ಆ್ಯಪ್ನಗರ

ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌; ಬಿಜೆಪಿ ಪ್ರತಿಭಟನೆ

ಇಬ್ಬರು ವ್ಯಕ್ತಿಗಳು ತಮ್ಮ ಫೇಸ್‌ಬುಕ್‌ನ ಪೇಜ್‌ನಲ್ಲಿ ದೇಶವಿರೋಧಿ ಪೋಸ್ಟ್‌ಗಳನ್ನು ಷೇರ್‌ ಮಾಡಿದ್ದಾರೆ. ಈ ಹಿನ್ನೆಲೆ ಅವರನ್ನು ಬಂಧಿಸುವಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರ ಪೊಲೀಸ್‌ ಠಾಣೆಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

Vijaya Karnataka 1 Mar 2019, 8:41 pm
ಚಿಕ್ಕಬಳ್ಳಾಪುರ: ಫೇಸ್‌ಬುಕ್‌ ಪೇಜ್‌ನಲ್ಲಿ ಪಾಕಿಸ್ತಾನದ ಪರವಾಗಿ ಚಿತ್ರಗಳನ್ನು ಪೋಸ್ಟ್‌ ಮಾಡಿರುವ ಇಬ್ಬರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರ ಪೊಲೀಸ್‌ ಠಾಣೆಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web facebook


ಇಬ್ಬರು ವ್ಯಕ್ತಿಗಳು ತಮ್ಮ ಫೇಸ್‌ಬುಕ್‌ನ ಪೇಜ್‌ನಲ್ಲಿ ದೇಶವಿರೋಧಿ ಪೋಸ್ಟ್‌ಗಳನ್ನು ಷೇರ್‌ ಮಾಡಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಭಗತ್‌ಸಿಂಗ್‌ ನಗರದಲ್ಲಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸರಕಾರಿ ಅಧಿಕಾರಿಯಾಗಿರುವ ಎಂ.ಡಿ. ಇಮ್ರಾನ್‌ ಎಂಬಾತ 'ಉಗ್ರ ಸತ್ತಿದ್ದಾನೆ ಎಂದು ನಂಬಿಸಲು ಎಡಿಟ್‌ ಫೋಟೋ ಹರಿಯಬಿಟ್ಟ ಬಿಜೆಪಿ ಮತ್ತು ಎಂಜಲು ಮಾಧ್ಯಮಗಳು' ಎಂದು ಪೋಸ್ಟ್‌ ಮಾಡಿದ್ದಾನೆ. ಮತ್ತೊಬ್ಬ ವ್ಯಕ್ತಿ 'ಐ ಸ್ಟಾಂಡ್‌ ವಿತ್‌ ಪಾಕಿಸ್ತಾನ್‌ ಆರ್ಮಿ' ಎಂದು ಪೋಸ್ಟ್‌ ಮಾಡಿದ್ದಾನೆ. ಈ ಪೋಸ್ಟ್‌ಗಳನ್ನು ನೋಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಗುರುವಾರ ಬೆಳಗ್ಗೆ ಭಗತ್‌ಸಿಂಗ್‌ ನಗರದಲ್ಲಿನ ಕೆಎಸ್‌ಆರ್‌ಟಿಸಿ ಗ್ಯಾರೇಜ್‌ಗೆ ಮುತ್ತಿಗೆ ಹಾಕಿ, 'ದೇಶವಿರೋಧಿಗಳನ್ನು' ಬಂಧಿಸಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಇಮ್ರಾನ್‌ನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದರು.

ಠಾಣೆಗೂ ಆಗಮಿಸಿದ ಕಾರ್ಯಕರ್ತರು, ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು, ದೇಶವಿರೋಧಿಯಾಗಿ ಮಾತನಾಡಿದ ಬಗ್ಗೆ ವಿಡಿಯೋ ಇದ್ದರೆ ಕೊಡಿ, ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿರುವುದಾಗಿ ಯುವ ಮೋರ್ಚಾ ಮುಖಂಡ ಬಾಲಕೃಷ್ಣ ವಿಕಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ವರದರಾಜು, ಮಧುಚಂದ್ರ, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಾರ್ವಜನಿಕರು ಠಾಣೆ ಮುಂದೆ ಜಮಾಯಿಸಿದ್ದರು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು.

ಅಪಾಲಜಿ ಬರೆಸಿಕೊಂಡು ಬಿಟ್ಟಿದ್ದೇವೆ

ಈ ಬಗ್ಗೆ ವಿಕಗೆ ಪ್ರತಿಕ್ರಿಯೆ ನೀಡಿದ ಸಿಪಿಐ ಸುದರ್ಶನ್‌, ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವ ಬಿಜೆಪಿ ಮತ್ತು ಮಾಧ್ಯಮದವರನ್ನು ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್‌ ಮಾಡಿದ್ದಾನೆ. ಈ ಸಂಬಂಧ ವ್ಯಕ್ತಿಯ ವಿರುದ್ಧ 108 ಸೆಕ್ಷನ್‌ ಪ್ರಕಾರ ದೂರು ದಾಖಲಿಸಿಕೊಂಡು ತಹಸೀಲ್ದಾರ್‌ ಮುಂದೆ ಹಾಜರುಪಡಿಸಿ, ಬಾಂಡ್‌ ಪೇಪರ್‌ನಲ್ಲಿ ಅಪಾಲಜಿ ಪತ್ರ ಬರೆಸಿಕೊಂಡಿದ್ದೇವೆ. ನಂತರ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ