ಆ್ಯಪ್ನಗರ

ಕಟಾವಿಗೆ ಬಂದ ಸಾವಿರಾರು ಟನ್‌ ದ್ರಾಕ್ಷಿ ತಿಪ್ಪೆಗೆ, 200 ಕೋಟಿ ರೂ. ನಷ್ಟ

ವಿಶ್ವದಾದ್ಯಂತ ತಲ್ಲಣ ಮೂಡಿಸಿದ ಕೊರೊನಾ ವೈರಸ್‌ ಸೋಂಕು ದೇಶದಲ್ಲಿ ಸೃಷ್ಟಿಸಿದ ಬಿಕ್ಕಟ್ಟು ಸದ್ಯ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದ್ದು, ಖರೀದಿದಾರರಿಲ್ಲದೆ ರೈತರು ಬೆಳೆದ ದ್ರಾಕ್ಷಿಯನ್ನು ತಿಪ್ಪೆಗೆ ಸುರಿಯಲು ಮುಂದಾಗುತ್ತಿದ್ದಾರೆ.

Vijaya Karnataka Web 30 Mar 2020, 2:29 pm
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸುಮಾರು 6,000 ಎಕರೆಯಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಆ ಪೈಕಿ ಸದ್ಯ ಸುಮಾರು 2,500 ಎಕರೆಯಲ್ಲಿ ಅಂದಾಜು 38 ಸಾವಿರ ಟನ್‌ ದ್ರಾಕ್ಷಿ ಕಟಾವಿಗೆ ಬಂದಿದೆ. ರೈತರು ಬೆಳೆದ ದ್ರಾಕ್ಷಿ ಸಕಾಲಕ್ಕೆ ಗ್ರಾಹಕರಿಗೆ ತಲುಪಿಸಲಾಗದೆ ತಿಪ್ಪೆಗೆ, ರಸ್ತೆಬದಿಗೆ ಎಸೆಯುಂತಾಗಿದ್ದು, ಈ ದ್ರಾಕ್ಷಿ ಖರೀದಿಯಾಗದಿದ್ದರೆ ಸುಮಾರು 200 ಕೋಟಿ ರೂ. ಅಧಿಕ ಹಾನಿಯಾಗಲಿದೆ ಅಂದಾಜಿಸಲಾಗುತ್ತಿದೆ.
Vijaya Karnataka Web Grapes Crop
ಲಾಕ್‌ಡೌನ್‌ ಹಿನ್ನಲೆಯಲ್ಲಿಮಾರಟಗಾರರು ಬರದೇ ಇರುವ ಕಾರಣ ಕಟಾವು ಮಾಡಲಾದ ದ್ರಾಕ್ಷಿಯನ್ನು ತಿಪ್ಪೆಗೆ ಎಸೆಯುತ್ತಿರುವ ರೈತರು.


ಕೊಳೆಯುತ್ತಿದೆ: ಜಿಲ್ಲೆಯಲ್ಲಿ ವಾರ್ಷಿಕ ಬೆಳೆಯಾದ ಬೆಂಗಳೂರು ಬ್ಲೂ(ಕಪ್ಪು ದ್ರಾಕ್ಷಿ) ಮತ್ತು ದಿಲ್‌ಕುಷ್‌, ಶರತ್‌, ಕೃಷ್ಣಾ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇಲ್ಲಿನ ದ್ರಾಕ್ಷಿ ಕೇರಳ, ಬಾಂಗ್ಲಾದೇಶ, ಉತ್ತರ ಪ್ರದೇಶ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಮಾರುಕಟ್ಟೆಗೆ ರವಾನೆಯಾಗುತ್ತದೆ. ಸದ್ಯ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಖರೀದಿದಾರರಿಲ್ಲದೆ, ಸರಕು ಸಾಗಣೆ ವ್ಯವಸ್ಥೆ ಅಸ್ತವ್ಯಸ್ಥಗೊಂಡ ಪರಿಣಾಮ ಕೊಯ್ಲಿಗೆ ಬಂದ ದ್ರಾಕ್ಷಿ ತೋಟದಲ್ಲಿ ಕೊಳೆಯಲು ಆರಂಭಿಸಿದೆ. ಇತ್ತೀಚೆಗಷ್ಟೇ ಆಲಿಕಲ್ಲಿನ ಮಳೆಯಿಂದ ಕಂಗೆಟ್ಟಿದ್ದ ದ್ರಾಕ್ಷಿ ಬೆಳೆಗಾರರಿಗೆ ಇದೀಗ ಕೊರೊನಾ ಭಯ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಜಿಲ್ಲೆಯ ನೂರಾರು ತೋಟಗಳಲ್ಲಿರುವ ದ್ರಾಕ್ಷಿ ಫಸಲಿನ ಕಟಾವು ಅವಧಿ ಆರಂಭಗೊಂಡಿದ್ದು, ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಳವಳ ಪಡುವ ಸ್ಥಿತಿ ನಿರ್ಮಾಣವಾಗಿದ್ದು, ಸರಕಾರದ ನೆರವಿಗಾಗಿ ರೈತರು ಮೊರೆ ಇಡುತ್ತಿದ್ದಾರೆ.

ಮನೆ, ಮಕ್ಕಳನ್ನು ಬಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿರುವ ನರ್ಸ್‌ ಒಬ್ಬರ ಭಾವನಾತ್ಮಕ ಪತ್ರವಿದು!

ಯಾರು ಕಟಾವಿಗೆ ಕೇಳುತ್ತಿಲ್ಲ: ಇನ್ನು ತಾಲೂಕಿನ ರೇಣುಮಾಕಲಹಳ್ಳಿಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿದ ಬೆಳೆದ ದ್ರಾಕ್ಷಿ ಬೆಳೆ ಖರೀದಿಯಿಲ್ಲದೆ ತಿಪ್ಪೆ ಪಾಲಾಗಿದೆ. ಗ್ರಾಮ ರೈತ ಮುನಿಶ್ಯಾಮಪ್ಪ ಎಂಬುವವರು ಸುಮಾರು 4 ಲಕ್ಷ ರು. ಖರ್ಚು ಮಾಡಿ ಒಂದೂವರೆ ಎಕರೆ ದ್ರಾಕ್ಷಿ ಬೆಳೆದಿದ್ದರು. ಬೆಳೆ ಫಸಲಿಗೆ ಬಂದಿದ್ದು, ಯಾರೂ ಕಟಾವಿಗೆ ಬರುತ್ತಿಲ್ಲ ಇದರಿಂದ ರೈತನಿಗೆ ಲಕ್ಷಾಂತರ ರು. ನಷ್ಟ ಸಂಭವಿಸಿದೆ.

ಲಾಕ್‌ಡೌನ್‌ ಘೋಷಣೆಗೆ ಮೊದಲು ಖರೀದಿಗಾರರು 10 ಟನ್‌ ಹಣ್ಣು ಕಟಾವು ಮಾಡಿಕೊಂಡು ಹೋಗಿದ್ದರು. ಇತ್ತೀಚೆಗೆ ಯಾವ ವರ್ತಕರೂ ಖರೀದಿಗೆ ಬರುತ್ತಿಲ್ಲ. ಹೀಗಾಗಿ, ತೋಟದಲ್ಲಿ ಕೊಳೆಯಲು ಆರಂಭಿಸಿದ 15 ಟನ್‌ ದ್ರಾಕ್ಷಿ ನಾವೇ ಕಟಾವು ಮಾಡಿ ತಿಪ್ಪೆಗೆ ಸುರಿದೆವು ಎಂದು ರೈತ ಮುನಿಶಾಮಪ್ಪ ಬೇಸರ ವ್ಯಕ್ತಪಡಿಸಿದರು.

ಸುಮಾರು 15 ಲಕ್ಷ ವೆಚ್ಚ ಮಾಡಿ ಹೊಸದಾಗಿ ಎರಡೂವರೆ ಎಕರೆ ದ್ರಾಕ್ಷಿ ತೋಟ ಮಾಡಿರುವೆ. 15 ದಿನಗಳ ಹಿಂದೆ ಅರ್ಧದಷ್ಟು ಕಟಾವು ಆಗಿದೆ. ಇನ್ನೂ ತೋಟದಲ್ಲಿ 30 ಟನ್‌ ದ್ರಾಕ್ಷಿ ಇದೆ. ಕೇಳುವವರೇ ಇಲ್ಲ. ಇಂತಹ ಸ್ಥಿತಿಯಲ್ಲಿಸರ್ಕಾರ ರೈತರಿಗೆ ಸೌಜನ್ಯಕ್ಕೂ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ. ಶೀಘ್ರದಲ್ಲೇ ಉಳಿದ ಫಸಲು ತಿಪ್ಪೆಗೆ ಸುರಿಯುತ್ತೇನೆ ಎಂದು ಮುತ್ತಗದಹಳ್ಳಿಯ ರೈತ ಬೈರಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರಾದ್ಯಂತ ಲಾಕ್‌ಡೌನ್‌: ನೆರೆಯ ಹಿಂದೂವಿನ ಮೃತದೇಹವನ್ನು 'ರಾಮ ನಾಮ ಸತ್ಯಹೇ' ಎಂದು ಸಂಸ್ಕಾರಕ್ಕೆ ಹೊತ್ತೊಯ್ದ ಮುಸ್ಲಿಮರು!

ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ನಷ್ಟವಾಗುತ್ತಿರುವ ಬಗ್ಗೆ ಪ್ರಧಾನ ಕಚೇರಿಗೆ ಪತ್ರ ಬರೆದಿರುವೆ. ಇಂದು ಇಲ್ಲವೇ ನಾಳೆಯೊಳಗೆ ದ್ರಾಕ್ಷಿ ಸಾಗಾಟಕ್ಕೆ ಅವಕಾಶ ಸಿಗುವ ನಿರೀಕ್ಷೆ ಇದೆ. ಕಾದು ನೋಡೋಣ.
- ಕುಮಾರಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ