ಆ್ಯಪ್ನಗರ

ತಾಯಿಯಂತ ಪಕ್ಷಕ್ಕೆ ಮೋಸ ಮಾಡಿದ ವ್ಯಕ್ತಿಗೆ ಪರ್ಮನೆಂಟ್ ಆಗಿ ಮನೆಗೆ ಕಳುಹಿಸಬೇಕು: ಡಿಕೆ ಶಿವಕುಮಾರ್ ವಾಗ್ದಾಳಿ

ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚಿಕ್ಕಬಳ್ಳಾಪುರದಲ್ಲಿ ಡಿಕೆಶಿ ಪ್ರಚಾರದ ಅಬ್ಬರವೂ ಹೆಚ್ಚಾಗಿದೆ. ಅನರ್ಹ ಶಾಸಕ ಸುಧಾಕರ್‌ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು. ಸುಧಾಕರ್‌ರನ್ನು ವಸೂಲಿ ರಾಜಾ ಎಂದು ಡಿಕೆ ಶಿವಕುಮಾರ್‌ ಆರೋಪಿಸಿದರು.

Vijaya Karnataka Web 28 Nov 2019, 3:06 pm
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ನಂದಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿ ಎಂ ಅಂಜಿನಪ್ಪ ಪರವಾಗಿ ಡಿ.ಕೆ.ಶಿವಕುಮಾರ್ ಮತಯಾಚನೆ ಮಾಡಿದ್ದಾರೆ. ಈ ವೇಳೆ ಅನರ್ಹ ಶಾಸಕರ ವಿರುದ್ಧ ಪ್ರಮುಖವಾಗಿ ಸುಧಾಕರ್‌ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
Vijaya Karnataka Web dk shivakumar


ತಾಯಿಯಂತ ಪಕ್ಷಕ್ಕೆ ಮೋಸ ಮಾಡಿದ ವ್ಯಕ್ತಿಗೆ ಪರ್ಮನೆಂಟ್ ಆಗಿ ಮನೆಗೆ ಕಳುಹಿಸಬೇಕು ಎಂದು ಕನಕಪುರ ಬಂಡೆ ಡಿಕೆ ಶಿವಕುಮಾರ್ ಸುಧಾಕರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರದ ನಂದಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿ ಎಂ ಅಂಜಿನಪ್ಪ ಪರವಾಗಿ ಡಿ.ಕೆ.ಶಿವಕುಮಾರ್ ಮತಯಾಚನೆ ಮಾಡಿದ ವೇಳೆ ಈ ರೀತಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು, ಅನರ್ಹ ಶಾಸಕ ಹಾಗೂ ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಡಿಕೆಶಿ, ಇಲ್ಲಿನ ಅಧಿಕಾರಿಗಳನ್ನು ಪೊಲೀಸರನ್ನು ಎದುರಿಸಿ ಬೆದರಿಸಿ ಬಳಸಿಕೊಂಡು ನೀಚ ರಾಜಕಾರಣ ಮಾಡುತ್ತಿದ್ದು, ಪ್ರತಿಯೊಂದಕ್ಕೂ ಇವರಿಗೆ ಕಮೀಷನ್ ಕೊಡಬೇಕು. ವಸೂಲಿ ರಾಜಾ ಯಾರೆಂದರೆ ಅದು ಡಾ.ಕೆ.ಸುಧಾಕರ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನರ್ಹ ನಾರಾಯಣಗೌಡರಿಗೆ ನಿದ್ರೆ ಬರ್ತಿಲ್ವಂತೆ..! ಕೊಡಬಾರದ ಕಷ್ಟ ಕೊಟ್ರೂ ಎದ್ದು ಬಂದೆ ಅಂದ್ರು ಡಿಕೆಶಿ!

ಚಿಕ್ಕಬಳ್ಳಾಪುರದಲ್ಲಿ ಡಿಕೆ ಶಿವಕುಮಾರ್‌ ಪ್ರಚಾರ


ಅಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯು ವಿಶ್ವೇಶ್ವರಯ್ಯರಂತಹ ವ್ಯಕ್ತಿಗಳಿಗೆ ಹೆಸರುವಾಸಿ. ಇಂತಹ ಕ್ಷೇತ್ರದಲ್ಲಿ ಹುಟ್ಟಿದ ಸುಧಾಕರ್‌ಗೆ ಸುಪ್ರಿಂ ಕೋರ್ಟ್ ಅನರ್ಹ ಎಂದು ಹೇಳಿದೆ. ಇಂತಹ ನಾಲಾಯಕ್, ಮುಟ್ಟಾಳನಿಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಕೊಟ್ಟಿದ್ದು ನಮ್ಮ ತಪ್ಪು ಎಂದೂ ಡಿಕೆಶಿ ವಾಕ್‌ ಪ್ರಹಾರ ಮಾಡಿದ್ದಾರೆ.

ಆಪರೇಷನ್ ಕಮಲಕ್ಕೆ ಒಳಗಾಗಿರುವವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ: ಡಿಕೆಶಿ

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಮಾಡಬೇಡಿ ಎಂದು ನಾನೆಲ್ಲೂ ಹೇಳಿಲ್ಲ. ಆದರೆ ಕನಕಪುರದಿಂದ ಕಿತ್ತುಕೊಂಡಿದ್ದು ತಪ್ಪು. ಈ ಬಗ್ಗೆ ಡಿಸೆಂಬರ್‌ 2ರ ನಂತರ ಯಡಿಯೂರಪ್ಪಗೆ ಪತ್ರ ಬರೆದು, ನಂತರ ಯಾವ ರೀತಿ ಪ್ರತಿಭಟನೆ ಮಾಡುತ್ತೇನೆ ಎಂಬ ಬಗ್ಗೆ ತೀರ್ಮಾನಿಸುತ್ತೇನೆ. ಸುಧಾಕರ್‌ಗೆ ಇಲ್ಲಿನ ಜನ ಡೀಲ್ ರಾಜ ಎಂದು ಹೆಸರು ಕೊಟ್ಡಿದ್ದಾರೆ. ಇದು ಸ್ವಾಭಿಮಾನದ ಚುನಾವಣೆಯಾಗಿದ್ದು ಜೆಡಿಎಸ್‌ನವರೇ ಎಚ್ಚೆತ್ತುಕೊಳ್ಳಿ. ಅನರ್ಹನಿಗೆ ಬುದ್ಧಿ ಕಲಿಸಿ ಎಂದು ಚಿಕ್ಕಬಳ್ಳಾಪುರದಲ್ಲಿ ಡಿಕೆಶಿ ಹೇಳಿದ್ದಾರೆ.

'ರಾಜಕೀಯ ನಮಗೂ ಬರುತ್ತೆ, ಕಾಲಚಕ್ರ ಉರುಳಿದಂತೆ ದೊಡ್ಡ ಚಕ್ರವನ್ನೇ ಉರುಳಿಸ್ತೇನೆ'! ಡಿಕೆಶಿ ಡೇರಿಂಗ್ ಮಾತು

ಇನ್ನೊಂದೆಡೆ, ಡಿಸೆಂಬರ್ 9ರ ನಂತರ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆಗಲಿದೆ ಎಂದ ಡಿಕೆಶಿ, ನಮಗೆ ಯಾವುದೇ ಜಾತಿ ಧರ್ಮ ಇಲ್ಲ. ಎಲ್ಲಾ ಧರ್ಮದ ಜನರೂ ಒಂದೇ. ಆದರೆ ಬಿಜೆಪಿಗೆ ಹಿಂದೂಗಳು ಮಾತ್ರವೇ ಮುಖ್ಯ. ಹಾಗಾಗಿ ನಿಮ್ಮ ಸ್ವಾಭಿಮಾನದ ಮತವನ್ನು ಕಾಂಗ್ರೆಸ್ಗೆ ಕೊಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಅಲ್ಲದೆ, ಸುಧಾಕರ್ ಕೊಡುವ ನೋಟು ಯಾರೂ ಬೇಡ ಎನ್ನಬೇಡಿ, ನೋಟು ಪಡೆದು ಅಂಜಿನಪ್ಪಗೆ ಓಟು ಕೊಡಿ. ಸುಧಾಕರ್ ಇಲ್ಲಿ ಗೆಲ್ಲುವುದು ಇಲ್ಲ. ಮಂತ್ರಿ ಕೂಡ ಆಗಲ್ಲ, ಚುನಾವಣೆ ಬಳಿಕ ಬಿಜೆಪಿಯವರೇ ಅವರನ್ನು ಕಳುಹಿಸುತ್ತಾರೆ. ಸುಧಾಕರ್‌ಗೆ ಮಾಜಿ ಶಾಸಕ ಎಂದು ಬೋರ್ಡ್‌ನಲ್ಲಿ ಹೇಳಿಕೊಳ್ಳಲಷ್ಟೇ ಸೀಮಿತ ಎಂದೂ ಸಹ ಡಿಕೆಶಿ ಅನರ್ಹ ಶಾಸಕ ಸುಧಾಕರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ