ಆ್ಯಪ್ನಗರ

ಡಾ.ಕೆ.ಸುಧಾಕರ್‌ ಎಂಬಿಬಿಎಸ್‌ ಮಾಡಿದ್ದಾರೋ ಇಲ್ಲೋ ಡೌಟು!

''ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಿಂದ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಅವರು ಎಂಬಿಬಿಎಸ್‌ ಪಾಸ್‌ ಆಗಿದ್ದಾರೋ, ಇಲ್ಲವೋ ಎಂಬ ಅನುಮಾನ ಇದೆ,'' ಎಂದು ಶಾಸಕ ವಿ.ಮುನಿಯಪ್ಪ ಸುಧಾಕರ್‌ ವಿರುದ್ಧ ವಾಗ್ದಾಳಿ ನಡೆಸಿದರು.

Vijaya Karnataka 13 Aug 2019, 3:34 pm
ಚಿಕ್ಕಬಳ್ಳಾಪುರ: ''ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಿಂದ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಅವರು ಎಂಬಿಬಿಎಸ್‌ ಪಾಸ್‌ ಆಗಿದ್ದಾರೋ, ಇಲ್ಲವೋ ಎಂಬ ಅನುಮಾನ ಇದೆ,'' ಎಂದು ಶಾಸಕ ವಿ.ಮುನಿಯಪ್ಪ ಸುಧಾಕರ್‌ ವಿರುದ್ಧ ವಾಗ್ದಾಳಿ ನಡೆಸಿದರು.
Vijaya Karnataka Web dr k sudhakar does mbbs is doubt
ಡಾ.ಕೆ.ಸುಧಾಕರ್‌ ಎಂಬಿಬಿಎಸ್‌ ಮಾಡಿದ್ದಾರೋ ಇಲ್ಲೋ ಡೌಟು!


ಶಿಡ್ಲಘಟ್ಟ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸುಧಾಕರ್‌ ಅವರಿಗೆ ಕೋಟ್ಯಂತರ ರೂಪಾಯಿ ಎಲ್ಲಿಂದ ಬರುತ್ತೆ. ಬೆಂಗಳೂರಿನಲ್ಲಿ ಕಟ್ಟಿರುವ ದೊಡ್ಡ ಬಂಗಲೆಗೆ ತೆರಿಗೆ ಕಟ್ಟಿಲ್ಲ. ಕೋಟಿ ಕೋಟಿ ಖರ್ಚು ಮಾಡುವ ಸುಧಾಕರ್‌ಗೆ ಹಣ ಎಲ್ಲಿಂದ ಬರುತ್ತೆ, ಆದಾಯದ ಮೂಲವನ್ನು ಸುಧಾಕರ್‌ ಹೇಳಬೇಕಲ್ವಾ,'' ಎಂದು ದೂರಿದರು.

''ನಾನು 20 ವರ್ಷದ ಹಿಂದೆ ಕಾಲೇಜು ಕಟ್ಟಿದ್ರೂ, ನಾನು ಇಂದಿಗೂ ಹೀಗಿರುವೆ. ಆದರೆ, 2 ವರ್ಷದಲ್ಲಿ ಸುಧಾಕರ್‌ ದೊಡ್ಡ ಕಾಲೇಜು ಹೇಗೆ ಕಟ್ಟಿದರು ಎಂಬ ಪ್ರಶ್ನೆ ಉದ್ಭವವಾಗುತ್ತೆ. ಸುಧಾಕರ್‌ ಅವರ ಇಡೀ ಕುಟುಂಬ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಬೆಂಗಳೂರಿನ ಕುಟುಂಬ ಸದಸ್ಯರನ್ನೆಲ್ಲ ಗಣಿಗಾರಿಕೆಗೆ ಬಿಟ್ಟಿದ್ದಾರೆ,'' ಎಂದು ಆರೋಪಿಸಿದರು.

''100 ವರ್ಷದ ಗಣಿ ಸಂಪನ್ಮೂಲಗಳನ್ನು 2-3 ವರ್ಷಗಳಲ್ಲೇ ಬಾಚಿಕೊಂಡು ಹೋಗುತ್ತಿದ್ದಾರೆ. ಗಣಿಗಾರಿಕೆ ಮಾಡುವ ಪ್ರತಿಯೊಬ್ಬರಿಗೂ ಸುಧಾಕರ್‌ಗೆ ಪ್ರತಿ ತಿಂಗಳು ಇಂತಿಷ್ಟು ಅಂತ ಹಣ ಕೊಡಲೇಬೇಕು. ಇಂತಹದರಲ್ಲಿ ಸುಧಾಕರ್‌ ನೈತಿಕತೆ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಕಿಡಿಕಾರಿದರು.

ಜಿಲ್ಲಾಧಿಕಾರಿ ವರ್ಗಾವಣೆ ರಾಜಕೀಯ: ದಕ್ಷ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ ಜಿಲ್ಲಾಧಿಕಾರಿ ಪಿ.ಅನಿರುದ್ಧ್‌ ಶ್ರವಣ್‌ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳ ವರ್ಗಾವಣೆಯಲ್ಲಿ ರಾಜಕೀಯ ಹಿನ್ನೆಲೆ ಇದೆ. ಬರಪೀಡಿತ ಜಿಲ್ಲೆಯಲ್ಲಿ ಕೇವಲ 1 ವರ್ಷ ಅಲ್ಪವಾಧಿಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್‌ ಅವರು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಯಾವ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ವರ್ಗಾವಣೆ ಮಾಡಿರುವುದು ಸರಿ. ಆದರೆ, ನಿಷ್ಠಾವಂತ ಅಧಿಕಾರಿಗಳಿಗೆ ಮುಂದಿನ ಜಾಗ ಯಾವುದು ಎಂಬ ಪ್ರಸ್ತಾಪ ಮಾಡದಿರುವುದು ತಪ್ಪು ಎಂದು ದೂರಿದರು.

ಯಡಿಯೂರಪ್ಪ ಒನ್‌ ಮ್ಯಾನ್‌ ಶೋ!: ರಾಜ್ಯದಲ್ಲಿ ನೂತನ ಸರಕಾರದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒನ್‌ ಮ್ಯಾನ್‌ ಶೋ ಎಂಬಂತಾಗಿದ್ದು, ನೆರೆ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ನೆರೆಯಿಂದ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಸೇರಿದಂತೆ ನೀರು ವ್ಯರ್ಥವಾಗ್ತಿರೋದು ನೋಡಿದ್ರೆ ನೋವು ಉಂಟಾಗುತ್ತದೆ. ಯಡಿಯೂರಪ್ಪ ಒಬ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು ಎಂದು ಹೇಳಿದರು.

ಇನ್ನೂ ಬಿಎಸ್‌ವೈ ಸಿಎಂ ಆದ ಮೇಲೆ ದೆಹಲಿಗೆ ಹೋದ್ರು, ಬಂದ್ರು ಅಷ್ಟೇ. ಪ್ರವಾಹ ವಿಕೋಪದ ಬಗ್ಗೆ ಅಧಿಕಾರಿಗಳಿಂದ ಸಮರ್ಪಕವಾದ ಮಾಹಿತಿಯನ್ನು ಪಡೆದುಕೊಳ್ತಿಲ್ಲ. ಸಾರ್ವಜನಿಕರು ಕೊಡುವ ಕೊಡುಗೆಗಳನ್ನು ಸಂತ್ರಸ್ತರಿಗೆ ಕೊಡುತ್ತಿದ್ದಾರೆ. ಸರಕಾರದ ಅನುದಾನವನ್ನು ಬಳಸ್ತಾನೆ ಇಲ್ಲ. ಯಡಿಯೂರಪ್ಪ ಅವರು ಒನ್‌ ಮ್ಯಾನ್‌ ಶೋ ಮಾಡ್ತಿದ್ದಾರೆ. ಸರಕಾರದ ಕಾರ್ಯವೈಖರಿ ನನಗೆ ನೋವು ತಂದಿದೆ ಎಂದು ಹೇಳಿದರು.

ಕೆ.ಎಚ್‌. ಮುನಿಯಪ್ಪ ವಿರುದ್ಧ ಆಕ್ರೋಶ: ಕಳೆದ ಲೋಕಸಭೆ ಚುನಾವಣೆ ವೇಳೆ ಕೆ.ಎಚ್‌.ಮುನಿಯಪ್ಪ ಅವರು ಚುನಾವಣಾ ಪ್ರಚಾರಕ್ಕೂ ಬಂದಿಲ್ಲ, ಯಾರ ಬಳಿಯೂ ಸರಿಯಾಗಿ ಮಾತಾಡಲಿಲ್ಲ. ಎಲ್ಲೂ ಜನರ ಬಳಿ ಸೇರಲಿಲ್ಲ. ಚುನಾವಣಾ ಪ್ರಚಾರಕ್ಕೂ ಹಣ ಕೊಡಲಿಲ್ಲ. 7 ಬಾರಿ ಚುನಾವಣೆ ಗೆದ್ದಿದ್ದೇನೆ ಅಂತಾ ಬಾಯಿಗೆ ಬಂದ ಹಾಗೇ ಮಾತಾಡಿದರೆ ಗೆಲ್ಲಾಕ್ಕಾಗುತ್ತಾ? ಕ್ಷೇತ್ರದ ಜನ ಅವರ ವಿರುದ್ಧ ಇದ್ದರು. ಆಗಿಂದಾಗ ಗೇಲೋಕೆ ಆಗುತ್ತಾ? ಕಾಂಗ್ರೆಸ್‌ ರಾಜ್ಯ, ರಾಷ್ಟ್ರದಲ್ಲಿ ಸೋತಿದೆ. ಅಂತಹದರಲ್ಲಿ ಅವರದ್ದು ಸ್ಪೆಷಲ್‌ ಏನೂ ಇಲ್ಲ ಎಂದು ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ