ಆ್ಯಪ್ನಗರ

ಮಂತ್ರಿಯಾದ ಮೇಲೆ ಸುಧಾಕರ್‌ ಶಿವಮೊಗ್ಗಕ್ಕೆ ಕೆಲಸ ಮಾಡಿಕೊಡಬೇಕು: ಈಶ್ವರಪ್ಪ

ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಹಾಗೆಯೇ ಸುಧಾಕರ್‌ ಮಂತ್ರಿಯಾದ ಮೇಲೆ ಶಿವಮೊಗ್ಗಕ್ಕೆ ಕೆಲಸ ಮಾಡಿಕೊಡಬೇಕು ಎಂದು ಕೆಎಸ್‌ ಈಶ್ವರಪ್ಪ ಚುನಾವಣೆ ಫಲಿತಾಂಶಕ್ಕೂ ಮೊದಲೇ ಸುಧಾಕರ್‌ ಮಂತ್ರಿಯಾಗುವ ಭವಿಷ್ಯ ನುಡಿದ್ದಾರೆ.

Vijaya Karnataka Web 30 Nov 2019, 4:31 pm
ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕರ್ ಒಬ್ಬ ಛಲಗಾರ. ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದಿದ್ದಾರೆ. ಕ್ಷೇತ್ರದಲ್ಲಿ ಸುಧಾಕರ್ 20 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಉಪಚುನಾವಣೆ ಮುಗಿದ ಬಳಿಕ ವಿಜಯೋತ್ಸವ ಆಚರಣೆಯಲ್ಲಿ ಸುಧಾಕರ್‌ ಅವರೊಂದಿಗೆ ಊಟ ಮಾಡುತ್ತೇನೆ ಎಂದು ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.
Vijaya Karnataka Web KS Eshwarappa


ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಎಸ್‌ಈಶ್ವರಪ್ಪ, ನನ್ನ ಕ್ಷೇತ್ರದಲ್ಲಿ ಶಾಸಕನಾಗಲು ನನಗೆ ಮತ ಹಾಕಿದ್ದಾರೆ, ಆದರೆ, ಸುಧಾಕರ್‌ ಅವರನ್ನು ಮಂತ್ರಿ ಮಾಡಲು ಈ ಕ್ಷೇತ್ರದ ಜನ ಮತ ನೀಡಬೇಕು ಎಂದು ಮನವಿ ಮಾಡಿದರು.

ನನಗೆ ಗ್ರಾಮೀಣಭಿವದ್ಧಿ ಇಲಾಖೆ ಮಂತ್ರಿ ಸಿಕ್ಕಿದೆ. ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಹಳ್ಳಿಗಳಿಗೆ ರಸ್ತೆ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಿದ್ದೇನೆ. ನನಗೂ ಸ್ವಾರ್ಥ ಇದೆ.
ಸುಧಾಕರ್‌ಗೆ ಮಂತ್ರಿ ಸ್ಥಾನ ಸಿಕ್ಕ ಮೇಲೆ ಶಿವಮೊಗ್ಗಕ್ಕೂ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ಕ್ಷೇತ್ರದಲ್ಲಿ ಕುರುಬ ಸಮುದಾಯ ಸುಧಾಕರ್ ಅವರ ಜೊತೆಗಿದೆ ಎಂದು ಈಶ್ವರಪ್ಪ ಭರವಸೆ ನೀಡಿದರು.

ಚಿಕ್ಕಬಳ್ಳಾಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಂದಿ ಎಂ. ಅಂಜಿನಪ್ಪ, ಬಿಜೆಪಿಯಿಂದ ಡಾ. ಕೆ. ಸುಧಾಕರ್‌ ಹಾಗೂ ಜೆಡಿಎಸ್‌ನಿಂದ ಎನ್‌. ರಾಧಾಕೃಷ್ಣ ಸ್ಪರ್ಧಾಕಣದಲ್ಲಿ ಇದ್ದಾರೆ. ಕಾಂಗ್ರೆಸ್‌ನಿಂಗ ಬಿಜೆಪಿಗೆ ವಲಸೆ ಹೋಗಿರುವ ಸುಧಾಕರ್ ಅವರಿಗೆ ಪ್ರತಿಷ್ಠೆಯ ಚುನಾವಣೆ ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ