ಆ್ಯಪ್ನಗರ

ಆಶ್ರಯ ಯೋಜನೆಯ ಜಮೀನು ಒತ್ತುವರಿ ತೆರವು

ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂ. 14ರ 1.20 ಎಕರೆ ಜಮೀನಿನಲ್ಲಿ ಕೊಂಡರೆಡ್ಡಿಹಳ್ಳಿ ಗ್ರಾಮಸ್ಥರಿಗೆ ಆಶ್ರಯ ಯೋಜನೆಯಡಿ ಜಮೀನನ್ನು ಗುರುತಿಸಿದ್ದು, ಅದೇ ಜಮೀನು ಒತ್ತುವರಿಯಾಗಿದ್ದು, ಅದನ್ನು ತಾಲೂಕು ಆಡಳಿತ ಶುಕ್ರವಾರ ಸಂಜೆ ತೆರವುಗೊಳಿಸಿದ್ದಾರೆ.

Vijaya Karnataka 21 Jul 2019, 10:26 pm
ಗುಡಿಬಂಡೆ: ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂ. 14ರ 1.20 ಎಕರೆ ಜಮೀನಿನಲ್ಲಿ ಕೊಂಡರೆಡ್ಡಿಹಳ್ಳಿ ಗ್ರಾಮಸ್ಥರಿಗೆ ಆಶ್ರಯ ಯೋಜನೆಯಡಿ ಜಮೀನನ್ನು ಗುರುತಿಸಿದ್ದು, ಅದೇ ಜಮೀನು ಒತ್ತುವರಿಯಾಗಿದ್ದು, ಅದನ್ನು ತಾಲೂಕು ಆಡಳಿತ ಶುಕ್ರವಾರ ಸಂಜೆ ತೆರವುಗೊಳಿಸಿದ್ದಾರೆ.
Vijaya Karnataka Web clearing the land of the aashraya project
ಆಶ್ರಯ ಯೋಜನೆಯ ಜಮೀನು ಒತ್ತುವರಿ ತೆರವು


ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂ. 14ರ 1.20 ಎಕರೆ ಜಮೀನಿನಲ್ಲಿ ಕೊಂಡರೆಡ್ಡಿಹಳ್ಳಿ ಗ್ರಾಮಸ್ಥರಿಗೆ ಆಶ್ರಯ ಯೋಜನೆಯಡಿ 64 ನಿವೇಶನಗಳನ್ನು ಮಾಡಿದ್ದು ಅದರಲ್ಲಿ ಒಟ್ಟು 46 ಫಲಾನುಭವಿಗಳಿಗೆ ನಿವೇಶನವನ್ನು ನೀಡಲು ಉದ್ದೇಶಿಸಲಾಗಿತ್ತು. ಆದರೆ ಇದೇ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ತೆರವುಗೊಳಿಸಲು ಹೋದ ಅಧಿಕಾರಿಗಳ ವಿರುದ್ಧವೇ ಹಲವಾರು ಬಾರಿ ಗಲಾಟೆ ಮಾಡಿದ್ದರಿಂದ ಹಲವು ವರ್ಷಗಳಿಂದ ನಿವೇಶನಗಳ ಹಂಚಿಕೆಗೆ ವಿಳಂಬವಾಗಿತ್ತು.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಶುಕ್ರವಾರ ತಹಸೀಲ್ದಾರ್‌ ಡಿ.ಹನುಮಂತರಾಯಪ್ಪ, ತಾಪಂ ಇಒ ಸಿ.ಎಸ್‌. ಶ್ರೀನಾಥಗೌಡ, ಪಿಡಿಒ, ಸರ್ವಯರ್‌ ಹಾಗೂ ಪೊಲೀಸ್‌ ತಂಡದೊಂದಿಗೆ ಸ್ಥಳದ ಸರ್ವೆ ನಡೆಸಿ, ಗಡಿ ಗುರುತಿಸಿ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.

ಕಸಬಾ ಹೋಬಳಿ ರಾಜಸ್ವ ನಿರೀಕ್ಷ ಕ ಶಿವಕುಮಾರ್‌, ಗ್ರಾಮ ಲೆಕ್ಕಿಗ ಸುದರ್ಶನ್‌, ತಾಪಂ ರಾಮಾಂಜಿ, ರವಿಕುಮಾರ್‌, ಗ್ರಾಮದ ಮುಖಂಡ ಎಂ.ಸಿ ಚಿಕ್ಕನರಸಿಂಹಯ್ಯ ಸೇರಿಂತೆ ಇತರರು ಹಾಜರಿದ್ದರು.

ಆ.15ರೊಳಗೆ ನಿವೇಶನಗಳ ಹಕ್ಕು ಪತ್ರ ವಿತರಣೆ
ನಿವೇಶನರಹಿತರಿಗೆ ನಿವೇಶನಗಳನ್ನು ನೀಡುವ ಉದ್ದೇಶದಿಂದ ಒತ್ತುವರಿಯನ್ನು ತೆರವುಗೊಳಿಸಿ ಗಡಿಯನ್ನು ಗುರುತಿಸಿದ್ದೇವೆ. ಆಶ್ರಯ ಯೋಜನೆಯಡಿ ನಿವೇಶನಗಳ ರಚನೆ ಹಾಗೂ ಅಭಿವೃದ್ಧಿಪಡಿಸಲು ಹಂಪಸಂದ್ರ ಗ್ರಾಪಂ ಬ್ಯಾಂಕ್‌ ಖಾತೆಗೆ 94,500ರೂ.ಗಳನ್ನು ಆರ್‌ಟಿಜಿಎಸ್‌ ಮೂಲಕ ವರ್ಗಾವಣೆ ಮಾಡಲಾಗಿದೆ. ಈಗಾಗಲೇ 27 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಿದ್ದು, ಉಳಿದವರಿಗೆ ಆ.15ರೊಳಗೆ ನಿವೇಶನ ಹಕ್ಕುಪತ್ರಗಳನ್ನು ನೀಡಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್‌. ಶ್ರೀನಾಥಗೌಡ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ