ಆ್ಯಪ್ನಗರ

ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ

ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ಜಿಲ್ಲಾಪೊಲೀಸರು ದಿಢೀರ್‌ ದಾಳಿ ನಡೆಸಿ, ಶುಕ್ರವಾರ ರಾತ್ರಿಯಿಡಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ಅಧಿಕಾರಿ, ಸಿಬ್ಬಂದಿಯ ವಿಚಾರಣೆ ನಡೆಸಿದರು. ಅಂತಿಮವಾಗಿ ಉಪನೋಂದಣಾಧಿಕಾರಿ ಹಾಗೂ ಪ್ರಥಮ ದರ್ಜೆ ಸಹಾಯಕನನ್ನು ಬಂಧಿಸಿದ್ದಾರೆ.

Vijaya Karnataka 8 Sep 2019, 5:00 am
ಶಿಡ್ಲಘಟ್ಟ: ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ಜಿಲ್ಲಾಪೊಲೀಸರು ದಿಢೀರ್‌ ದಾಳಿ ನಡೆಸಿ, ಶುಕ್ರವಾರ ರಾತ್ರಿಯಿಡಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ಅಧಿಕಾರಿ, ಸಿಬ್ಬಂದಿಯ ವಿಚಾರಣೆ ನಡೆಸಿದರು. ಅಂತಿಮವಾಗಿ ಉಪನೋಂದಣಾಧಿಕಾರಿ ಹಾಗೂ ಪ್ರಥಮ ದರ್ಜೆ ಸಹಾಯಕನನ್ನು ಬಂಧಿಸಿದ್ದಾರೆ.
Vijaya Karnataka Web acb attack on deputy registrars office
ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ


ತಾಲೂಕಿನ ಜಂಗಮಕೋಟೆ ಹೋಬಳಿಯ ಘಟ್ಟಮಾರನಹಳ್ಳಿಯ ಮಧುಕುಮಾರ್‌ ಎಂಬುವವರು ತಮ್ಮ ನಿವೇಶನದ ಖಾತೆ ನೋಂದಣಿಗಾಗಿ ಉಪ ನೋಂದಣಾಧಿಕಾರಿಗಳು 10 ಸಾವಿರ ರೂ. ಲಂಚ ಕೇಳಿದ್ದು, ಈ ಪೈಕಿ 8 ಸಾವಿರ ರೂ. ಪಡೆದುಕೊಂಡಿದ್ದಾರೆ ಎಂದು ವಿಡಿಯೋ ದಾಖಲೆ ಸಮೇತ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿಎಸಿಬಿ ಡಿವೈಎಸ್ಪಿ ವೆಂಕಟೇಶ್‌ ನಾಯ್ಡು ನೇತೃತ್ವದಲ್ಲಿ10ಕ್ಕೂ ಹೆಚ್ಚು ಮಂದಿ ಸಿಬ್ಬಂದಿ, ಇಲ್ಲಿನ ಉಪ ನೋಂದಣಾಧಿಕಾರಿಗಳ ಕಚೇರಿಗೆ ಶುಕ್ರವಾರ ಸಂಜೆ 5.30ಕ್ಕೆ ದಿಢೀರ್‌ ದಾಳಿ ನಡೆಸಿ, ಕಚೇರಿಯಲ್ಲಿನ ಎಲ್ಲರನ್ನೂ ತಪಾಸಣೆ ನಡೆಸಿ, ವಿಚಾರಣೆ ನಡೆಸಿದರು.

ಅಂತಿಮವಾಗಿ ಉಪ ನೋಂದಣಾಧಿಕಾರಿ ಪ್ರಸಾದ್‌ ಕುಮಾರ್‌ ಹಾಗೂ ಪ್ರಥಮ ದರ್ಜೆ ಸಹಾಯಕ ಹರೀಶ್‌ ಅವರನ್ನು ಬಂಧಿಸಿ, ಶನಿವಾರ ಜಿಲ್ಲಾನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಿಢೀರ್‌ ದಾಳಿ: ಶುಕ್ರವಾರ ಸಂಜೆ 5.30ಕ್ಕೆ ಎಸಿಬಿ ತಂಡವು ಉಪ ನೋಂದಣಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿ, ಮೊದಲಿಗೆ ಕಚೇರಿಯಲ್ಲಿದ್ದ ಸಾರ್ವಜನಿಕರನ್ನು ಅವರ ಹೆಸರು, ವಿಳಾಸ, ಬಂದ ಕೆಲಸ ಏನು, ಅವರ ಬಳಿ ಹಣ ಎಷ್ಟಿದೆ, ಆ ಹಣ ಎಲ್ಲಿಯದು, ಏತಕ್ಕಾಗಿ ತಂದಿದ್ದೀರಿ ಎಂಬೆಲ್ಲಮಾಹಿತಿ ಪಡೆದು, ಮೊಬೈಲ್‌ ಸಂಖ್ಯೆ ಬರೆದುಕೊಂಡು ಕಳುಹಿಸಿದರು.

ನಂತರ ಉಪ ನೋಂದಣಾಧಿಕಾರಿ ಪ್ರಸಾದ್‌ ಕುಮಾರ್‌, ಪ್ರಥಮ ದರ್ಜೆ ಸಹಾಯಕ ಹರೀಶ್‌ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಹಾಗೆಯೇ ಶುಕ್ರವಾರ ರಾತ್ರಿ ಇಡೀ ಉಪ ನೋಂದಣಾಧಿಕಾರಿ ಕಚೇರಿಯ ಎಲ್ಲಅಧಿಕಾರಿ ಸಿಬ್ಬಂದಿಯನ್ನು ಹೊರಗೆ ಬಿಡದಂತೆ ವಿಚಾರಣೆ ನಡೆಸಿದರು.

ಶುಕ್ರವಾರ ನೋಂದಣಿಯಾದ ನಿವೇಶನ ಜಮೀನುಗಳ ವಿವರ, ಸಂಗ್ರಹವಾದ ಸರಕಾರಿ ಶುಲ್ಕದ ಎಲ್ಲದಾಖಲೆಗಳನ್ನು ಪರಿಶೀಲಿಸಿದರು. ಜತೆಗೆ ಅದೇ ಸಮಯಕ್ಕೆ ಉಪ ನೋಂದಣಾಧಿಕಾರಿ ಪ್ರಸಾದ್‌ ಕುಮಾರ್‌ ಅವರಿಗೆ ಸೇರಿದ ದೇವನಹಳ್ಳಿ ಹಾಗೂ ಬೆಂಗಳೂರಿನ ನಿವಾಸಗಳ ಮೇಲೂ ಏಕಕಾಲಕ್ಕೆ ಮತ್ತೊಂದು ಎಸಿಬಿ ಪೊಲೀಸರ ತಂಡ ದಾಳಿ ನಡೆಸಿದ್ದು, ಅಲ್ಲಿಯೂ ದಾಖಲೆಗಳ ಪರಿಶೀಲನೆ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ