ಆ್ಯಪ್ನಗರ

ಬಿಜೆಪಿಗೆ ಅಧಿಕಾರ ಹಿಡಿಯುವ ತಂತ್ರವಷ್ಟೇ ಗೊತ್ತು, ಅಭಿವೃದ್ಧಿ ಮಂತ್ರ ಗೊತ್ತಿಲ್ಲ: ಖರ್ಗೆ

ಬಿಜೆಪಿಗೆ ಅಧಿಕಾರ ಹಿಡಿಯುವ ತಂತ್ರ ಮಾತ್ರವೇ ಗೊತ್ತು. ಆದರೆ, ದೇಶ ಮುನ್ನಡೆಸುವುದು ಹೇಗೆ ಎಂದು ತಿಳಿದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿ ಜಿಡಿಪಿ ಕುಸಿತದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka Web 2 Dec 2019, 4:29 pm
ಚಿಕ್ಕಬಳ್ಳಾಪುರ: ಬಿಜೆಪಿಗೆ ಅಧಿಕಾರ ಹಿಡಿಯುವ ತಂತ್ರ ಮಾತ್ರವೇ ಗೊತ್ತು. ಆದರೆ, ದೇಶ ಮುನ್ನಡೆಸುವುದು ಹೇಗೆ ಎಂದು ತಿಳಿದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು. ದೇಶದ ಪ್ರಸ್ತುತ ಜಿಡಿಪಿ ಬೆಳವಣಿಗೆ ದರ ಶೇ. 4.5ಕ್ಕೆ ಕುಸಿದಿದೆ. ಇದು ಕಳೆದ ಏಳು ವರ್ಷದಲ್ಲೇ ಕನಿಷ್ಠ ಮಟ್ಟದ ಜಿಡಿಪಿ ವೃದ್ಧಿ ದರವಾಗಿದೆ ಎಂದು ಹೇಳಿದರು.
Vijaya Karnataka Web mallikarjun kharge
ಮಲ್ಲಿಕಾರ್ಜುನ ಖರ್ಗೆ


ಯುಪಿಎ ಸರಕಾರದ ಅವಧಿಯಲ್ಲಿ ಕೃಷಿ ಉತ್ಪಾದನೆಯಲ್ಲಿ ಶೇ.4.5 ಇದ್ದದ್ದು, ಈಗ ಶೇ.2.5ಕ್ಕೆ ಕುಸಿದೆ. ಜತೆಗೆ ನಿರುದ್ಯೋಗ ಸಮಸ್ಯೆ, ಬಂಡವಾಳ ಹೂಡಿಕೆ ಕುಸಿತ ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ರಗಳಲ್ಲೂ ಬೆಳವಣಿಗೆ ದರ ತೀವ್ರ ಕುಸಿತ ಕಂಡಿದೆ.

ಇದಷ್ಟೆ ಅಲ್ಲದೆ, ಬಿಜೆಪಿ ಸರಕಾರ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂಥವರು ನಮಗೆ ಪಾಠಸ ಮಾಡಲು ಬರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರ ರಸ್ತೆಗೆ ಗುಂಡಿ ಬೀಳದಿದ್ರೂ ಡಾಂಬರ್ ಮೇಲೆ ಡಾಂಬರ್! ಟಾರಿನಲ್ಲಿ ಅಕ್ರಮದ ವಾಸನೆ!

ಇವರಿಗೆ (ಬಿಜೆಪಿ) ದೇಶ ಮುನ್ನಡೆಸುವುದು ಹೇಗೆ ಎಂಬುದೇ ಗೊತ್ತಿಲ್ಲ. ಆದರೆ, ಮತ ಸಂಪಾದನೆ, ಅಧಿಕಾರಕ್ಕೆ ಬರುವ ತಂತ್ರ ಚೆನ್ನಾಗಿ ಗೊತ್ತಿದೆ. ಹೀಗಾಗಿ ದೇಶದ ಪರಿಸ್ಥಿತಿ ದಿನೇದಿನೆ ಹದಗೆಡುತ್ತಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ