ಆ್ಯಪ್ನಗರ

ಎಟಿಎಂ ವಂಚಕರ ಬಂಧನ

ಅಮಾಯಕರಿಂದ ಎಟಿಎಂ ಕಾರ್ಡ್‌ ವಂಚಿಸಿ ಹಣ ಡ್ರಾ ಮಾಡುತ್ತಿದ್ದ ಇಬ್ಬರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 6 Aug 2019, 3:39 pm
ಗೌರಿಬಿದನೂರು: ಅಮಾಯಕರಿಂದ ಎಟಿಎಂ ಕಾರ್ಡ್‌ ವಂಚಿಸಿ ಹಣ ಡ್ರಾ ಮಾಡುತ್ತಿದ್ದ ಇಬ್ಬರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web atm fraudsters arrest
ಎಟಿಎಂ ವಂಚಕರ ಬಂಧನ


ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ತಾಲೂಕಿನ ತಮ್ಮಿಶೆಟ್ಟಿಹಳ್ಳಿವಾರಿಪಲ್ಲಿ ರಮೇಶ್‌(38) ಹಾಗೂ ಕದಿರಿ ತಾಲೂಕಿನ ಬಾಲಸಮುದ್ರಂನ ಕೋಕ್ಕಂಟಿ ಕ್ರಾಸ್‌ ಶೇಖ್‌ಷಫಿ(40) ಬಂಧಿತರು.

ನಡೆದಿದ್ದೇನು?: ಜು. 13ರಂದು ತಾಲೂಕಿನ ಅಲಕಾಪುರ ನಿವಾಸಿ ಕಲೀಂಖಾನ್‌ ನಗರದ ರೈಲ್ವೆ ನಿಲ್ದಾಣದ ಎಟಿಎಂನಲ್ಲಿ ಹಣ ಡ್ರಾ.ಮಾಡಲು ತಡಕಾಡುತ್ತಿದ್ದ ವೇಳೆ ಆರೋಪಿಗಳಾದ ರಮೇಶ್‌ ಮತ್ತು ಶೇಖ್‌ಷಫಿ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್‌ ಪಿನ್‌ ನಂ. ಪಡೆದು ನಂತರ ನಕಲಿ ಎಟಿಎಂ ಕಾರ್ಡ್‌ ನೀಡಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ. ಜುಲೈ 29ರಂದು ಕಲೀಂಖಾನ್‌ ಬ್ಯಾಂಕ್‌ಗೆ ತೆರಳಿ ತನ್ನ ಪಾಸ್‌ ಪುಸ್ತಕ ಎಂಟ್ರೀ ಮಾಡಿಸಿದಾಗ 43 ಸಾವಿರ ರೂ, ಗೌರಿಬಿದನೂರು ಎಟಿಎಂನಲ್ಲಿ ಡ್ರಾ ಆಗಿರುವ ಬಗ್ಗೆ ತಿಳಿದು, ತಕ್ಷ ಣವೇ ನಗರ ಪೊಲೀಸ್‌ ಠಾಣೆಯಲ್ಲಿ ದೂರಹ ದಾಖಲಿಸಿದ್ದರು.

ನೆರವಾದ ಸಿಸಿ ಟಿವಿ ಫುಟೇಜ್‌: ತಕ್ಷ ಣವೇ ಕಾರ‍್ಯಪ್ರವೃತ್ತರಾದ ಎಸ್‌ಐ ಅವಿನಾಶ್‌ ಎಟಿಎಂ ಕೌಂಟರ್‌ ಸಿಸಿ ಕ್ಯಾಮೆರಾ ಫುಟೇಜ್‌ ಪರಿಶೀಲಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ವಿಚಾರಣೆಯಲ್ಲಿ ವಿವಿಧೆಡೆ ಅಮಾಯಕರ ಎಟಿಎಂ ಕಾರ್ಡ್‌ ವಂಚಿಸಿ ಗೌರಿಬಿದನೂರು, ಚಿಂತಾಮಣಿ, ಕದಿರಿ, ದೇವನಹಳ್ಳಿಯ ಎಟಿಎಂ 70 ಸಾವಿರ ರೂಗಳು ಹಣ ಡ್ರಾ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

2 ಲಕ್ಷ ಮೌಲ್ಯದ ಚಿನ್ನಾಭರಣ ವಶ: ಆರೋಪಿಗಳು ಕದ್ದಿದ್ದ ಬಂಗಾರದ 3 ಚೈನು, 2 ಉಂಗುರ, ಒಂದು ಜೊತೆ ವಾಲೆ, 1 ಬ್ರಾಸ್‌ಲೆಟ್‌ ಹಾಗೂ 40 ಸಾವಿರ ಬೆಲೆ ದ್ವಿಚಕ್ರ ವಾಹನ ಮತ್ತು 70 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಕೆ.ಸಂತೋಷ್‌ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪ್ರಭುಶಂಕರ್‌, ಸಿಪಿಐ ವೈ.ಅಮರನಾರಾಯಣ್‌ ನೇತೃತ್ವದಲ್ಲಿ ಎಸ್‌ಐ ಅವಿನಾಶ್‌, ಸಿಬ್ಬಂದ್ದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ