ಆ್ಯಪ್ನಗರ

ಭೂಮಿ ಕಂಪಿಸಿದ ಮಿಟ್ಟಹಳ್ಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

​​ಮಿಟ್ಟಹಳ್ಳಿ ಗ್ರಾಪಂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೇಳಿ ಬಂಧ ಭಾರಿ ಶಬ್ದದಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಮನೆಗಳಲ್ಲಿನ ಪಾತ್ರೆಗಳು, ಧವಸ ಧಾನ್ಯಗಳ ಮೂಟೆಗಳು, ಚೇರ್‌ಗಳು ಪಕ್ಕಕ್ಕೆ ಜರುಗಿ ಕೆಳಗೆ ಬಿದ್ದಿರುವ ಸನ್ನಿವೇಶಗಳು ಕಂಡು ಬಂದಿದೆ.

Vijaya Karnataka 10 Nov 2021, 10:05 pm
ಚಿಂತಾಮಣಿ: ತಾಲೂಕಿನ ಚಿಲಕಲನೇರ್ಪು ಹೋಬಳಿಯ ಮಿಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲಿನ 10 ಹಳ್ಳಿಗಳಲ್ಲಿ ಮಂಗಳವಾರ ರಾತ್ರಿ 8.50 ರ ಸುಮಾರಿಗೆ ಭೂಮಿಯಲ್ಲಿ ಭಾರಿ ಶಬ್ದ ಕೇಳಿ ಬಂದು ಭೂಮಿ ನಡುಗಿದ್ದು, ಜನರು ಭಯ ಭೀತರಾಗುವ ಅಗತ್ಯ ಇಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್‌.ಲತಾ ಹೇಳಿದ್ದಾರೆ.
Vijaya Karnataka Web ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ


ಮಿಟ್ಟಹಳ್ಳಿ, ಅಪಸನಹಳ್ಳಿ, ನಂದನವನ, ಬೋಮ್ಮೆಪಲ್ಲಿ, ಕೋನೆಪಲ್ಲಿ, ಅಲ್ಲಪಲ್ಲಿ, ರಾಸಪಲ್ಲಿ, ಗೌಡನಹಳ್ಳಿ, ಕೊಡೆಗಾಂಡ್ಲು, ವೆಂಕಟರೆಡ್ಡಿಪಾಳ್ಯ, ದೊಡ್ಡಿಹಳ್ಳಿ ಸೇರಿದಂತೆ ಮಿಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿಈ ಭೂಮಿ ಕಂಪಿಸಿದೆ.

ಇತ್ತೀಚಿನ ದಿನಗಳಲ್ಲಿ ಬಿದ್ದ ಧಾರಾಕಾರ ಮಳೆಗೆ ಕೆರೆ ಕುಂಟೆಗಳು ತುಂಬಿ ಕೋಳವೆ ಬಾವಿಗಳಲ್ಲಿ ನೀರು ಸೇರಿಕೊಂಡು ಅನಿಲದ ಒತ್ತಡ ಏರಿದಾಗ ಭೂಮಿಯಲ್ಲಿನ ಕಂಪನ ಶಬ್ದ ಬಂದಿದೆ. ಭೂಕಂಪನದ ರಿಕ್ಟರ್‌ ಮಾಪನದಲ್ಲಿಯಾವುದೇ ರೀತಿಯಾ ಭೂಕಂಪನವಾಗಿರುವ ಬಗ್ಗೆ ದಾಖಲಾಗಿಲ್ಲ. ಆದ್ದರಿಂದ ಮಿಟ್ಟಹಳ್ಳಿಯ ಸುತ್ತಮುತ್ತಲಿನ ಜನತೆ ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ. ಕೇಂದ್ರ ಸಮಿತಿ ಆಗಮಿಸಲಿದ್ದು ಶಬ್ದದ ಬಗ್ಗೆ ಪರಿಶೀಲನೆ ಮಾಡಲಾಗುವುದು.
ಆರ್‌. ಲತಾ, ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ

ಗ್ರಾಮಸ್ಥರಿಗೆ ಧೈರ್ಯ ತುಂಬಿದ ಡಿಸಿ

ಇದರ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಆರ್‌ ಲತಾ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಾದ ಕೃಷ್ಣವೇಣಿ ಮತ್ತು ಭೂವಿಜ್ಞಾನ ಇಲಾಖೆಯ ಮಟ್ಟದ ಅಧಿಕಾರಿಗಳಾದ ಕೃಷ್ಣಮೂರ್ತಿ ಇನ್ನಿತರೆ ಅಧಿಕಾರಿಗಳ ನೇತೃತ್ವದ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಭೂಕಂಪನದ ಸ್ಥಳ ಪರಿಶೀಲನೆ ಮಾಡಿ ಮಂಗಳವಾರ ಹಾಗೂ ಬುಧವಾರ ಬಂದಂತಹ ಭಾರಿ ಶಬ್ದಗಳ ಅನುಭವಗಳ ಮಾಹಿತಿಯನ್ನು ಗ್ರಾಮಸ್ಥರಿಂದ ಪಡ198ದುಕೊಂಡರು. ಮಿಟ್ಟಹಳ್ಳಿ ಗ್ರಾಮದಲ್ಲಿ ಕಂಪಿಸಿದ ಸ್ಥಳಗಳು ಹಾಗೂ ಬಿರುಕು ಬಿಟ್ಟಿದಂತಹ ಮನೆಗಳನ್ನು ಪರೀಶಿಲಿಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

ಚಿಕ್ಕಬಳ್ಳಾಪುರದ ಮಿಟ್ಟಹಳ್ಳಿ ಸುತ್ತಮುತ್ತ ಲಘು ಭೂಕಂಪನ; ಆತಂಕದಲ್ಲೇ ರಾತ್ರಿಯಿಡಿ ಗ್ರಾಮಸ್ಥರ ಜಾಗರಣೆ

ಭೂಕಂಪನ ನಡೆದಿಲ್ಲ

ಈ ಸಂಬಂಧ ಮಿಟ್ಟಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಆರ್‌. ಲತಾ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಬೆಂಗಳೂರು ಮತ್ತು ಗೌರಿಬಿದನೂರು ಬಳಿ ಇರುವ ಭೂಕಂಪನ ನಿಗಾ ಸಮಿತಿಗಳ ವತಿಯಿಂದ ರಾತ್ರಿಯಿಂದಲೇ ಎಲ್ಲಾರೀತಿಯ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಂಡಿದ್ದು, ಇದುವರೆಗೂ ಈ ಎರಡೂ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಭೂಕಂಪನ ನಡೆದಿಲ್ಲ. ರಾತ್ರಿ ಈ ಭಾಗದಲ್ಲಿ ಭೂಕಂಪನ ಆಗಿರುವುದಾಗಿ ಕಂಡು ಬಂದಿಲ್ಲ ಎಂದು ಸ್ಫಷ್ಟಪಡಿಸಿದರು.

ಘಟನೆ ಹಿನ್ನೆಲೆ

ಮಿಟ್ಟಹಳ್ಳಿ ಗ್ರಾಪಂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೇಳಿ ಬಂಧ ಭಾರಿ ಶಬ್ದದಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಮನೆಗಳಲ್ಲಿನ ಪಾತ್ರೆಗಳು, ಧವಸ ಧಾನ್ಯಗಳ ಮೂಟೆಗಳು, ಚೇರ್‌ಗಳು ಪಕ್ಕಕ್ಕೆ ಜರುಗಿ ಕೆಳಗೆ ಬಿದ್ದಿರುವ ಸನ್ನಿವೇಶಗಳು ಕಂಡು ಬಂದಿದೆ. ಶಬ್ದ ಕೇಳಿ ಬಯಭೀತರಾಗಿದ್ದು ರಾತ್ರಿಯ ವೇಳೆಯಲ್ಲಿ ಜನ ಜಾಗರಣೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಕೇಳಿದ ಶಬ್ದ ಪುನಃ ಬುಧವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಕೇಳಿ ಬಂದಿದ್ದು ಗ್ರಾಮಗಳಲ್ಲಿರುವ ಹಳೆಯ ಕಟ್ಟಡಗಳು ಹಾಗೂ ಗೋಡೆಗಳು ಬಿರುಕು ಬಿಟ್ಟಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಸುಧಾಕರ್‌ ಪಟ್ಟಿಗೆ ಚಿಕ್ಕಬಳ್ಳಾಪುರಕ್ಕೆ ಒಲಿದ ಚಿಮುಲ್‌..! ಕಾಂಗ್ರೆಸ್‌ಗೆ ಇಂಜೆಕ್ಷನ್‌ ಕೊಟ್ಟ ಆರೋಗ್ಯ ಸಚಿವ..!

ಇನ್ನೂ ಬೆಚ್ಚಿ ಬಿದ್ದ ಜನತೆ ತಕ್ಷಣ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೋಲಿಸ್‌ ಠಾಣೆಗೆ ಮಾಹಿತಿ ನೀಡಿದ್ದು ಮಂಗಳವಾರ ರಾತ್ರಿಯೇ ತಾಲೂಕಿನ ಪೋಲಿಸ್‌ ಅಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾಹಿತಿ ಪಡೆದುಕೊಂಡು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು.

ಮಂಗಳವಾರ ಭೂಮಿ ಕಂಪಿಸಿದಂತಹ ಭಾರಿ ಶಬ್ದಕ್ಕೆ ಮನೆಯ ಗೋಡೆಗಳ ಬಿರುಕು ಹಾಗೂ ಮನೆಯಲ್ಲಿಇದ್ದ ಪಾತ್ರೆ ಧಾವಸ ದಾನ್ಯಗಳ ಮೂಟೆಗಳು ಕೆಳಗೆ ಬಿದ್ದಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಾಗಾಗಿದ್ದಾರೆ. ಕೊಡಲೇ ಸರಕಾರ ಎಚ್ಚೆತ್ತುಕೊಂಡು ಈ ಶಬ್ದ ಯಾವುದರಿಂದ ಬಂತು ಎಂಬುದನ್ನು ಸೂಕ್ತ ತನಿಖೆ ನಡೆಸಿ ಜನರ ಭೀತಿಯನ್ನು ತೊಲಗಿಸಬೇಕು.
- ಶಿವನಂದ ಮಿಟ್ಟಹಳ್ಳಿ ಗ್ರಾಮಸ್ಥರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ