ಆ್ಯಪ್ನಗರ

ಬೆಂಗಳೂರಿನಲ್ಲಿ ಇಂದು ಆದಿ ಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪಣೆ

ಇಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಆದಿಜಾಂಬವ ಅಭಿವೃದ್ಧಿ ನಿಗಮ ಕಾರ್ಯಕ್ರಮಕ್ಕೆ ಜಿಲ್ಲೆಯ 6 ತಾಲೂಕಿಂದ 150 ವಾಹನಗಳಲ್ಲಿ 3000 ಮಂದಿ ಸಮುದಾಯದ ಸದಸ್ಯರು ಭಾಗವಹಿಸುವರು ಎಂದು ಮಾದಿಗ ದಂಡೋರ ಮಹಿಳಾ ಘಟಕ ರಾಜ್ಯಧ್ಯಕ್ಷೆ ಸಿ.ವಿ. ವೀಣಾ ತಿಳಿಸಿದರು.

Vijaya Karnataka 17 Jan 2019, 5:00 am
ಚಿಕ್ಕಬಳ್ಳಾಪುರ: ಇಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಆದಿಜಾಂಬವ ಅಭಿವೃದ್ಧಿ ನಿಗಮ ಕಾರ್ಯಕ್ರಮಕ್ಕೆ ಜಿಲ್ಲೆಯ 6 ತಾಲೂಕಿಂದ 150 ವಾಹನಗಳಲ್ಲಿ 3000 ಮಂದಿ ಸಮುದಾಯದ ಸದಸ್ಯರು ಭಾಗವಹಿಸುವರು ಎಂದು ಮಾದಿಗ ದಂಡೋರ ಮಹಿಳಾ ಘಟಕ ರಾಜ್ಯಧ್ಯಕ್ಷೆ ಸಿ.ವಿ. ವೀಣಾ ತಿಳಿಸಿದರು.
Vijaya Karnataka Web adi zambawa development corporation limited
ಬೆಂಗಳೂರಿನಲ್ಲಿ ಇಂದು ಆದಿ ಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪಣೆ


ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಮುತುವರ್ಜಿವಹಿಸಿ ಮಾದಿಗರ ಏಳಿಗೆಯನ್ನು ಪೋಷಿಸುವ ಆದಿಜಾಂಬವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿರುವುದು ಐತಿಹಾಸಿಕ ನಡೆಯಾಗಿದೆ. ಇದು ಸಾಕಾರಗೊಳ್ಳಲು ಶ್ರಮಿಸಿದ ಸಂಸದ ಕೆ.ಎಚ್‌. ಮುನಿಯಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಚ್‌. ಆಂಜನೇಯ ಅವರ ಸೇವೆಯನ್ನು ಸಮುದಾಯ ಸ್ಮರಿಸುತ್ತದೆ ಎಂದರು.

ಒಳಮೀಸಲು ಮಾತ್ರವೇ ನಮ್ಮ ಬದುಕನ್ನು ಹಸನು ಮಾಡಲು ಸಾಧ್ಯ ಎಂಬುದನ್ನು ಸಮುದಾಯ ಅರಿತು ನಡೆಯಬೇಕಿದೆ. ಈ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಎಂವಿ ರಾಮಪ್ಪ, ರಾಜ್ಯ ಉಪಾಧ್ಯಕ್ಷ ಪಿಎಂ ನರಸಿಂಹಯ್ಯ, ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ಚಂದ್ರಶೇಖರ್‌, ಕೃಷ್ಣ, ಮಂಜುನಾಥ್‌, ತಾಲೂಕು ಅಧ್ಯಕ್ಷ ಆನೂರು ಶ್ರೀನಿವಾಸ್‌, ಮಧುಕುಮಾರ್‌ ಮತ್ತಿತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ