ಆ್ಯಪ್ನಗರ

ಕೇಂದ್ರ ಬಿಡುಗಡೆ ಮಾಡಿರುವ 1200 ಕೋ. ಈ ಹಿಂದಿನ ಕೊಡಗಿನ ಪರಿಹಾರ ನಿಧಿ: ಗೌಡ್ರ ಗಂಭೀರ ಆರೋಪ

ಕೇಂದ್ರದಿಂದ ಬಿಡುಗಡೆಯಾಗಿರುವ 1200 ಕೋಟಿ ನೆರೆ ಪರಿಹಾರ ನಿಧಿ ಕರ್ನಾಟಕಕ್ಕೆ ಕೊಟ್ಟಿರುವುದಲ್ಲ. ಈ ಹಿಂದೆ ಕೊಡಗಿನಲ್ಲಿ ಸಂಭವಿಸಿದ ನೆರೆಗೆ ನೀಡಿರುವ ಪರಿಹಾರ ನಿಧಿಯಾಗಿದ್ದು, ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ದೇವೇಗೌಡ ಆರೋಪಿಸಿದ್ದಾರೆ.

Vijaya Karnataka Web 9 Oct 2019, 11:09 am
ಚಿಕ್ಕಬಳ್ಳಾಪುರ: ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 1200 ಕೋಟಿ ಪ್ರವಾಹ ಪರಿಹಾರ ಹಣ ಈ ಹಿಂದಿನ ಕೊಡಗು ಪ್ರವಾಹಕ್ಕೆ ಸಂಬಂಧಿಸಿದ್ದಾಗಿದೆ. ಆದರೆ, ಈ ವರ್ಷ ಎದುರಾಗಿರುವ ಪ್ರವಾಹದ್ದು ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆರೋಪಿಸಿದ್ದಾರೆ.
Vijaya Karnataka Web Bengaluru: JD(S) Supremo H D Devegowda addresses a press conference at the part...
JD(S) Supremo H D Devegowda addresses a press conference at the party office in Bengaluru.Photo) (


ಪ್ರವಾಹದ ‘ಸುಳಿ’ಯಲ್ಲಿಬಿಜೆಪಿ ಸರಕಾರ

ಚಿಂತಾಮಣಿ ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಯೋಗಿನಾರೇಯಣ ಮಠದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ''1200 ಕೋಟಿ ರೂ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಂಗಳೂರು, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಉಂಟಾಗಿದ್ದ ಪ್ರವಾಹದ ನಷ್ಟಕ್ಕೆ ಸಂಬಂಧಿಸಿದ್ದು. ಆದರೆ ರಾಜ್ಯ ಸರಕಾರ ಅದನ್ನು ಮುಚ್ಚಿಡುತ್ತಿದೆ ಎಂದರು.

ಪಕ್ಷಕ್ಕೆ ಧಕ್ಕೆಯಾಗುವಂತ ಹೇಳಿಕೆ ನೀಡಿಲ್ಲ: ಹೈಕಮಾಂಡ್‌ಗೆ ಯತ್ನಾಳ್‌ ಪತ್ರ

ಉತ್ತರ ಕರ್ನಾಟಕದ ಪ್ರವಾಹದಲ್ಲಿ ಜನ ಬೀದಿಪಾಲಾಗಿದ್ದಾರೆ. ಇಂತಹ ಸಂಕಷ್ಟದಲ್ಲಿ ಕೇಂದ್ರ ಸರಕಾರ ಪರಿಹಾರ ಘೋಷಿಸುವ ಬದಲು ರಾಜ್ಯ ಸರಕಾರ ಸಲ್ಲಿಸಿರುವ ನಷ್ಟದ ವರದಿಯ ಮಾದರಿ ಸರಿಯಿಲ್ಲ ಎಂಬ ನೆಪವೊಡ್ಡಿ ತಿರಸ್ಕರಿಸಿರುವುದು ತಪ್ಪು ಎಂದರು.

ತಾಳೆಯಾಗದ ಕೇಂದ್ರ- ರಾಜ್ಯ ನೆರೆ ವರದಿ ಪರಿಹಾರಕ್ಕೆ ಅಡ್ಡಿ- ಎಚ್‌ಡಿಡಿ ಆರೋಪ

ಕೂಡಲೇ ಪರಿಹಾರ ಬಿಡುಗಡೆ ಮಾಡಲು ಒತ್ತಾಯಿಸಿ ಅಕ್ಟೋಬರ್ 10ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯಿಂದ ಫ್ರೀಡಂ ಪಾರ್ಕಿನವರೆಗೆ ಮೆರವಣೆಗೆ ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ದೇವೇಗೌಡ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ