ಆ್ಯಪ್ನಗರ

ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಕೊನೆಗೂ ವರ್ಗಾವಣೆ

ಜಿಲ್ಲೆಯಲ್ಲಿಹಲವು ಹೋರಾಟ-ಪ್ರತಿಭಟನೆಗಳ ನಡುವೆಯೂ ದಕ್ಷ, ಪ್ರಾಮಾಣಿಕ ಜಿಲ್ಲಾಧಿಧಿಕಾರಿ ಅನಿರುದ್ಧ್‌ ಶ್ರವಣ್‌ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಅವರ ಸ್ಥಾನಕ್ಕೆ ಆರ್‌.ಲತಾ ಅವರನ್ನು ನೂತನ ಜಿಲ್ಲಾಧಿಧಿಕಾರಿಯಾಗಿ ವರ್ಗಾವಣೆ ಮಾಡಿ ಮಂಗಳವಾರ ಆದೇಶಿಸಿದೆ.

Vijaya Karnataka 28 Aug 2019, 2:46 pm
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಹಲವು ಹೋರಾಟ-ಪ್ರತಿಭಟನೆಗಳ ನಡುವೆಯೂ ದಕ್ಷ, ಪ್ರಾಮಾಣಿಕ ಜಿಲ್ಲಾಧಿಧಿಕಾರಿ ಅನಿರುದ್ಧ್‌ ಶ್ರವಣ್‌ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಅವರ ಸ್ಥಾನಕ್ಕೆ ಆರ್‌.ಲತಾ ಅವರನ್ನು ನೂತನ ಜಿಲ್ಲಾಧಿಧಿಕಾರಿಯಾಗಿ ವರ್ಗಾವಣೆ ಮಾಡಿ ಮಂಗಳವಾರ ಆದೇಶಿಸಿದೆ.
Vijaya Karnataka Web district collector anirudh shravan transferred last
ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಕೊನೆಗೂ ವರ್ಗಾವಣೆ


ಕಳೆದೊಂದು ವರ್ಷದಿಂದ ಜಿಲ್ಲೆಯ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಅನಿರುದ್ಧ್‌ ಶ್ರವಣ್‌ ಅವರನ್ನು ಆ.7ರಂದು ಸರಕಾರ ಧಿದಿಢೀರ್‌ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ನೂತನ ಜಿಲ್ಲಾಧಿಧಿಕಾರಿಯಾಗಿ ಕೆ.ಎನ್‌.ರಮೇಶ್‌ ಅವರನ್ನು ನೇಮಕ ಮಾಡಿ, ಅಧಿಧಿಸೂಚನೆ ಹೊರಡಿಸಿತ್ತು. ಆದರೆ, ಅನಿರುದ್ಧ್‌ ಶ್ರವಣ್‌ ಅವರಿಗೆ ಯಾವುದೇ ಸ್ಥಳ ನಿಯುಕ್ತಿ ಮಾಡಿರಲಿಲ್ಲ. ಹಾಗಾಗಿ ಇದುವರೆಗೂ ಅವರೇ ಜಿಲ್ಲಾಧಿಧಿಕಾರಿಯಾಗಿ ಮುಂದುವರಿದಿದ್ದರು.

ಮಂಗಳವಾರ ಮತ್ತೊಮ್ಮೆ ದಿಢೀರ್‌ ಎಂದು ಕೆ.ಎನ್‌.ರಮೇಶ್‌ಕುಮಾರ್‌ ಅವರ ವರ್ಗಾವಣೆಯಲ್ಲಿಬದಲಾವಣೆ ಮಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಸಿಇಒ ಆಗಿದ್ದ ಆರ್‌.ಲತಾ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಧಿಕಾರಿಯಾಗಿ ವರ್ಗಾವಣೆ ಮಾಡಿದ್ದು, ಅನಿರುದ್ಧ್‌ ಶ್ರವಣ್‌ ಅವರು ಜಿಲ್ಲೆಯಿಂದ ನಿರ್ಗಮಿಸಲಿದ್ದಾರೆ.

ವರ್ಗಾವಣೆಗೆ ಖಂಡನೆ: ಕಡಿಮೆ ಅವಧಿಧಿಯಲ್ಲಿಹೆಚ್ಚು ಜನಮನ್ನಣೆ ಗಳಿಸಿದ್ದ ಅನಿರುದ್ಧ್‌ ಶ್ರವಣ್‌ ಅವರ ವರ್ಗಾವಣೆಗೆ ಜಿಲ್ಲೆಯಾದ್ಯಂತ ಖಂಡನೆ ಹಾಗೂ ತೀವ್ರ ವಿರೋಧ ವ್ಯಕ್ತವಾಗಿದೆ.

2018ರ ಆಗಸ್ಟ್‌ನಲ್ಲಿವರ್ಗಾವಣೆಯಾಗಿ ಜಿಲ್ಲೆಗೆ ಬಂದಿದ್ದ ಜಿಲ್ಲಾಧಿಧಿಕಾರಿ ಅನಿರುದ್ಧ್‌ ಶ್ರವಣ್‌ ಅವರನ್ನು ಒಂದು ವರ್ಷ ಕಳೆಯುವುರೊಳಗೆ ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ಕಳೆದೊಂದು ವರ್ಷದಿಂದ ಉತ್ತಮ ಆಡಳಿತ ನೀಡಿ ಜನತೆಗೆ ಸ್ನೇಹಮಯದಿಂದ ಇದ್ದರು. ಜತೆಗೆ ಸಾಮಾಜಿಕ ಕಳಕಳಿ ಹೊಂದಿದ್ದ ಅನಿರುದ್ಧ ಶ್ರವಣ್‌ ಅವರು, ಸತತ ಬರಗಾಲದಿಂದ ತತ್ತರಿಸಿ ಹೋಗಿರುವ ಈ ಬರಡು ಜಿಲ್ಲೆಯಲ್ಲಿಕಲ್ಯಾಣಿಗಳ ಸ್ವಚ್ಛತಾ ಅಭಿಯಾನ ಕೈಗೊಂಡು, ಈ ಮೂಲಕ ಒತ್ತುವರಿದಾರರ ಪಾಲಾಗಿದ್ದ ನೂರಾರು ಕಲ್ಯಾಣಿಗಳನ್ನು ರಕ್ಷಣೆ ಮಾಡಿ, ಅಂತರ್ಜಲ ಅಭಿವೃದ್ಧಿಗೆ ಶ್ರಮಿಸಿದ್ದರು. ಅಲ್ಲದೆ, ಇತ್ತೀಚಿಗೆ ಜಿಲ್ಲೆಯಲ್ಲಿಮಳೆನೀರು ಶೇಖರಣೆ ಮಾಡಿ, ಆ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿಮಳೆಕೊಯ್ಲುಪದ್ಧತಿಯನ್ನು ಜಿಲ್ಲೆಯಾದ್ಯಂತ ಕಡ್ಡಾಯವಾಗಿ ಅಳವಡಿಸುವ ಕ್ರಮಕ್ಕೆ ಸಮರೋಪಾದಿಯಲ್ಲಿಚಾಲನೆ ನೀಡಿದ್ದರು.

ಪ್ರಾಮಾಣಿಕ ಜಿಲ್ಲಾಧಿಧಿಕಾರಿ ಅನಿರುದ್ಧ್‌ ಶ್ರವಣ್‌ ಅವರ ವರ್ಗಾವಣೆ ನಿಜಕ್ಕೂ ಖಂಡನೀಯ ಎಂಬ ಮಾತುಗಳು ಜಿಲ್ಲೆಯಾದ್ಯಂತ ಕೇಳಿಬಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ