ಆ್ಯಪ್ನಗರ

ಆಲಿಕಲ್ಲು ಬಿರುಗಾಳಿ ಸಮೇತ ಮಳೆಗೆ ಅಪಾರ ಹಾನಿ

ಅಲ್ಲಲ್ಲಿ ಬಿರುಗಾಳಿ ಸಮೇತ ಮಳೆ, ಮತ್ತೆ ಕೆಲವು ಕಡೆ ಆಲಿಕಲ್ಲು ಸಮೇತ ಮಳೆ ಬಿದ್ದು ವಾಸದ ಮನೆ, ಹುಳು ಸಾಕಣೆ ಮನೆ, ದನದ ಕೊಟ್ಟಿಗೆಗಳ ಚಾವಣಿಯ ಶೀಟುಗಳು ಗಾಳಿಗೆ ಹಾರಿಹೋಗಿವೆ. ಪಾಲಿ ಹೌಸ್‌ಗಳ ಪ್ಲಾಸ್ಟಿಕ್‌ ಹೊದಿಕೆ ಹರಿದು ಹೋಗಿವೆ.

Vijaya Karnataka 4 Jun 2019, 5:00 am
ಶಿಡ್ಲಘಟ್ಟ: ಅಲ್ಲಲ್ಲಿ ಬಿರುಗಾಳಿ ಸಮೇತ ಮಳೆ, ಮತ್ತೆ ಕೆಲವು ಕಡೆ ಆಲಿಕಲ್ಲು ಸಮೇತ ಮಳೆ ಬಿದ್ದು ವಾಸದ ಮನೆ, ಹುಳು ಸಾಕಣೆ ಮನೆ, ದನದ ಕೊಟ್ಟಿಗೆಗಳ ಚಾವಣಿಯ ಶೀಟುಗಳು ಗಾಳಿಗೆ ಹಾರಿಹೋಗಿವೆ. ಪಾಲಿ ಹೌಸ್‌ಗಳ ಪ್ಲಾಸ್ಟಿಕ್‌ ಹೊದಿಕೆ ಹರಿದು ಹೋಗಿವೆ.
Vijaya Karnataka Web damage from rainfall with hailstorm
ಆಲಿಕಲ್ಲು ಬಿರುಗಾಳಿ ಸಮೇತ ಮಳೆಗೆ ಅಪಾರ ಹಾನಿ


ಪಾಲಿ ಹೌಸ್‌ಗಳಲ್ಲಿ ಬೆಳೆದು ನಿಂತಿದ್ದ ನಾನಾ ಬೆಳೆಗಳು ಆಲಿಕಲ್ಲು ಸಮೇತ ಬಿರುಗಾಳಿ ಮಳೆಗೆ ಆಹುತಿಯಾಗಿವೆ. ಲಕ್ಷಾಂತರ ರೂಪಾಯಿಗಳ ನಷ್ಟದಿಂದ ರೈತರು ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ತಾಲೂಕಿನ ತಲದುಮ್ಮನಹಳ್ಳಿ, ಸೊಣ್ಣೇನಹಳ್ಳಿಯ ಆಸುಪಾಸಿನಲ್ಲಿ ಆಲಿ ಕಲ್ಲು ಸಮೇತ ಬಿರುಗಾಳಿಯ ಮಳೆ ಬಿದ್ದಿದ್ದು, ಈ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ.

ಬಿರುಗಾಳಿಗೆ ತಲದುಮ್ಮನಹಳ್ಳಿ ಬಳಿ ಎರಡು ವಿದ್ಯುತ್‌ ಕಂಬಗಳು ನೆಲದವರೆಗೂ ಬಾಗಿ ಬೀಳುವ ಹಂತದಲ್ಲಿವೆ. ಮೂರು ಕಡೆ ಪಾಲಿಹೌಸ್‌ನ ಪ್ಲಾಸ್ಟಿಕ್‌ ಹೊದಿಕೆ ಹರಿದು ಹೋಗಿದ್ದು, ಕಬ್ಬಿಣದ ಪಿಲ್ಲರ್‌ಗಳು ಬಾಗಿ ಕೆಲಸಕ್ಕೆ ಬಾರದಷ್ಟು ಹಾಳಾಗಿವೆ.

ಪಾಲಿ ಹೌಸ್‌ಗಳಲ್ಲಿ ಬೆಳೆದ ಬಜ್ಜಿ ಮೆಣಸಿನಕಾಯಿ ಬೆಳೆ ಹಾಳಾಗಿದೆ. ಸದ್ಯ ಬಜ್ಜಿ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಕೆಜಿಗೆ 150ರಿಂದ 200 ರೂ. ಬೆಲೆ ಇದ್ದು, ರೈತನಿಗೆ ಅಪಾರ ನಷ್ಟವುಂಟಾಗಿದೆ ಎನ್ನಲಾಗಿದೆ.

ಸೊಣ್ಣೇನಹಳ್ಳಿಯಲ್ಲಿ 2 ವಾಸದ ಮನೆ, 2 ರೇಷ್ಮೆ ಹುಳು ಸಾಕಣೆ ಮನೆಗಳ ಚಾವಣಿಗೆ ಅಳವಡಿಸಿದ್ದು ಶೀಟುಗಳು ಗಾಳಿಗೆ ಹಾರಿಹೋಗಿ, ಚೂರುಚೂರಾಗಿವೆ.

ಕಂದಾಯ ನಿರೀಕ್ಷ ಕ ವಿಶ್ವನಾಥ್‌ ಹಾಗೂ ಗ್ರಾಮ ಲೆಕ್ಕಿಗರು ಮಳೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತ್ಯೇಕವಾಗಿ ನಷ್ಟದ ವರದಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ