ಆ್ಯಪ್ನಗರ

ಅಧಿಕಾರಿಗಳಿಂದ ರಾಜಕಾಲುವೆ, ಚರಂಡಿಗಳ ಪರಿಶೀಲನೆ

ಮಳೆಗಾಲದಲ್ಲಿ ಎಲ್ಲ ಕಡೆ ಮಳೆ ನೀರು ಸರಾಗವಾಗಿ ಹರಿದು ಕೆರೆ ಕುಂಟೆಗಳನ್ನು ಸೇರಬೇಕು ಎಲ್ಲಿಯೂ ಕೂಡ ಮಳೆ ನೀರು ಮನೆ ಮಠಗಳಿಗೆ ನುಗ್ಗಿ ಆಗುವ ಅನಾಹುತಗಳನ್ನು ತಡೆಯಲು ತಾಲೂಕು ಆಡಳಿತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಹಸೀಲ್ದಾರ್‌ ಎಸ್‌.ಅಜಿತ್‌ ಕುಮಾರ್‌ ರೈ ತಿಳಿಸಿದರು.

Vijaya Karnataka 16 May 2019, 5:00 am
ಶಿಡ್ಲಘಟ್ಟ: ಮಳೆಗಾಲದಲ್ಲಿ ಎಲ್ಲ ಕಡೆ ಮಳೆ ನೀರು ಸರಾಗವಾಗಿ ಹರಿದು ಕೆರೆ ಕುಂಟೆಗಳನ್ನು ಸೇರಬೇಕು ಎಲ್ಲಿಯೂ ಕೂಡ ಮಳೆ ನೀರು ಮನೆ ಮಠಗಳಿಗೆ ನುಗ್ಗಿ ಆಗುವ ಅನಾಹುತಗಳನ್ನು ತಡೆಯಲು ತಾಲೂಕು ಆಡಳಿತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಹಸೀಲ್ದಾರ್‌ ಎಸ್‌.ಅಜಿತ್‌ ಕುಮಾರ್‌ ರೈ ತಿಳಿಸಿದರು.
Vijaya Karnataka Web drainage inspection from the authorities
ಅಧಿಕಾರಿಗಳಿಂದ ರಾಜಕಾಲುವೆ, ಚರಂಡಿಗಳ ಪರಿಶೀಲನೆ


ನಗರದಲ್ಲಿ ಮಳೆ ನೀರು ಹರಿಯುವ ದೊಡ್ಡ ಕಾಲುವೆ ರಾಜ ಕಾಲುವೆಗಳನ್ನು ನಗರಸಭೆ ಆಯುಕ್ತ ಹನುಮಂತರಾಯಪ್ಪ ಅವರೊಂದಿಗೆ ವೀಕ್ಷಿಸಿದ ಅವರು, ನಗರ ಸೇರಿದಂತೆ ತಾಲೂಕಿನಾದ್ಯಂತ ಸುರಿಯುವ ಮಳೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಮುಂಜಾಗೃತೆಯಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ನಗರಸಭೆ ಹಾಗೂ ತಾಲೂಕು ಆಡಳಿತ ಸಿದ್ದವಾಗಿದೆ ಎಂದರು.

ಇನ್ನೇನು ಮಳೆಗಾಲ ಆರಂಭ ಆಗಲಿದೆ ಈ ಹಿನ್ನಲೆಯಲ್ಲಿ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಆಗದಂತೆ ಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆಯೋ ಅಂತಹವುಗಳನ್ನು ಗುರ್ತಿಸಲಾಗುತ್ತಿದೆ.

ನಂತರ ಒಂದೊಂದಾಗಿ ಕಾಲುವೆಗಳ ಒತ್ತುವರಿ ತೆರವು ಮಾಡಿ ಅಗತ್ಯ ಬಿದ್ದರೆ ಕಾಲುವೆಗಳ ಮಾರ್ಗವನ್ನು ಕೂಡ ಬದಲಿಸಿ ಮಳೆ ನೀರನ್ನು ಕೆರೆ ಕುಂಟೆಗಳಿಗೆ ಹರಿಸಲಾಗುವುದು ಯಾವುದೆ ಕಾರಣಕ್ಕೂ ಮನೆ ಮಠಗಳಿಗೆ ನುಗ್ಗಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಉಂಟಾಗಬಾರದು ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟವಾಗಿ ಸೂಚನೆ ನೀಡಿದ್ದು ಮುಖ್ಯವಾಗಿ ಕಂದಾಯ ಇಲಾಖೆ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳ ನಡುವೆ ಈ ಕೆಲಸವನ್ನು ಕೂಡ ಕೈಗೆತ್ತಿಕೊಳ್ಳಬೇಕಿದೆ.

ಮಳೆಗಾಲ ಆದ್ದರಿಂದ ಈ ಕೆಲಸವನ್ನು ಆಧ್ಯತೆ ಮೇರೆಗೆ ಪರಿಗಣಿಸಿ ಕಾರ್ಯೊನ್ಮುಕರಾಗಬೇಕಿದೆ ಪ್ರತಿ ವಾರಕ್ಕೆ ಒಂದು ಬಾರಿ ಹಿರಿಯ ಅಧಿಕಾರಿಗಳಿಗೆ ಪ್ರಗತಿ ಕುರಿತು ವರದಿ ನೀಡಬೇಕಾಗುತ್ತದೆ ನಿರ್ಲಕ್ಷಿಸುವ ಅಧಿಕಾರಿ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗವುದು ಎಂದು ಎಚ್ಚರಿಸಿದರು.

ನಗರದ 1, 2 ಹಾಗೂ 3ನೇ ಕಾರ್ಮಿಕ ನಗರದಲ್ಲಿ ಮಳೆ ಬಂದರೆ ನೀರು ಸರಾಗವಾಗಿ ಹರಿಯದೆ ಅಲ್ಲಿನ ಸುತ್ತ ಮುತ್ತಲಿನ ಮನೆಗಳಿಗೆ ನುಗ್ಗಿ ದವಸ ಧಾನ್ಯ ಬಟ್ಟೆ ಬರೆಗಳನ್ನು ನಾಶಪಡಿಸುವ ಘಟನೆಗಳು ಸಾಕಷ್ಟು ಭಾರಿ ನಡೆದಿವೆ ಎಂದು ಅಲ್ಲಿನ ವಾಸಿಗಳು ಅಧಿಕಾರಿಗಳ ಗಮನಸೆಳೆದರು.

ಅಲ್ಲಿಗೆ ಭೇಟಿ ನೀಡಿ ವೀಕ್ಷಿಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಹಾಗೆಯೆ ನಗರದ ಕಾಂಗ್ರೇಸ್‌ ಭವನ ರಸ್ತೆ ಹಾಗೂ ಹಳೇ ಆಸ್ಪತ್ರೆಯ ರಸ್ತೆಯಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಲು ಸೂಚಿಸಿದರು.

ಶುಕ್ರವಾರದಿಂದ ನಗರದ ಹೊರವಲಯದಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯ ಮತ್ತು ಮಣ್ಣು ತೆರವುಗೊಳಿಸಿ ಸಾಗಿಸುವ ಕೆಲಸ ಮಾಡಲು ಈಗಾಗಲೆ ತಯಾರಿ ನಡೆಸಿದ್ದೇವೆ ಮುಂದಿನ ಮಳೆಗಾಲದಲ್ಲಿ ಹಿಂದೆ ನಡೆದಂತ ಅವಘಡಗಳು ನಡೆಯದಂತೆ ಕ್ರಮವಹಿಸುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ