ಆ್ಯಪ್ನಗರ

ಆಪರೇಷನ್‌ ಕಮಲ ಬಗ್ಗೆ ಕುಮಾರಸ್ವಾಮಿ ಹುಚ್ಚುತನದ ಪರಮಾವಧಿ ಹೇಳಿಕೆ: ಬಿಎಸ್‌ವೈ

ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡುತ್ತೇವೆ ಅಂದ್ರೆ. ಜೆಡಿಎಸ್ - ಕಾಂಗ್ರೆಸ್ ಸಚಿವರು ಕಿತ್ತಾಡಿಕೊಂಡು ಬಡಿದಾಡಿಕೊಂಡು ಅಭಿವೃದ್ಧಿ ಮಾಡುತ್ತಿಲ್ಲ. ಯಾರೋ ಕೆಲವು ಕಾಂಗ್ರೆಸ್ ಶಾಸಕರು ಮುನಿಸಿಕೊಂಡಿದ್ದಾರೆ. ಅದಕ್ಕೆ ನಾನು ಏನು ಮಾಡಲಿ.

Vijaya Karnataka Web 25 Jan 2019, 6:54 pm
ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರದು ಹುಚ್ಚುತನದ ಪರಮಾವಧಿ. ನಾವು ಆಪರೇಷನ್‌ ಕಮಲಕ್ಕೆ ಕೈ ಹಾಕಿಲ್ಲ ಎಂದರೂ ಬೇಜವಾಬ್ದಾರಿ ಹೇಳಿಕೆ ಕೊಡೊದನ್ನು ಮೊದಲು ನಿಲ್ಲಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ,
ಈ ರೀತಿಯ ಸುದ್ದಿಗಳು ಮಾಡಿದ್ರೆ ನಾನು ಏನು ಮಾಡಲಿ. ನಮ್ಮ ಪಾಡಿಗೆ ನಾವು ಬರ ಅಧ್ಯಯನ ಮಾಡುತ್ತಿದ್ದೇವೆ. ಯಾವುದೇ ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ. 104 ಜನ ನಾವು ನಮ್ಮ ಜೊತೆ ಇಬ್ಬರು ಪಕ್ಷೇತರರು ಇದ್ದೇವೆ ಎಂದರು.

ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡುತ್ತೇವೆ ಅಂದ್ರೆ. ಜೆಡಿಎಸ್ - ಕಾಂಗ್ರೆಸ್ ಸಚಿವರು ಕಿತ್ತಾಡಿಕೊಂಡು ಬಡಿದಾಡಿಕೊಂಡು ಅಭಿವೃದ್ಧಿ ಮಾಡುತ್ತಿಲ್ಲ. ಯಾರೋ ಕೆಲವು ಕಾಂಗ್ರೆಸ್ ಶಾಸಕರು ಮುನಿಸಿಕೊಂಡಿದ್ದಾರೆ. ಅದಕ್ಕೆ ನಾನು ಏನು ಮಾಡಲಿ. ಅವರನ್ನು ಕಾಂಗ್ರೆಸ್ ನಾಯಕರೇ ಮನವೊಲಿಸಿಕೊಳ್ಳಲಿ ಎಂದರು.

ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶ. ಏನು ಪರಿಣಾಮ ಬೀರಲ್ಲ. ಒಂದು ಮೂರು ಸ್ಥಾನ‌ ಹೆಚ್ಚು ಗೆಲ್ಲಬಹುದು ಅಷ್ಟೇ. ಲೋಕಸಭೆಯಲ್ಲಿ ನಾವು 20 ರಿಂದ 22 ಸ್ಥಾನಗಳಲ್ಲಿ ಗೆಲ್ಲುತ್ತೇವೆ‌ ಎಂದ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ಬಿಜೆಪಿ ನಾಯಕರು ಆಪರೇಷನ್‌ ಕಮಲ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರಿಗೆ ಭಾರಿ ಮೊತ್ತ ಗಿಫ್ಟ್‌ ಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದರು ಎಂದು ಆರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ