯುನ ರಾಜ್ಯ ಸಂಚಾಲಕ ಮುನೀಂದ್ರ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ ್ಮಮ್ಮ ಶಾಲೆಗೆ ತೆರಳಿ ನಂತರ ಅಕ್ಷ ರ ದಾಸೋಹ ಸಹಾಯಕ ನಿರ್ದೇಶಕರಿಗೆ ಶಾಲೆಯಲ್ಲಿ ಅಡುಗೆ ವಿಳಂಬವಾದ ಬಗ್ಗೆ ವಿಷಯ ತಿಳಿಸಿದರು.

ಅಕ್ಷ ರ ದಾಸೋಹದ ಜಿಲ್ಲಾ ಅಧಿಕಾರಿ ಅಶ್ವತ್ಥಯ್ಯ, ತಾಲೂಕು ಸಹಾಯಕ ನಿರ್ದೇಶಕ ಆಂಜನೇಯರೆಡ್ಡಿ ಶಾಲೆಗೆ ಭೇಟಿ ನೀಡಿ, 9 ಗಂಟೆಗೆ ಉಣ ಬಡಿಸಬೇಕಿದ್ದ ಊಟವನ್ನು 11ಗಂಟೆಯಾದರೂ ಏಕೆ ಬಡಿಸಿಲ್ಲ ಎಂದು ಮುಖ್ಯ ಶಿಕ್ಷ ಕಿ ಹಾಗೂ ಅಡುಗೆಯವರನ್ನು ವಿಚಾರಿಸಿದರು.

ಅಧಿಕಾರಿಗಳು ಮುಖ್ಯ ಶಿಕ್ಷ ಕಿಯನ್ನು ತರಾಟೆಗೆ ತೆಗೆದುಕೊಂಡು, ''ಕಳೆದ ಮೂರು ದಿನಗಳ ಹಿಂದೆಯೆ ಭೇಟಿ ನೀಡಿ ನಿಮಗೆ ಅಡುಗೆ ಸಾಮಗ್ರಿಗಳನ್ನು ಪ್ರತಿ ದಿನ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಅಡುಗೆಯವರ ಸುಪರ್ದಿಗೆ ಕೊಡಿ ಎಂದು ಲಿಖಿತವಾಗಿ ಬರೆದು ಸೂಚಿಸಿದರೂ ಏಕೆ ಆ ಕೆಲಸ ಮಾಡಿಲ್ಲ. ಅಡುಗೆ ಸಿಬ್ಬಂದಿಯನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ಅಡುಗೆ ತಯಾರಿಸಿ ಮಕ್ಕಳಿಗೆ ಉಣ ಬಡಿಸುವುದು ನಿಮ್ಮ ಕೆಲಸ. ಅದು ಬಿಟ್ಟು ಕಥೆಗಳನ್ನು ಹೇಳಿದರೆ ನಾವು ಕೇಳಲು ಸಿದ್ಧರಿಲ್ಲ,' ಎಂದರು.

ಮುಂದೆ ಈ ರೀತಿ ಆಗದಂತೆ ಎಚ್ಚರಿಕೆವಹಿಸುವಂತೆ ಸೂಚಿಸಿ ಸಮಯಕ್ಕೆ ಸರಿಯಾಗಿ ಅಡುಗೆ ಪದಾರ್ಥಗಳನ್ನು ಕೊಟ್ಟು ಅಡುಗೆ ಮಾಡಿಸಿ. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಷ್ಟೊತ್ತಿಗಾಗಲೆ 12 ಗಂಟೆಯಾಗಿದ್ದು, ಆಗ ಬಿಸಿಯೂಟ ತಯಾರಿಸಿ ಮಕ್ಕಳಿಗೆ ಬಡಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ