ಕೆಎಸ್ಸಾರ್ಟಿಸಿ ಎದುರು ಜಯ ಕರ್ನಾಟಕ ಸಂಘನೆ ಪ್ರತಿಭಟನೆ
ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿ ಕಡೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ಬಸ್ ನಿಲುಗಡೆ ಮಾಡದೆ ತೊಂದರೆ ನೀಡುತ್ತಿರುವ ಬಗ್ಗೆ ಜಯ ಕರ್ನಾಟಕ ಸಂಘಟನೆ ನಗರದ ಸಾರಿಗೆ ಘಟಕದ ಮುಂದೆ ಪ್ರತಿಭಟನೆ ನಡೆಸಿತು.
ತೊಂಡೇಬಾವಿಯಿಂದ ಗೌರಿಬಿದನೂರು ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಾರಿಗೆ ಬಸ್ನಲ್ಲಿಪ್ರಯಾಣ ಮಾಡುತ್ತಿದ್ದು, ಪಾಸ್ ವಿದ್ಯಾರ್ಥಿಗಳಿಗೆ ಪ್ರಯಾಣ ನಿರಾಕರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹೋಗಲಾಗದೆ ಪರದಾಡುವಂತಾಗಿದೆ ಸಂಘದ ಅಧ್ಯಕ್ಷ ಜಿ.ಎ.ಪ್ರದೀಪ್ ಆರೋಪಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜ್, ಪಾಸ್ ವಿದ್ಯಾರ್ಥಿಗಳಿಗೆ ಪ್ರಯಾಣ ನಿರಾಕರಿಸಿದರೆ ಬಸ್ ತಡೆದು ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತೊಂಡೇಬಾವಿ ಹೋಬಳಿ ಘಟಕದ ಆಧ್ಯಕ್ಷ ಮುರಳಿ, ನರೇಶ್, ಭಾರ್ಗವ್, ನವೀನ್, ಅರುಣ್, ಕರವೇ ಬಣದ ಶ್ರೀಕಂಠ, ಶ್ರೀಧರ್, ಎಬಿವಿಪಿ ಸಂಚಾಲಕ ಚರಣ್ ಹಾಜರಿದ್ದರು.
ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿ ಕಡೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ಬಸ್ ನಿಲುಗಡೆ ಮಾಡದೆ ತೊಂದರೆ ನೀಡುತ್ತಿರುವ ಬಗ್ಗೆ ಜಯ ಕರ್ನಾಟಕ ಸಂಘಟನೆ ನಗರದ ಸಾರಿಗೆ ಘಟಕದ ಮುಂದೆ ಪ್ರತಿಭಟನೆ ನಡೆಸಿತು.
ತೊಂಡೇಬಾವಿಯಿಂದ ಗೌರಿಬಿದನೂರು ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಾರಿಗೆ ಬಸ್ನಲ್ಲಿಪ್ರಯಾಣ ಮಾಡುತ್ತಿದ್ದು, ಪಾಸ್ ವಿದ್ಯಾರ್ಥಿಗಳಿಗೆ ಪ್ರಯಾಣ ನಿರಾಕರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹೋಗಲಾಗದೆ ಪರದಾಡುವಂತಾಗಿದೆ ಸಂಘದ ಅಧ್ಯಕ್ಷ ಜಿ.ಎ.ಪ್ರದೀಪ್ ಆರೋಪಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜ್, ಪಾಸ್ ವಿದ್ಯಾರ್ಥಿಗಳಿಗೆ ಪ್ರಯಾಣ ನಿರಾಕರಿಸಿದರೆ ಬಸ್ ತಡೆದು ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತೊಂಡೇಬಾವಿ ಹೋಬಳಿ ಘಟಕದ ಆಧ್ಯಕ್ಷ ಮುರಳಿ, ನರೇಶ್, ಭಾರ್ಗವ್, ನವೀನ್, ಅರುಣ್, ಕರವೇ ಬಣದ ಶ್ರೀಕಂಠ, ಶ್ರೀಧರ್, ಎಬಿವಿಪಿ ಸಂಚಾಲಕ ಚರಣ್ ಹಾಜರಿದ್ದರು.