ಸೀಮೆ ಹಸು ಸಜೀವ ದಹನ
ವಿಕ ಸುದ್ದಿಲೋಕ ಗೌರಿಬಿದನೂರು
ತಾಲೂಕಿನ ಕಾದಲವೇಣಿ ಗರಾದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಅಂಜಿನಪ್ಪ ಎಂಬುವವರ ಗುಡಿಸಲಿಗೆ ಬೆಂಕಿ ಬಿದ್ದು ಸುಟ್ಟು ಬೂದಿಯಾಗಿದ್ದರೆ, ಧಗಧಗನೆ ಹೊತ್ತಿ ಉರಿಯುವ ಗುಡಿಸಲು ಕಂಡು ಪಕ್ಕದ ಗುಡಸಿಲಿನ ವೃದ್ಧೆ ಪಾಪಮ್ಮ(75) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ದುರ್ಘಟನೆ ಶನಿವಾರ ಜರುಗಿದೆ.
ಬೆಂಕಿ ಹೊತ್ತಿಕೊಂಡ ವೇಳೆ ಗುಡಿಸಲಲ್ಲಿದ್ದ ಗಬ್ಬಾದ ಸೀಮೆ ಹಸು ಸುಟ್ಟು ಕರಕಲಾಗಿದ್ದು, ನೆರೆಹೊರೆಯವರ ಸಮಯ ಪ್ರಜ್ಞೆಯಿಂದ ಒಂದು ಎಮ್ಮೆ, ಹಸುವಿನ ಕರು ಪ್ರಾಣಾಪಾಯದಿಂದ ಪಾರಾಗಿವೆ.
ವಿದ್ಯುತ್ ಲೈನ್: ಗುಡಿಸಲಿನ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಶಾರ್ಟ್ ಸರ್ಕಿಟ್ ಆಗಿ ಬೆಂಕಿಯ ಕಿಡಿಗಳು ಗುಡಿಸಲಿನ ಮೇಲೆ ಬಿದ್ದು ಅನಾಹುತ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಮೊದಲು ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಾಗ ಗುಡಿಸಲಿನಲ್ಲಿ ಅಡುಗೆ ಮಾಡುತ್ತಿರುಬಹುದು ಎಂದು ಸಾರ್ವಜನಿಕರು ನಿರ್ಲಕ್ಷ ್ಯ ಮಾಡಿದ್ದಾರೆ. ಆದರೆ, ಅದು ಸ್ವಲ್ಪಹೊತ್ತಿನಲ್ಲೇ ಬೃಹತ್ ರೂಪ ಪಡೆದು ಧಗಧಗಿಸತೊಡಗಿದೆ. ಆಗ ಸಾರ್ವಜನಿಕರು ಅದರಲ್ಲಿದ್ದ ದನಗಳನ್ನು ಬಿಚ್ಚಿ ಹೊರಗಟ್ಟಲು ಮುಂದಾಗಿದ್ದಾರೆ. ಒಂದು ಎಮ್ಮೆ, ಒಂದು ಕರು ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾಗಿವೆ. ಆದರೆ ಸೀಮೆ ಹಸುವನ್ನು ಬಿಚ್ಚಲು ಸಾಧ್ಯವಾಗದಿದ್ದಾಗ ಅದು ಬೆಂಕಿಯಲ್ಲಿ ಸಜೀವವಾಗಿ ದಹನವಾಗಿದೆ.
ಸುದ್ದಿ ತಿಳಿದು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಹೋಗುವಷ್ಟರಲ್ಲಿ ದುರ್ಘಟನೆ ನಡೆದು ಹೋಗಿತ್ತು. ಸ್ಥಳಕ್ಕೆ ಪಶುವೈದ್ಯಾಧಿಕಾರಿ ಡಾ. ಮಾರುತಿರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಕಡಬೂರು ಗ್ರಾಮದಲ್ಲಿ ಬರಸಿಡಿಲಿಗೆ ಹಸು ಸುಟ್ಟು ಕರಕಲಾಗಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ತಾಲೂಕು ಆಡಳಿತ ಗುಡಿಸಲು ಮಾಲೀಕ ಅಂಜಿನಪ್ಪಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಂಜಿನಪ್ಪ ಎಂಬುವವರ ಗುಡಿಸಲಿನ ಮೇಲೆ ಯಾವುದೇ ವಿದ್ಯುತ್ ಲೈನ್ ಹಾದುಹೋಗಿಲ್ಲ. ಪಕ್ಕದ ಮನೆಯಿಂದ ವಿದ್ಯುತ್ ವೈರ್ ಹಾಕಿಕೊಂಡು ಲೈಟ್ ಹಾಕಿಕೊಂಡಿದ್ದಾರೆ. ಈ ಘಟನೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಆಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲಿದ್ದಾರೆ.
-ನಾಗರಾಜ್ , ಎಇಇ, ಬೆಸ್ಕಾಂ, ಗೌರಿಬಿದನೂರು
ವಿಕ ಸುದ್ದಿಲೋಕ ಗೌರಿಬಿದನೂರು
ತಾಲೂಕಿನ ಕಾದಲವೇಣಿ ಗರಾದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಅಂಜಿನಪ್ಪ ಎಂಬುವವರ ಗುಡಿಸಲಿಗೆ ಬೆಂಕಿ ಬಿದ್ದು ಸುಟ್ಟು ಬೂದಿಯಾಗಿದ್ದರೆ, ಧಗಧಗನೆ ಹೊತ್ತಿ ಉರಿಯುವ ಗುಡಿಸಲು ಕಂಡು ಪಕ್ಕದ ಗುಡಸಿಲಿನ ವೃದ್ಧೆ ಪಾಪಮ್ಮ(75) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ದುರ್ಘಟನೆ ಶನಿವಾರ ಜರುಗಿದೆ.
ಬೆಂಕಿ ಹೊತ್ತಿಕೊಂಡ ವೇಳೆ ಗುಡಿಸಲಲ್ಲಿದ್ದ ಗಬ್ಬಾದ ಸೀಮೆ ಹಸು ಸುಟ್ಟು ಕರಕಲಾಗಿದ್ದು, ನೆರೆಹೊರೆಯವರ ಸಮಯ ಪ್ರಜ್ಞೆಯಿಂದ ಒಂದು ಎಮ್ಮೆ, ಹಸುವಿನ ಕರು ಪ್ರಾಣಾಪಾಯದಿಂದ ಪಾರಾಗಿವೆ.
ವಿದ್ಯುತ್ ಲೈನ್: ಗುಡಿಸಲಿನ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಶಾರ್ಟ್ ಸರ್ಕಿಟ್ ಆಗಿ ಬೆಂಕಿಯ ಕಿಡಿಗಳು ಗುಡಿಸಲಿನ ಮೇಲೆ ಬಿದ್ದು ಅನಾಹುತ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಮೊದಲು ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಾಗ ಗುಡಿಸಲಿನಲ್ಲಿ ಅಡುಗೆ ಮಾಡುತ್ತಿರುಬಹುದು ಎಂದು ಸಾರ್ವಜನಿಕರು ನಿರ್ಲಕ್ಷ ್ಯ ಮಾಡಿದ್ದಾರೆ. ಆದರೆ, ಅದು ಸ್ವಲ್ಪಹೊತ್ತಿನಲ್ಲೇ ಬೃಹತ್ ರೂಪ ಪಡೆದು ಧಗಧಗಿಸತೊಡಗಿದೆ. ಆಗ ಸಾರ್ವಜನಿಕರು ಅದರಲ್ಲಿದ್ದ ದನಗಳನ್ನು ಬಿಚ್ಚಿ ಹೊರಗಟ್ಟಲು ಮುಂದಾಗಿದ್ದಾರೆ. ಒಂದು ಎಮ್ಮೆ, ಒಂದು ಕರು ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾಗಿವೆ. ಆದರೆ ಸೀಮೆ ಹಸುವನ್ನು ಬಿಚ್ಚಲು ಸಾಧ್ಯವಾಗದಿದ್ದಾಗ ಅದು ಬೆಂಕಿಯಲ್ಲಿ ಸಜೀವವಾಗಿ ದಹನವಾಗಿದೆ.
ಸುದ್ದಿ ತಿಳಿದು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಹೋಗುವಷ್ಟರಲ್ಲಿ ದುರ್ಘಟನೆ ನಡೆದು ಹೋಗಿತ್ತು. ಸ್ಥಳಕ್ಕೆ ಪಶುವೈದ್ಯಾಧಿಕಾರಿ ಡಾ. ಮಾರುತಿರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಕಡಬೂರು ಗ್ರಾಮದಲ್ಲಿ ಬರಸಿಡಿಲಿಗೆ ಹಸು ಸುಟ್ಟು ಕರಕಲಾಗಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ತಾಲೂಕು ಆಡಳಿತ ಗುಡಿಸಲು ಮಾಲೀಕ ಅಂಜಿನಪ್ಪಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಂಜಿನಪ್ಪ ಎಂಬುವವರ ಗುಡಿಸಲಿನ ಮೇಲೆ ಯಾವುದೇ ವಿದ್ಯುತ್ ಲೈನ್ ಹಾದುಹೋಗಿಲ್ಲ. ಪಕ್ಕದ ಮನೆಯಿಂದ ವಿದ್ಯುತ್ ವೈರ್ ಹಾಕಿಕೊಂಡು ಲೈಟ್ ಹಾಕಿಕೊಂಡಿದ್ದಾರೆ. ಈ ಘಟನೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಆಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲಿದ್ದಾರೆ.
-ನಾಗರಾಜ್ , ಎಇಇ, ಬೆಸ್ಕಾಂ, ಗೌರಿಬಿದನೂರು