ಆ್ಯಪ್ನಗರ

ಅಜಾದ್‌, ತಿಲಕ್‌ ದೇಶ ಕಂಡ ಅಪ್ರತಿಮ ಹೋರಾಟಗಾರರು

ಈ ದೇಶ ಕಂಡ ಭಾರತದ ಸ್ಪಾತಂತ್ರ್ಯದ ಹೋರಾಟಗಾರರಲ್ಲಿ ಅಪ್ರತಿಮ ಹೋರಾಟಗಾರ ಚಂದ್ರಶೇಖರ್‌ ಅಜಾದ್‌ ಹಾಗೂ ಬಾಲಗಂಗಾಧರ ತಿಲಕ್‌ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆ ಗಣಿತ ಪರೀವಿಕ್ಷ ಕ ಶಿವಪ್ರಕಾಶ್‌ ತಿಳಿಸಿದರು.

Vijaya Karnataka 24 Jul 2019, 3:42 pm
ಚಿಕ್ಕಬಳ್ಳಾಪುರ: ಈ ದೇಶ ಕಂಡ ಭಾರತದ ಸ್ಪಾತಂತ್ರ್ಯದ ಹೋರಾಟಗಾರರಲ್ಲಿ ಅಪ್ರತಿಮ ಹೋರಾಟಗಾರ ಚಂದ್ರಶೇಖರ್‌ ಅಜಾದ್‌ ಹಾಗೂ ಬಾಲಗಂಗಾಧರ ತಿಲಕ್‌ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆ ಗಣಿತ ಪರೀವಿಕ್ಷ ಕ ಶಿವಪ್ರಕಾಶ್‌ ತಿಳಿಸಿದರು.
Vijaya Karnataka Web azad and tilak are the most unique fighters in the country
ಅಜಾದ್‌, ತಿಲಕ್‌ ದೇಶ ಕಂಡ ಅಪ್ರತಿಮ ಹೋರಾಟಗಾರರು


ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಚಂದ್ರಶೇಖರ್‌ ಅಜಾದ್‌ ಹಾಗೂ ಬಾಲಗಂಗಾಧರ ತಿಲಕ್‌ ಜಯಂತಿ ಕಾರ‍್ಯಕ್ರಮದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು.

ಬ್ರಿಟೀಷರಿಗೆ ಹಗಲಿರುಳು ಸಿಂಹಸ್ವಪ್ನವಾಗಿ ಅಜಾದ್‌ ಕಾಡಿದರು. ಭಾರತ ಮಾತೆಯನ್ನು ಬಂಧಮುಕ್ತಳನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಪ್ರಭುತ್ವ ಸ್ಥಾಪಿಸಿದ ವೀರ ಅಜಾದ್‌ ಕ್ರಾಂತಿಯಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಬೇಕು ಎಂಬುದು ಇವರ ಆಶಯವಾಗಿತ್ತು ಎಂದು ಹೇಳಿದರು.

ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್‌ ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿ ಸ್ವರಾಜ್ಯ ನನ್ನ ಜನ್ಮ ಸಿದ್ಧಹಕ್ಕು. ನಾನುದನ್ನು ಪಡದೇ ತೀರುತ್ತೇನೆ ಎಂಬ ಇವರ ಘರ್ಜನೆ ಇಂದಿಗೂ ಜನ ಸಾಮಾನ್ಯರ ನೆನಪಿನಲ್ಲಿ ಹಸಿರಾಗಿದೆ. ತಿಲಕರು ಭಾರತದ ಇತಿಹಾಸ, ಸಂಸ್ಕೃತ, ಹಿಂದೂ ಧರ್ಮ, ಗಣಿತ ಹಾಗೂ ಖಗೋಳ ಶಾಸ್ತ್ರಗಳ ಆಳವಾದ ಅಭ್ಯಾಸ ಮಾಡಿದ್ದರು ಎಂದು ತಿಳಿಸಿದರು.

ಕೆವಿ ಬಿ.ಎಡ್‌ ಕಾಲೇಜಿನ ಉಪನ್ಯಾಸಕ ರವಿಕುಮಾರ್‌ ಮಾತನಾಡಿ, ಇತ್ತೀಚೆಗೆ ಟೆಲಿವಿಷನ್‌, ಚಲನಚಿತ್ರ, ಮೊಬೈಲ್‌ಗಳಿಗೆ ವಿದ್ಯಾರ್ಥಿಗಳು ಮಾರುಹೋಗಿ ದೇಶದ ನಾಯಕರಾದ ಸುಭಾಷ್‌ಚಂದ್ರಬೋಸ್‌, ವಲ್ಲಭಬಾಯಿ ಪಟೇಲ್‌, ಬಾಲಗಂಗಾಧರ ತಿಲಕ್‌, ಭಗತ್‌ಸಿಂಗ್‌, ಲಾಲ್‌ ಬಹುದೂರ್‌ ಶಾಸ್ತ್ರಿಯಂಥ ನಾಯಕರನ್ನು ಈಗಿನ ಯುವಕರು ಮರೆಯುತ್ತಿದ್ದಾರೆ. ಇವರ ಜೀವನ ಚರಿತ್ರೆಯನ್ನು ಯುವಕರು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಇಂದು ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾನ್‌ ನಾಯಕರ ಆದರ್ಶಗಳನ್ನು ಪಾಲಿಸಬೇಕು. ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತು ನೀಡಬೇಕು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡು ಶಾಲೆಗೆ ಒಳ್ಳೆಯ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕೆ.ವಿ ಮತ್ತು ಪಂಚಗಿರಿ ದತ್ತಿಯ ಮ್ಯಾನೇಜರ್‌ ಲಕ್ಷ ್ಮಣ್‌ ಸ್ವಾಮಿ, ಪರಿಸರ ಪ್ರೇಮಿ ಗುಂಪುಮರದ ಆನಂದ್‌, ಶಿಕ್ಷ ಕರಾದ ಶ್ರೀನಿವಾಸಮೂರ್ತಿ, ಪ್ರತಿಭಾ, ಶಿವಣ್ಣ, ಮುರಳಿ, ನರಸಿಂಹಯ್ಯ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ