ಆ್ಯಪ್ನಗರ

ಬತ್ತಿದ ನೀರಿನ ಮೂಲ, 8 ನೀರಿನ ಘಟಕಗಳಿಗೆ ಬೀಗ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನೀರಿನ ಹಾಹಾಕಾರ ಹೆಚ್ಚಿದೆ. ಹಳ್ಳಿ, ನಗರಗಳೆನ್ನದೆ ನೀರಿನ ಅಭಾವ ಎಲ್ಲರನ್ನೂ ಕಾಡುತ್ತಿದೆ. ಚಿಕ್ಕಬಳ್ಳಾಪುರ ನಗರದಲ್ಲಿನೀರಿನ ಸರಬರಾಜಿಲ್ಲದೆ 8 ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್‌ ಆಗಿವೆ.

Vijaya Karnataka 26 Aug 2019, 4:00 pm
13 ಘಟಕಗಳಲ್ಲಿ5 ಘಟಕಗಳು ಮಾತ್ರ ವರ್ಕಿಂಗ್‌ | ನೀರಿನ ಸರಬರಾಜು ಮಾಡಲಾಗದೆ ಘಟಕಗಳಿಗೆ ಬೀಗ
Vijaya Karnataka Web 25cbpk2 water plant_10

ಎಂ.ಕೃಷ್ಣಪ್ಪ ಕೆಎನ್‌ಹಳ್ಳಿ
ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನೀರಿನ ಹಾಹಾಕಾರ ಹೆಚ್ಚಿದೆ. ಹಳ್ಳಿ, ನಗರಗಳೆನ್ನದೆ ನೀರಿನ ಅಭಾವ ಎಲ್ಲರನ್ನೂ ಕಾಡುತ್ತಿದೆ. ಚಿಕ್ಕಬಳ್ಳಾಪುರ ನಗರದಲ್ಲಿನೀರಿನ ಸರಬರಾಜಿಲ್ಲದೆ 8 ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್‌ ಆಗಿವೆ.

ನಗರಕ್ಕೆ ನೀರೊದಗಿಸುತ್ತಿದ್ದ ಏಕೈಕ ಜಲಮೂಲವಾದ ಜಕ್ಕಲಮಡುಗು ಜಲಾಶಯ ಕಳೆದೊಂದು ತಿಂಗಳ ಹಿಂದೆ ಬತ್ತಿ ಹೋಗಿದೆ. ಇನ್ನು ನಗರಕ್ಕೆ ನೀರು ಸರಬರಾಜು ಮಾಡಲು ಇರುವ ಏಕೈಕ ಆಧಾರ ನಗರಸಭೆಯ ಕೊಳವೆಬಾವಿಗಳು. ಅವುಗಳು ಕೂಡ ಒಂದೊಂದೇ ಒತ್ತಿ ಹೋಗುತ್ತಿದ್ದು, ಕೆಲವು ಬೋರ್‌ವೆಲ್‌ಳಲ್ಲಿನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿಗ ಘಟಕಗಳಿಗೆ ನೀರಿನ ಸರಬರಾಜು ನಿಲ್ಲಿಸಲಾಗಿದೆ.

13 ರಲ್ಲಿ5 ಮಾತ್ರವೇ ವರ್ಕಿಂಗ್‌: ನಗರದಲ್ಲಿಒಟ್ಟು 31 ವಾರ್ಡ್‌ಗಳಿದ್ದು, ಅದರಲ್ಲಿಮಾಜಿ ಶಾಸಕ ಡಾ.ಕೆ.ಸುಧಾಕರ್‌ ನೇತೃತ್ವದ ಶ್ರೀ ಸಾಯಿಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಸುಮಾರು 13 ವಾರ್ಡ್‌ಗಳಲ್ಲಿಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಪ್ರಸ್ತುತ ನೀರಿನ ಕೊರತೆಯಿಂದ ಹಲವು ಘಟಕಗಳನ್ನು ಮುಚ್ಚಲಾಗಿದ್ದು, ಇವುಗಳಲ್ಲಿ5 ಘಟಕಗಳು ಮಾತ್ರ ಕೆಲಸ ಮಾಡುತ್ತಿವೆ.

ಜಿಲ್ಲೆಯ ಹಲವೆಡೆ ಇದೇ ಸ್ಥಿತಿ: ಜಿಲ್ಲಾಕೇಂದ್ರ ಮಾತ್ರವಲ್ಲದೆ ಜಿಲ್ಲೆಯ ಇತರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂನೀರಿಲ್ಲದೆ ಹಲವು ಶುದ್ಧ ನೀರಿನ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯ ಅಂತರ್ಜಲದಲ್ಲಿಅಗತ್ಯಕ್ಕಿಂತ ಹೆಚ್ಚಿನ ಫ್ಲೋರೈಡ್‌ ಅಂಶ ಇದೆ ಎನ್ನುವ ಕಾರಣಕ್ಕೆ ಸರಕಾರ ಕುಡಿಯುವ ನೀರನ್ನು ಸಂರಸ್ಕರಿಸಿ ನೀಡಲು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೀಗ ಅವುಗಳಿಗೆ ನೀರಿನ ಸರಬರಾಜಿಲ್ಲದೆ ಬೀಗ ಹಾಕಲಾಗಿದೆ.

360 ಗ್ರಾಮಗಳಲ್ಲಿಕ್ಷಾಮ
ಜಿಲ್ಲೆಯಲ್ಲಿ360ಕ್ಕೂ ಅಧಿಧಿಕ ಹಳ್ಳಿಗಳಲ್ಲಿಕುಡಿಯುವ ನೀರಿನ ಸಮಸ್ಯೆ ಇದೆ. 147 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ 213 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ದಿನಕ್ಕೆ 387 ಟ್ಯಾಂಕರ್‌ಗಳ ನೀರು ಕೊಡಲಾಗುತ್ತಿದೆ. ಈ ಟ್ಯಾಂಕರ್‌ಗಳಿಗೆ ಒಂದು ತಿಂಗಳಿಗೆ 35 ಲಕ್ಷ ಹಣ ಖರ್ಚಾಗುತ್ತಿದೆ. ಆದರೂ ಅನೇಕ ಹಳ್ಳಿಗಳಲ್ಲಿನೀರಿನ ದಾಹ ತೀರುತ್ತಿಲ್ಲ.

ಜಕ್ಕಲಮಡುಗು ಜಲಾಶಯದ ನೀರು ಖಾಲಿಯಾಗಿರುವ ಕಾರಣ ತಾತ್ಕಾಲಿಕವಾಗಿ ಕೆಲವು ಶುದ್ಧ ನೀರಿನ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಸಮಸ್ಯೆ ಪರಿಹಾರವಾದ ಕೂಡಲೇ ಮತ್ತೆ ಆರಂಭಿಸಲಾಗುವುದು.
-ಉಮಾಕಾಂತ್‌, ಪೌರಾಯುಕ್ತ, ನಗರಸಭೆ, ಚಿಕ್ಕಬಳ್ಳಾಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ