ಆ್ಯಪ್ನಗರ

ಹಿಪ್ಪುನೇರಳೆ ತೋಟದಲ್ಲಿ ಹನಿ ನೀರಾವರಿ ಪರಿಕರ ನಾಶ

ತಾಲೂಕಿನ ದೊಡ್ಡದಾಸರಹಳ್ಳಿಯ ರೈತರೊಬ್ಬರ ಹಿಪ್ಪುನೇರಳೆ ತೋಟಕ್ಕೆ ಅಳವಡಿಸಿದ್ದ ಹನಿ ನೀರಾವರಿಯ ಗೇಟ್‌ವಾಲ್‌, ಪೈಪ್‌, ಟ್ಯೂಬ್‌ ಇನ್ನಿತರೆ ಎಲ್ಲ ಪರಿಕರಗಳನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ.

Vijaya Karnataka 3 Jun 2019, 5:00 am
ಶಿಡ್ಲಘಟ್ಟ: ತಾಲೂಕಿನ ದೊಡ್ಡದಾಸರಹಳ್ಳಿಯ ರೈತರೊಬ್ಬರ ಹಿಪ್ಪುನೇರಳೆ ತೋಟಕ್ಕೆ ಅಳವಡಿಸಿದ್ದ ಹನಿ ನೀರಾವರಿಯ ಗೇಟ್‌ವಾಲ್‌, ಪೈಪ್‌, ಟ್ಯೂಬ್‌ ಇನ್ನಿತರೆ ಎಲ್ಲ ಪರಿಕರಗಳನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ.
Vijaya Karnataka Web distroy the materials in drip irrigation land
ಹಿಪ್ಪುನೇರಳೆ ತೋಟದಲ್ಲಿ ಹನಿ ನೀರಾವರಿ ಪರಿಕರ ನಾಶ


ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ದೊಡ್ಡದಾಸರಹಳ್ಳಿಯಲ್ಲಿ ರೈತ ಶ್ರೀನಿವಾಸ್‌, ನಂಜಪ್ಪ ಎನ್ನುವವರ 2.26 ಎಕರೆಯಷ್ಟು ಹಿಪ್ಪುನೇರಳೆ ತೋಟದಲ್ಲಿ ಈ ದುಷ್ಕೃತ್ಯ ನಡೆದಿದೆ. ಇದರಿಂದ ಸುಮಾರು 50 ಸಾವಿರ ರೂ. ನಷ್ಟ ಆಗಿದೆಯಲ್ಲದೆ ಮತ್ತೆ ಹನಿ ನೀರಾವರಿ ಪದ್ಧತಿಯ ಪರಿಕರಗಳನ್ನು ಅಳವಡಿಸುವಷ್ಟರಲ್ಲಿ ಕಡಿಮೆ ಅಂದರೂ ವಾರತ್ತು ದಿನಗಳು ಆಗಲಿದ್ದು, ಅಷ್ಟರಲ್ಲಿ ತೋಟದಲ್ಲಿನ ಹಿಪ್ಪುನೇರಳೆ ಬೆಳೆ ಬಾಡಲಿದೆ. ಇದು ಸೇರಿ ಹತ್ತಿರ ಹತ್ತಿರ 75 ರಿಂದ 80 ಸಾವಿರ ರೂ. ನಷ್ಟವಾಗಿದೆ ಎಂದು ರೈತ ಶ್ರೀನಿವಾಸ್‌ ಹೇಳುತ್ತಾರೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ