ಆ್ಯಪ್ನಗರ

ಪಾಶ್ಚಾತ್ಯ ಜೀವನ ಶೈಲಿಯಿಂದ ಯುವಜನರ ಆರೋಗ್ಯದಲ್ಲಿ ಕುಸಿತ

ಪಾಶ್ಚಾತ್ಯ ಜೀವನ ಶೈಲಿಯಿಂದ ಯುವಪೀಳಿಗೆ ನಾನಾ ರೀತಿಯ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ತುತ್ತಾಗಿ ಬದುಕನ್ನು ನರಕಮಯವಾಗಿಸಿಕೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ರೂ ಆದ ತಹಸೀಲ್ದಾರ್‌ ಎಸ್‌.ಅಜಿತ್‌ ಕುಮಾರ್‌ ರೈ ಆತಂಕ ವ್ಯಕ್ತಪಡಿಸಿದರು.

Vijaya Karnataka 22 Jun 2019, 5:00 am
ಶಿಡ್ಲಘಟ್ಟ: ಪಾಶ್ಚಾತ್ಯ ಜೀವನ ಶೈಲಿಯಿಂದ ಯುವಪೀಳಿಗೆ ನಾನಾ ರೀತಿಯ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ತುತ್ತಾಗಿ ಬದುಕನ್ನು ನರಕಮಯವಾಗಿಸಿಕೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ರೂ ಆದ ತಹಸೀಲ್ದಾರ್‌ ಎಸ್‌.ಅಜಿತ್‌ ಕುಮಾರ್‌ ರೈ ಆತಂಕ ವ್ಯಕ್ತಪಡಿಸಿದರು.
Vijaya Karnataka Web decline in the health of young people by western lifestyle
ಪಾಶ್ಚಾತ್ಯ ಜೀವನ ಶೈಲಿಯಿಂದ ಯುವಜನರ ಆರೋಗ್ಯದಲ್ಲಿ ಕುಸಿತ


ತಾಲೂಕು ಆಡಳಿತ, ಎಸ್‌ಪಿವೈಎಸ್‌ಎಸ್‌(ಪತಂಜಲಿ ಯೋಗ ಶಿಕ್ಷ ಣ ಸಮಿತಿ) ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಸಹಯೋಗದಲ್ಲಿ ನಗರದ ಕೋಟೆ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಹಿಂದೆ ಗುರುಕುಲ ಮಠದ ಪದ್ಧತಿಯಲ್ಲಿ ನಾವು ಶಿಕ್ಷ ಣ ಪಡೆಯುತ್ತಿದ್ದೇವು. ಆದರೆ ಇಂದು ಇಂಗ್ಲಿಷ್‌ ಪದ್ಧತಿಯಲ್ಲಿ ಶಿಕ್ಷ ಣ ಪಡೆಯುತ್ತಿದ್ದೇವೆ. ಕಾಲ ಬದಲಾದಂತೆ ಶಿಕ್ಷ ಣದಲ್ಲೂ ಜಾಗತಿಕ ಬದಲಾವಣೆ ಬೇಕಿದೆ ನಿಜ. ಆದರೆ ನಮ್ಮ ಬದುಕಿನ ಶೈಲಿಯಲ್ಲ ಎಂದರು.

ಗುರು, ಹಿರಿಯರು ನಮ್ಮ ಸಂಸ್ಕೃತಿ ಆಚಾರ, ವಿಚಾರಗಳ ಬಗ್ಗೆ ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಅದರಿಂದ ನಮ್ಮ ಬದುಕು ಇತರರಿಗೆ ಮಾದರಿಯಾಗಿತ್ತು. ಆದರೆ ಇಂದು ನಮ್ಮ ಬದುಕು ದೈಹಿಕ, ಮಾನಸಿಕ ಸಂಕಷ್ಟಗಳಿಗೆ ತುತ್ತಾಗುತ್ತಿದೆ. ಇದಕ್ಕೆ ನಮ್ಮ ಬದಲಾದ ಜೀವನ ಶೈಲಿಯೇ ಕಾರಣವಾಗಿದೆ. ಹಾಗಾಗಿ ಯೋಗ, ವ್ಯಾಯಾಮ, ಶಿಸ್ತಿನ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಉತ್ತಮ ಆರೋಗ್ಯವನ್ನು ಪಡೆದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲಾ ಸೌಪರ್ಣಿಕ ವಲಯದ ಸಂಯೋಜಕ ಶ್ರೀಕಾಂತ್‌ ಮಾತನಾಡಿ, ಮನಸು ಹಾಗೂ ದೇಹವನ್ನು ಉಸಿರಿನ ಮೂಲಕ ಒಂದುಗೂಡಿಸುವುದೇ ಯೋಗ. ಮನಸಿಗೂ ದೇಹಕ್ಕೂ ಪರಸ್ಪರ ಸಂಬಂಧ ಇಲ್ಲದ ಬದುಕು ನಮ್ಮದಾಗಿದೆ. ಇದು ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದರು.

ಯೋಗ ಬಂಧುಗಳು ಹಾಗೂ ಯೋಗ ಪಟುಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಭಾರತ ಮಾತೆಯ ಫೋಟೊದೊಂದಿಗೆ ಶೋಭಾಯಾತ್ರೆ ನಡೆಯಿತು. ಎಲ್ಲರಿಗೂ ಪಾನೀಯ ಹಾಗೂ ಪ್ರಸಾದ ವಿನಿಯೋಗಿಸಲಾಯಿತು.

ತಾಪಂ ಇಒ ಬಿ.ಶಿವಕುಮಾರ, ನಗರಸಭೆ ಪೌರಾಯುಕ್ತ ಜೆ.ಎನ್‌.ಚಲಪತಿ, ಬಿಸಿಎಂ ಇಲಾಖೆಯ ಆರ್‌.ಸಕ್ಫಾಲ್‌, ಕಂದಾಯ ನಿರೀಕ್ಷ ಕ ವಿಶ್ವನಾಥ್‌, ಎಸ್‌ಪಿವೈಎಸ್‌ಎಸ್‌ನ ಜಿಲ್ಲಾ ಸಂಚಾಲಕ ಆರ್‌.ಸುಂದರಾಚಾರಿ, ತಾಲೂಕು ಅಧ್ಯಕ್ಷ ಎಸ್‌.ಶಂಕರ್‌, ಕೇಶವಮೂರ್ತಿ, ಭಾರತಿ, ಆನೂರು ಶ್ರೀನಿವಾಸ್‌, ಮಂಜುನಾಥ್‌, ರವಣ, ಪ್ರಭು, ರಾಮು, ಭಾಸ್ಕರ್‌, ಫೈನಾನ್ಸ್‌ ಶ್ರೀನಿವಾಸ್‌, ವೆಂಕಟೇಶ್‌ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ