ಆ್ಯಪ್ನಗರ

ಬಿಎಸ್‌ವೈ ಸಿಎಂ ಆಗಲು ಕುರ್ಚಿ ಖಾಲಿ ಇಲ್ಲ ಎಂದ ಬಚ್ಚೇಗೌಡ

ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ರಾಜ್ಯದಲ್ಲಿ ಸಿಎಂ ಚೇರ್‌ ಖಾಲಿ ಅಲ್ಲ. ಆಗೋ ಸಮಯ ಬಂದರೆ ಅಗೇ ಆಗ್ತಾರೆ. ಈಗ ಹೇಗೆ ಹೇಳಲಿ? ಎಂದು ಸಂಸದ ಬಿ.ಎನ್‌.ಬಚ್ಚೇಗೌಡ ಹೇಳಿದರು.

Vijaya Karnataka 5 Jun 2019, 3:41 pm
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
Vijaya Karnataka Web bachegowda bsy yadiyurappa
ಬಿಎಸ್‌ವೈ ಸಿಎಂ ಆಗಲು ಕುರ್ಚಿ ಖಾಲಿ ಇಲ್ಲ ಎಂದ ಬಚ್ಚೇಗೌಡ


ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ರಾಜ್ಯದಲ್ಲಿ ಸಿಎಂ ಚೇರ್‌ ಖಾಲಿ ಅಲ್ಲ. ಆಗೋ ಸಮಯ ಬಂದರೆ ಅಗೇ ಆಗ್ತಾರೆ. ಈಗ ಹೇಗೆ ಹೇಳಲಿ? ಎಂದು ಸಂಸದ ಬಿ.ಎನ್‌.ಬಚ್ಚೇಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಬ್ಬರು ಸಿಎಂ ಇರುವಾಗ ಮತ್ತೊಬ್ಬರು ಸಿಎಂ ಆಗಲು ಹೇಗೆ ಸಾಧ್ಯ? ದಿಢೀರ್‌ ಎಂದು ಹೋಗಿ ಕುಳಿತುಕೊಳ್ಳಲು ಸಿಎಂ ಕುರ್ಚಿ ಎಂದರೆ ಖಾಲಿ ಕುರ್ಚಿ ಅಲ್ಲ ಎಂದರು.

ಆಪರೇಷನ್‌ ಕಮಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಿಂದ ಯಾವ ಅಪರೇಷನ್‌ ಕಮಲವೂ ಇಲ್ಲ. ಅವರವರ ಪಾಡಿಗೆ ಅವರು ಇದ್ದಾರೆ. ನಮ್ಮ ಪಾಡಿಗೆ ನಾವು ಇದ್ದೀವಿ. ಚುನಾವಣೆ ಸಂದರ್ಭದಲ್ಲಿ ಫಲಿತಾಂಶ ಪ್ರಕಟಗೊಂಡ 2-3 ದಿನದಲ್ಲಿ ಯಡಿಯೂರಪ್ಪ ಸಿಎಂ ಅಗ್ತಾರೆ ಎಂದು ಬಚ್ಚೇಗೌಡ ಹೇಳಿದ್ದರು. ಆದರೆ, ಈಗ ಅದರ ಬಗ್ಗೆ ಪ್ರತಿಕ್ರಿಯಿಸಿ ನಾನು ಹೇಳೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಎತ್ತಿನಹೊಳೆಗೆ ವಿರೋಧವಿಲ್ಲ: ಎತ್ತಿನಹೊಳೆ, ಎಚ್‌.ಎನ್‌.ವ್ಯಾಲಿ, ಕೆಸಿ ವ್ಯಾಲಿ ಯಾವುದೇ ಯೋಜನೆಗೆ ನಮ್ಮ ವಿರೋಧ ಇಲ್ಲ. ಎಲ್ಲಾ ಯೋಜನೆಗಳೂ ಬೇಕಾಗಿದೆ. ಅದರ ಬಗ್ಗೆ ಎಲ್ಲಾ ಸ್ಥಳೀಯ ಸಚಿವರು, ಶಾಸಕರು, ಅಧಿಕಾರಿಗಳೊಂದಿಗೆ ಪ್ರತ್ಯೇಕ ವಿಶೇಷ ಸಭೆಯನ್ನು ನಡೆಸಿ, ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ