ಚಿಂತಾಮಣಿ: ಮಧ್ಯಾಹ್ನದ ಬಿಸಿಯೂಟ ತಿಂದು ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಲಕ್ಷ್ಮಿದೇವನಕೋಟೆ ಸರಕಾರಿ ಪ್ರೌಢಶಾಲೆಯ ಸುಮಾರು 21 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರ ನಗರದಲ್ಲಿ ನಡೆದಿದೆ.
ಘಟನೆಯ ವಿವರ: ನಗರದ ಖಾಸಗಿಯವರಿಂದ ತಯಾರಿಸಲ್ಪಡುವ ಬಿಸಿಯೂಟ ನಿಗದಿತ ಸಮಯಕ್ಕೆ ಶಾಲೆಗೆ ಹೋಗಿದ್ದು, ಎಂದಿನಂತೆ ವಿದ್ಯಾರ್ಥಿಗಳಿಗೆ ಬಡಿಸಿದ್ದಾರೆ. ಬಿಸಿಯೂಟನ್ನು ತಿಂದು ಒಂದಿಬ್ಬರು ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಕೆಲವೇ ಕ್ಷ ಣಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳಿಗೆ ತೀವ್ರವಾದ ಹೊಟ್ಟೆನೋವು ಮತ್ತು ತಲೆ ಸುತ್ತುವಿಕೆ ಶುರುವಾಗಿದೆ. ಇದನ್ನು ಗಮನಿಸಿದ ಶಾಲೆಯ ಶಿಕ್ಷ ಕರು ಶಾಲೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೂ ವಿದ್ಯಾರ್ಥಿಗಳಿಗೆ ಸಮಸ್ಯೆ ಹೆಚ್ಚಾಗುತ್ತಿದ್ದುದನ್ನು ಗಮನಿಸಿದ ಶಿಕ್ಷ ಕರು ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ತೀವ್ರ ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಮ್ಮ ದ್ವಿಚಕ್ರವಾಹನಗಳ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅನ್ನದಲ್ಲಿ ಹಲ್ಲಿ?: ಇನ್ನು ಬಿಸಿಯೂಟದಲ್ಲಿ ಹಲ್ಲಿಯೊಂದು ಕಾಣಿಸಿಕೊಂಡಿದ್ದು, ಅದನ್ನು ತಿಂದಿದ್ದರಿಂದ ನಮಗೆ ಹೀಗಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಬಿಸಿಯೂಟದಲ್ಲಿ ಸುಪ್ರಿಯಾ ಎನ್ನುವ ವಿದ್ಯಾರ್ಥಿನಿಗೆ ಹಲ್ಲಿ ಕಾಣಿಸಿಕೊಂಡಿದ್ದು, ಆಕೆ ಅದನ್ನು ತಿನ್ನದೆ ಬಿಸಾಡಿದ್ದಾಳೆ. ತದನಂತರ ಅದನ್ನು ನಮಗೆ ತೋರಿಸಿದಳು. ಆ ವೇಳೆಗೆ ನಾವು ಊಟವನ್ನು ತಿಂದಿದ್ದೆವು. ಆದ್ದರಿಂದ ನಮಗೆ ಈ ರೀತಿ ಆಗಿದೆ ಎಂದು ಆಸ್ಪತ್ರೆ ಸೇರಿದ್ದ ಲಕ್ಷ್ಮಿದೇವನಕೋಟೆ ಶಾಲೆಯ ವಿದ್ಯಾರ್ಥಿ ಅಶೋಕ್ ತಿಳಿಸಿದನು.
ಭಯಭೀತರಾಗಿ ಆಸ್ಪತ್ರೆಗೆ ಧಾವಿಸಿದ ಪೋಷಕರು: ಇನ್ನು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ತಿಂದು ಅಸ್ವಸ್ಥರಾಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಲಕ್ಷ್ಮಿದೇವನಕೋಟೆ ಶಾಲೆಗೆ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳ ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆಗೆ ದೌಡಾಯಿಸಿದರು. ಆಸ್ಪತ್ರೆಗೆ ಬಂದು ತಮ್ಮ ತಮ್ಮ ಮಕ್ಕಳನ್ನು ಹುಡುಕಿ ಮಕ್ಕಳು ಆರೋಗ್ಯವಾಗಿದ್ದಾರೆ ಎನ್ನುವ ವಿಚಾರ ಖಚಿತಪಡಿಸಿಕೊಂಡ ನಂತರ ನಿಟ್ಟುಸಿರು ಬಿಟ್ಟಿದ್ದಾರೆ.
ಬಿಸಿಯೂಟವಲ್ಲ ಅದು ತಂಗಳೂಟ: ಇನ್ನು ತಾಲೂಕಿನಾದ್ಯಂತ ಬಹುತೇಕ ಶಾಲೆಗಳಲ್ಲಿ ಅಡುಗೆ ಕೋಣೆಯಲ್ಲೇ ಅಡಿಗೆ ಮಾಡಿ ಬಿಸಿಯೂಟ ಬಡಿಸುತ್ತಿದ್ದಾರೆ. ಆದರೆ ಕೆಲವು ಶಾಲೆಗಳಿಗೆ ಖಾಸಗಿಯವರು ನಗರದ ಒಂದು ಕಡೆ ತಯಾರು ಮಾಡಿ, ಅದನ್ನು ಶಾಲೆಗಳಿಗೆ ಸಾಗಿಸಿ ಅಲ್ಲಿ ಬಡಿಸುತ್ತಾರೆ. ಆದ್ದರಿಂದ ಇದಕ್ಕೆ ತಂಗಳೂಟ ಎಂದು ಕರೆಯುವುದು ಉತ್ತಮ ಎಂದು ವಿದ್ಯಾರ್ಥಿಯ ಪೋಷಕರೊಬ್ಬರು ತಮ್ಮ ಮಗನಿಗಾದ ಸ್ಥಿತಿಯನ್ನು ನೆನೆದು ನೋವುಪಟ್ಟುಕೊಳ್ಳುತ್ತಿದ್ದರು.
ಅಡುಗೆ ಮಾಡುವ ಮತ್ತು ಬಡಿಸುವ ಅಂತರದಲ್ಲಿ ಉಂಟಾಗುವ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಎಲ್ಲೋ ಅಡುಗೆ ಮಾಡಿಕೊಂಡು ಬರುವುದರಿಂದ ಅದರ ಶುಚಿತ್ವದ ಬಗ್ಗೆ ನಮಗೆ ಅರಿವಿಲ್ಲ. ನಮ್ಮಲ್ಲೇ ತಯಾರಾದರೆ ಅಲ್ಲಿನ ಶುಚಿತ್ವದ ಬಗ್ಗೆ ನಿಗಾ ವಹಿಸಲು ಸಾಧ್ಯ. ಮತ್ತು ನಮ್ಮಲ್ಲಿಯೇ ಅಡುಗೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಈಗಾಗಲೇ ನಾವು ಪತ್ರವನ್ನು ಬರೆದು, ಮನವಿ ಮಾಡಿದ್ದೇವೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಶ್ಯಾಮಸುಂದರ್ ತಿಳಿಸಿದರು.
ಒಂದು ದಿನ ವೈದ್ಯರ ನಿಗಾದಲ್ಲಿ ಮಕ್ಕಳು: ಇನ್ನು ಬಿಸಿಯೂಟ ತಿಂದು ಅಸ್ವಸ್ಥರಾಗಿರುವ ವಿದ್ಯಾರ್ಥಿಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲಿಯೇ 24 ಗಂಟೆಗಳ ಕಾಲ ನಿಗಾದಲ್ಲಿ ಇಡಲಾಗುವುದು. ತದನಂತರ ಮನೆಗಳಿಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಗೆ ಅಧಿಕಾರಿಗಳ ದಂಡು: ವಿಷಯ ತಿಳಿಯುತ್ತಿದ್ದಂತೆ ನಗರದ ಸಾರ್ವಜನಿಕ ಆಸ್ಪತ್ರೆಗೆ ತಾಲೂಕು ಮಟ್ಟದ ಅಧಿಕಾರಿಗಳ ದಂಡು ಭೇಟಿ ಕೊಟ್ಟು, ವಿದ್ಯಾರ್ಥಿಗಳ ಯೋಗಕ್ಷೇಮವನ್ನು ವಿಚಾರಿಸಿತು. ಗ್ರಾಮಾಂತರ ಅರಕ್ಷ ಕ ವೃತ್ತ ನಿರೀಕ್ಷ ಕ ಜಗದೀಶ್ರೆಡ್ಡಿ, ತಹಸೀಲ್ದಾರ್ ಎಸ್.ಎಲ್.ವಿಶ್ವನಾಥ್, ಬಿಇಒ ಕಚೇರಿಯ ನಾಗರಾಜ್, ಲಕ್ಷ್ಮಿದೇವನ ಕೋಟೆ ಗ್ರಾಮದ ಮುಖಂಡರು ಸೇರಿದಂತೆ ಹಲವರು ಭೇಟಿ ನೀಡಿದ್ದರು.
ಅಸ್ವಸ್ಥಗೊಂಡ ವಿದ್ಯಾರ್ಥಿಗಳು
ಅಶೋಕ್, ಆಕಾಶ್, ನಂದೀಶ, ನವೀನ್, ಸಂಧ್ಯಾ, ಶೋಭಾ, ಗಗನ್, ನಿತ್ಯಾ, ತೇಜಸ್ವಿನಿ, ಉಮೇಶ, ಶಿವದರ್ಶಿನಿ, ಪುನೀತ್ ಕುಮಾರ್, ಸಾಗರ್, ಶಿವಮಣಿ, ಸೋಮಶೇಖರ್, ನವೀನ್, ನರಸಿಂಹಮೂರ್ತಿ ಸೇರಿಂದಂತೆ ಒಟ್ಟು 21 ವಿದ್ಯಾರ್ಥಿಗಳು ಆಸ್ಪತ್ರೆ ಸೇರಿದ್ದಾರೆ.
ಮಧ್ಯಾಹ್ನ ಬಿಸಿಯೂಟ ತಿನ್ನುತ್ತಿದ್ದಂತೆ ಒಂದಿಬ್ಬರು ವಿದ್ಯಾರ್ಥಿಗಳು ಹೊಟ್ಟೆ ನೋವು ಎನ್ನುತ್ತಾ ಅಸ್ವಸ್ಥರಾದರು. ಅವರಿಗೆ ನಮ್ಮ ಕೈಲಾದಷ್ಟು ಉಪಚಾರ ಮಾಡಿದೆವು, ಆದರೆ ಅದು ಸಾಧ್ಯವಾಗಲಿಲ್ಲ. ತಕ್ಷ ಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ.
-ಲಕ್ಷ್ಮಿದೇವನಕೋಟೆ ಸರಕಾರಿ ಪ್ರೌಢಶಾಲೆಯ ಶಿಕ್ಷ ಕರು
ತಾಲೂಕಿನಾದ್ಯಂತ ಈ ಹಿಂದೆ 20 ಶಾಲೆಗಳಿಗೆ ಖಾಸಗಿಯವರು ಬಿಸಿಯೂಟ ರವಾನೆ ಮಾಡುತ್ತಿದ್ದರು. ಇದೀಗ ಅದನ್ನು ಹತ್ತಕ್ಕೆ ಇಳಿಸಲಾಗಿದೆ. ಈ ಹತ್ತು ಶಾಲೆಗಳಿಗೂ ಅಡುಗೆಯವರನ್ನು ನೇಮಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು.
-ನರೇಂದ್ರ ಕುಮಾರ್, ಕ್ಷೇತ್ರ ಶಿಕ್ಷ ಣಾಧಿಕಾರಿ
ವಿದ್ಯಾರ್ಥಿಗಳಿಗೆ ಉಂಟಾಗಿರುವ ಸಮಸ್ಯೆ ಬ್ಯಾಕ್ಟೀರಿಯಾದಿಂದಾಗಿರಬಹುದು ಅಥವಾ ಅರೆಬೆಂದ ಆಹಾರದಿಂದ ಆಗಿರಬಹದು, ಪಾತ್ರೆಗಳ ಕಾರಣದಿಂದಲೂ ಆಗಿರಬಹದು. ಒಟ್ಟಾರೆ ವರದಿ ಬರುವುದಕ್ಕೂ ಮುನ್ನಾ ಯಾವುದು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಸದ್ಯಕ್ಕೆ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ. ಮಕ್ಕಳು ತಿಂದ ಬಿಸಿಯೂಟ ಮತ್ತು ಸಾಂಬರ್, ಕುಡಿವ ನೀರು ಎಲ್ಲವನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಮಸ್ಯೆಗೆ ನಿಖರ ಕಾರಣ ಗೊತ್ತಾಗುತ್ತದೆ.
-ಡಾ.ರಘುನಾಥ್, ವೈದ್ಯರು, ಸಾರ್ವಜನಿಕ ಆಸ್ಪತ್ರೆ, ಚಿಂತಾಮಣಿ
ಘಟನೆಯ ವಿವರ: ನಗರದ ಖಾಸಗಿಯವರಿಂದ ತಯಾರಿಸಲ್ಪಡುವ ಬಿಸಿಯೂಟ ನಿಗದಿತ ಸಮಯಕ್ಕೆ ಶಾಲೆಗೆ ಹೋಗಿದ್ದು, ಎಂದಿನಂತೆ ವಿದ್ಯಾರ್ಥಿಗಳಿಗೆ ಬಡಿಸಿದ್ದಾರೆ. ಬಿಸಿಯೂಟನ್ನು ತಿಂದು ಒಂದಿಬ್ಬರು ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಕೆಲವೇ ಕ್ಷ ಣಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳಿಗೆ ತೀವ್ರವಾದ ಹೊಟ್ಟೆನೋವು ಮತ್ತು ತಲೆ ಸುತ್ತುವಿಕೆ ಶುರುವಾಗಿದೆ. ಇದನ್ನು ಗಮನಿಸಿದ ಶಾಲೆಯ ಶಿಕ್ಷ ಕರು ಶಾಲೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೂ ವಿದ್ಯಾರ್ಥಿಗಳಿಗೆ ಸಮಸ್ಯೆ ಹೆಚ್ಚಾಗುತ್ತಿದ್ದುದನ್ನು ಗಮನಿಸಿದ ಶಿಕ್ಷ ಕರು ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ತೀವ್ರ ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಮ್ಮ ದ್ವಿಚಕ್ರವಾಹನಗಳ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅನ್ನದಲ್ಲಿ ಹಲ್ಲಿ?: ಇನ್ನು ಬಿಸಿಯೂಟದಲ್ಲಿ ಹಲ್ಲಿಯೊಂದು ಕಾಣಿಸಿಕೊಂಡಿದ್ದು, ಅದನ್ನು ತಿಂದಿದ್ದರಿಂದ ನಮಗೆ ಹೀಗಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಬಿಸಿಯೂಟದಲ್ಲಿ ಸುಪ್ರಿಯಾ ಎನ್ನುವ ವಿದ್ಯಾರ್ಥಿನಿಗೆ ಹಲ್ಲಿ ಕಾಣಿಸಿಕೊಂಡಿದ್ದು, ಆಕೆ ಅದನ್ನು ತಿನ್ನದೆ ಬಿಸಾಡಿದ್ದಾಳೆ. ತದನಂತರ ಅದನ್ನು ನಮಗೆ ತೋರಿಸಿದಳು. ಆ ವೇಳೆಗೆ ನಾವು ಊಟವನ್ನು ತಿಂದಿದ್ದೆವು. ಆದ್ದರಿಂದ ನಮಗೆ ಈ ರೀತಿ ಆಗಿದೆ ಎಂದು ಆಸ್ಪತ್ರೆ ಸೇರಿದ್ದ ಲಕ್ಷ್ಮಿದೇವನಕೋಟೆ ಶಾಲೆಯ ವಿದ್ಯಾರ್ಥಿ ಅಶೋಕ್ ತಿಳಿಸಿದನು.
ಭಯಭೀತರಾಗಿ ಆಸ್ಪತ್ರೆಗೆ ಧಾವಿಸಿದ ಪೋಷಕರು: ಇನ್ನು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ತಿಂದು ಅಸ್ವಸ್ಥರಾಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಲಕ್ಷ್ಮಿದೇವನಕೋಟೆ ಶಾಲೆಗೆ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳ ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆಗೆ ದೌಡಾಯಿಸಿದರು. ಆಸ್ಪತ್ರೆಗೆ ಬಂದು ತಮ್ಮ ತಮ್ಮ ಮಕ್ಕಳನ್ನು ಹುಡುಕಿ ಮಕ್ಕಳು ಆರೋಗ್ಯವಾಗಿದ್ದಾರೆ ಎನ್ನುವ ವಿಚಾರ ಖಚಿತಪಡಿಸಿಕೊಂಡ ನಂತರ ನಿಟ್ಟುಸಿರು ಬಿಟ್ಟಿದ್ದಾರೆ.
ಬಿಸಿಯೂಟವಲ್ಲ ಅದು ತಂಗಳೂಟ: ಇನ್ನು ತಾಲೂಕಿನಾದ್ಯಂತ ಬಹುತೇಕ ಶಾಲೆಗಳಲ್ಲಿ ಅಡುಗೆ ಕೋಣೆಯಲ್ಲೇ ಅಡಿಗೆ ಮಾಡಿ ಬಿಸಿಯೂಟ ಬಡಿಸುತ್ತಿದ್ದಾರೆ. ಆದರೆ ಕೆಲವು ಶಾಲೆಗಳಿಗೆ ಖಾಸಗಿಯವರು ನಗರದ ಒಂದು ಕಡೆ ತಯಾರು ಮಾಡಿ, ಅದನ್ನು ಶಾಲೆಗಳಿಗೆ ಸಾಗಿಸಿ ಅಲ್ಲಿ ಬಡಿಸುತ್ತಾರೆ. ಆದ್ದರಿಂದ ಇದಕ್ಕೆ ತಂಗಳೂಟ ಎಂದು ಕರೆಯುವುದು ಉತ್ತಮ ಎಂದು ವಿದ್ಯಾರ್ಥಿಯ ಪೋಷಕರೊಬ್ಬರು ತಮ್ಮ ಮಗನಿಗಾದ ಸ್ಥಿತಿಯನ್ನು ನೆನೆದು ನೋವುಪಟ್ಟುಕೊಳ್ಳುತ್ತಿದ್ದರು.
ಅಡುಗೆ ಮಾಡುವ ಮತ್ತು ಬಡಿಸುವ ಅಂತರದಲ್ಲಿ ಉಂಟಾಗುವ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಎಲ್ಲೋ ಅಡುಗೆ ಮಾಡಿಕೊಂಡು ಬರುವುದರಿಂದ ಅದರ ಶುಚಿತ್ವದ ಬಗ್ಗೆ ನಮಗೆ ಅರಿವಿಲ್ಲ. ನಮ್ಮಲ್ಲೇ ತಯಾರಾದರೆ ಅಲ್ಲಿನ ಶುಚಿತ್ವದ ಬಗ್ಗೆ ನಿಗಾ ವಹಿಸಲು ಸಾಧ್ಯ. ಮತ್ತು ನಮ್ಮಲ್ಲಿಯೇ ಅಡುಗೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಈಗಾಗಲೇ ನಾವು ಪತ್ರವನ್ನು ಬರೆದು, ಮನವಿ ಮಾಡಿದ್ದೇವೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಶ್ಯಾಮಸುಂದರ್ ತಿಳಿಸಿದರು.
ಒಂದು ದಿನ ವೈದ್ಯರ ನಿಗಾದಲ್ಲಿ ಮಕ್ಕಳು: ಇನ್ನು ಬಿಸಿಯೂಟ ತಿಂದು ಅಸ್ವಸ್ಥರಾಗಿರುವ ವಿದ್ಯಾರ್ಥಿಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲಿಯೇ 24 ಗಂಟೆಗಳ ಕಾಲ ನಿಗಾದಲ್ಲಿ ಇಡಲಾಗುವುದು. ತದನಂತರ ಮನೆಗಳಿಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಗೆ ಅಧಿಕಾರಿಗಳ ದಂಡು: ವಿಷಯ ತಿಳಿಯುತ್ತಿದ್ದಂತೆ ನಗರದ ಸಾರ್ವಜನಿಕ ಆಸ್ಪತ್ರೆಗೆ ತಾಲೂಕು ಮಟ್ಟದ ಅಧಿಕಾರಿಗಳ ದಂಡು ಭೇಟಿ ಕೊಟ್ಟು, ವಿದ್ಯಾರ್ಥಿಗಳ ಯೋಗಕ್ಷೇಮವನ್ನು ವಿಚಾರಿಸಿತು. ಗ್ರಾಮಾಂತರ ಅರಕ್ಷ ಕ ವೃತ್ತ ನಿರೀಕ್ಷ ಕ ಜಗದೀಶ್ರೆಡ್ಡಿ, ತಹಸೀಲ್ದಾರ್ ಎಸ್.ಎಲ್.ವಿಶ್ವನಾಥ್, ಬಿಇಒ ಕಚೇರಿಯ ನಾಗರಾಜ್, ಲಕ್ಷ್ಮಿದೇವನ ಕೋಟೆ ಗ್ರಾಮದ ಮುಖಂಡರು ಸೇರಿದಂತೆ ಹಲವರು ಭೇಟಿ ನೀಡಿದ್ದರು.
ಅಸ್ವಸ್ಥಗೊಂಡ ವಿದ್ಯಾರ್ಥಿಗಳು
ಅಶೋಕ್, ಆಕಾಶ್, ನಂದೀಶ, ನವೀನ್, ಸಂಧ್ಯಾ, ಶೋಭಾ, ಗಗನ್, ನಿತ್ಯಾ, ತೇಜಸ್ವಿನಿ, ಉಮೇಶ, ಶಿವದರ್ಶಿನಿ, ಪುನೀತ್ ಕುಮಾರ್, ಸಾಗರ್, ಶಿವಮಣಿ, ಸೋಮಶೇಖರ್, ನವೀನ್, ನರಸಿಂಹಮೂರ್ತಿ ಸೇರಿಂದಂತೆ ಒಟ್ಟು 21 ವಿದ್ಯಾರ್ಥಿಗಳು ಆಸ್ಪತ್ರೆ ಸೇರಿದ್ದಾರೆ.
ಮಧ್ಯಾಹ್ನ ಬಿಸಿಯೂಟ ತಿನ್ನುತ್ತಿದ್ದಂತೆ ಒಂದಿಬ್ಬರು ವಿದ್ಯಾರ್ಥಿಗಳು ಹೊಟ್ಟೆ ನೋವು ಎನ್ನುತ್ತಾ ಅಸ್ವಸ್ಥರಾದರು. ಅವರಿಗೆ ನಮ್ಮ ಕೈಲಾದಷ್ಟು ಉಪಚಾರ ಮಾಡಿದೆವು, ಆದರೆ ಅದು ಸಾಧ್ಯವಾಗಲಿಲ್ಲ. ತಕ್ಷ ಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ.
-ಲಕ್ಷ್ಮಿದೇವನಕೋಟೆ ಸರಕಾರಿ ಪ್ರೌಢಶಾಲೆಯ ಶಿಕ್ಷ ಕರು
ತಾಲೂಕಿನಾದ್ಯಂತ ಈ ಹಿಂದೆ 20 ಶಾಲೆಗಳಿಗೆ ಖಾಸಗಿಯವರು ಬಿಸಿಯೂಟ ರವಾನೆ ಮಾಡುತ್ತಿದ್ದರು. ಇದೀಗ ಅದನ್ನು ಹತ್ತಕ್ಕೆ ಇಳಿಸಲಾಗಿದೆ. ಈ ಹತ್ತು ಶಾಲೆಗಳಿಗೂ ಅಡುಗೆಯವರನ್ನು ನೇಮಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು.
-ನರೇಂದ್ರ ಕುಮಾರ್, ಕ್ಷೇತ್ರ ಶಿಕ್ಷ ಣಾಧಿಕಾರಿ
ವಿದ್ಯಾರ್ಥಿಗಳಿಗೆ ಉಂಟಾಗಿರುವ ಸಮಸ್ಯೆ ಬ್ಯಾಕ್ಟೀರಿಯಾದಿಂದಾಗಿರಬಹುದು ಅಥವಾ ಅರೆಬೆಂದ ಆಹಾರದಿಂದ ಆಗಿರಬಹದು, ಪಾತ್ರೆಗಳ ಕಾರಣದಿಂದಲೂ ಆಗಿರಬಹದು. ಒಟ್ಟಾರೆ ವರದಿ ಬರುವುದಕ್ಕೂ ಮುನ್ನಾ ಯಾವುದು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಸದ್ಯಕ್ಕೆ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ. ಮಕ್ಕಳು ತಿಂದ ಬಿಸಿಯೂಟ ಮತ್ತು ಸಾಂಬರ್, ಕುಡಿವ ನೀರು ಎಲ್ಲವನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಮಸ್ಯೆಗೆ ನಿಖರ ಕಾರಣ ಗೊತ್ತಾಗುತ್ತದೆ.
-ಡಾ.ರಘುನಾಥ್, ವೈದ್ಯರು, ಸಾರ್ವಜನಿಕ ಆಸ್ಪತ್ರೆ, ಚಿಂತಾಮಣಿ