ಆ್ಯಪ್ನಗರ

ಜನರ ಮನ ಸೆಳೆದ ಧರ್ಮರಾಯಸ್ವಾಮಿ ಒನಕೆ ಕರಗ

ನಗರದ ಭುವನೇಶ್ವರಿ ವೃತ್ತದಲ್ಲಿ ಭಗತ್‌ಸಿಂಗ್‌ ನಗರದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಕರಗ ಮಹೋತ್ಸವ ಭಾಗವಾಗಿ ಸೋಮವಾರ ಒನಕೆ ಕರಗ ಆಚರಣೆ ನಡೆಯಿತು.

Vijaya Karnataka 16 Dec 2022, 5:06 pm
ಚಿಕ್ಕಬಳ್ಳಾಪುರ: ನಗರದ ಭುವನೇಶ್ವರಿ ವೃತ್ತದಲ್ಲಿ ಭಗತ್‌ಸಿಂಗ್‌ ನಗರದ ಶ್ರೀಧರ್ಮರಾಯಸ್ವಾಮಿ ದೇವಾಲಯದ ಕರಗ ಮಹೋತ್ಸವ ಭಾಗವಾಗಿ ಸೋಮವಾರ ಒನಕೆ ಕರಗ ಆಚರಣೆ ನಡೆಯಿತು.
Vijaya Karnataka Web Karaga


ಕರಗದ ಪೂಜಾರಿ ಕುಪ್ಪಂ ಬಾಲಾಜಿ ಅವರು ಸುಮಾರು 6 ಅಡಿ ಉದ್ದದ ಒನಕೆಯ ಮೇಲೆ ಅರಿಶಿಣ ನೀರು ತುಂಬಿಟ್ಟು ತಾಮ್ರದ ಪಾತ್ರೆ ಇಟ್ಟುಕೊಂಡು ತಮಟೆಯ ವಾದನಕ್ಕೆ ತಕ್ಕಂತೆ ಆಕರ್ಷಕ ನೃತ್ಯ ಮಾಡುವ ಮೂಲಕ ನೆರದಿದ್ದ ಜನರಲ್ಲಿ ಮೆಚ್ಚುಗೆಗೆ ಪಾತ್ರರಾದರು.

ಬಾಲಾಜಿ ಅವರ ತಲೆ ಮೇಲೆ ನಿಂತ ಒನಕೆ ಸಮತೋಲನ ಕಳೆದುಕೊಳ್ಳದಂತೆ ಚಾಕಚಾಕ್ಯತೆಯಿಂದ ತಮಟೆ ವಾದ್ಯಕ್ಕೆ ಅನುಗುಣವಾಗಿ ಗೆಜ್ಜೆಯ ಕಾಲಿನ ತಾಳದೊಂದಿಗೆ ಲಯಬದ್ಧವಾಗಿ ಎರಡೂ ಕೈಗಳನ್ನು ಬಿಟ್ಟು ಕುಣಿದು ನೆರಿದಿದ್ದವರಲ್ಲಿ ವಿಸ್ಮಯ ಮೂಡಿಸಿದರು. ಸುಮಾರು ಅರ್ಧ ಗಂಟೆ ಹೆಚ್ಚು ಕಾಲ ಕುಣಿದ ಬಾಲಾಜಿ ಅವರ ನೃತ್ಯವನ್ನು ಸುತ್ತಮುತ್ತಲಿನ ರಸ್ತೆ ಬದಿ, ಕಟ್ಟಡದ ಮೇಲೆ ನಿಂತು ಜನರು ವೀಕ್ಷಿಸಿದರು. ಬಹುತೇಕರು ನೃತ್ಯದ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ