ಆ್ಯಪ್ನಗರ

ಆಯುಷ್‌ಮಾನ್‌ ಭಾರತ್‌ ಬಡವರಿಗೆ ಅನುಕೂಲ

ಆಯುಷ್‌ ಮಾನ್‌ ಭಾರತ್‌ ಆರೋಗ್ಯ ವಿಮಾ ಯೋಜನೆಯಿಂದ ಗ್ರಾಮೀಣ ಹಾಗೂ ಬಡವರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಕಾರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

Vijaya Karnataka 17 Sep 2019, 4:10 pm
ಗುಡಿಬಂಡೆ: ಆಯುಷ್‌ ಮಾನ್‌ ಭಾರತ್‌ ಆರೋಗ್ಯ ವಿಮಾ ಯೋಜನೆಯಿಂದ ಗ್ರಾಮೀಣ ಹಾಗೂ ಬಡವರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಕಾರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
Vijaya Karnataka Web 16 GUDI 1_10


ತಾಲೂಕಿನ ಉಲ್ಲೋಡು ಅಂಗನವಾಡಿ ಕೇಂದ್ರದಲ್ಲಿಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡಿದ ಪೋಷಣ್‌ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರ ಬಡವರ ಆರೋಗ್ಯ ದೃಷ್ಟಿಯಿಂದ ಜಾರಿಗೆ ತಂದಿರುವ ಆಯುಷ್‌ಮಾನ್‌ ಭಾರತ್‌ ಆರೋಗ್ಯ ವಿಮಾ ಯೋಜನೆಯಿಂದ ಈಗಾಗಲೇ ಅನೇಕರು ಅನೂಕೂಲ ಪಡೆದುಕೊಂಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿಆರೋಗ್ಯ ವಿಮಾ ಕಾರ್ಡ್‌ ಉಚಿತವಾಗಿ ಮಾಡಿಕೊಡುತ್ತಿದ್ದು, ಅರ್ಹರು ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಆಯುಷ್‌ಮಾನ್‌ ಆರೋಗ್ಯ ಕಾರ್ಡ್‌ ಮಾಡಿಸಿಕೊಳ್ಳಬಹುದು. ಒಂದು ವೇಳೆ ಆರೋಗ್ಯ ಕಾರ್ಡ್‌ ಮಾಡಿಸಿಕೊಳ್ಳದಿದ್ದರೂ ತಾವು ಚಿಕಿತ್ಸೆಗೆ ತೆರಳಿದಾಗ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ನೀಡಿ ಸ್ಥಳದಲ್ಲಿಯೇ ನೋಂದಣಿಯಾಗಬಹುದು ಎಂದರು.

ರಾಜ್ಯ ಪರಿಸರ ಮಿತ್ರ ಪುರಸ್ಕೃತ ಡಾ.ಗುಂಪು ಮರದ ಆನಂದ್‌ ಮಾತನಾಡಿ, ಗರ್ಭಿಣಿಯರು ತಮಗೆ ಸಿಗುವ ಪೋಷಕಾಂಶಯುಕ್ತ ಆಹಾರ ಸೇವಿಸಬೇಕು. ಪೌಷ್ಟಿಕ ಆಹಾರಗಳು ಅಂದರೇ ತಮಗೆ ಲಭ್ಯವಿರುವ ಸಿರಿಧಾನ್ಯಗಳಿಂದ ಮಾಡಿದ ಆಹಾರ, ಸಾವಯವ ಗೊಬ್ಬರಗಳಿಂದ ತಯಾರಿಸಿದ ತರಕಾರಿ ಮೊದಲಾದವುಗಳನ್ನು ಸೇವಿಸಿ ಆರೋಗ್ಯವಂತರಾಗಬೇಕು. ಯಾವುದೇ ಕಾರಣಕ್ಕೂ ಮಸಾಲೆಯುಕ್ತ, ಜಂಕ್‌ ಪುಡ್‌ಗಳನ್ನು ಸೇವಿಸಿದರೇ ಮುಂದಿನ ದಿನಗಳಲ್ಲಿಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ತಮ್ಮ ಮಗು ಜನಿಸಿದಾಗ ಗಿಡ ನೆಡಬೇಕು, ಜತೆಗೆ ತಮ್ಮ ಮಕ್ಕಳ ಹುಟ್ಟು ಹಬ್ಬಕ್ಕೊಂದು ಸಸಿ ನೆಟ್ಟು ಪೋಷಣೆ ಮಾಡಿದಾಗ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದರು.

ಉಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗರ್ಭಿಣೀಯರಿಗೆ ಸಾಮೂಹಿಕವಾಗಿ ಸೀಮಂತ ಮಾಡಲಾಯಿತು. ಗ್ರೀನ್‌ ವಾರಿಯರ್ಸ್ ತಂಡದ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಅಗಸೆ ಗಿಡಗಳನ್ನು ವಿತರಿಸಲಾಯಿತು.

ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಪದ್ಮಾವತಮ್ಮ, ಗ್ರೀನ್‌ ವಾರಿಯರ್ಸ್ ತಂಡದ ಗಂಗಾಧರ್‌, ನವೀನ್‌, ಬಾಲಾಜಿ, ನಾಗರಾಜ, ಐ.ಕೆ.ಸಿಂಗ್‌, ಆರೋಗ್ಯ ಇಲಾಖೆಯ ಗೀತಾಂಜಲಿ, ನಿರ್ಮಲಮ್ಮ, ಸರೋಜ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ