ಆ್ಯಪ್ನಗರ

ಪಕ್ಷೇತರರ ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆ ಹಂಚಿಕೆ

ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರರ ಅಭ್ಯರ್ಥಿಗಳಿಗೆ ಚುನಾವಭೇ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್‌ ಶ್ರವಣ್‌ ಅವರು ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡಿದ್ದಾರೆ.

Vijaya Karnataka 31 Mar 2019, 5:00 am
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರರ ಅಭ್ಯರ್ಥಿಗಳಿಗೆ ಚುನಾವಭೇ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್‌ ಶ್ರವಣ್‌ ಅವರು ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡಿದ್ದಾರೆ.
Vijaya Karnataka Web election symbol distribution to independent candidates
ಪಕ್ಷೇತರರ ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆ ಹಂಚಿಕೆ


ಲೋಕಸಭೇ ಕ್ಷೇತ್ರದ ಕಣದಲ್ಲಿ ಅಂತಿಮವಾಗಿ 15 ಅಭ್ಯರ್ಥಿಗಳಿದ್ದು, ಈ ಪೈಕಿ ನಾಲ್ವರು ನಾನಾ ರಾಷ್ಟ್ರೀಯ ಪಕ್ಷಗಳ (ಕಾಂಗ್ರೆಸ್‌, ಬಿಜೆಪಿ, ಸಿಪಿಐಎಂ, ಬಿಎಸ್‌ಪಿ) ಅಭ್ಯರ್ಥಿಗಳಾಗಿದ್ದು, 5 ಅಭ್ಯರ್ಥಿಗಳು ನಾನಾ ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ. ಉಳಿದಂತೆ 6 ಮಂದಿ ಪಕ್ಷೇತರರ ಅಭ್ಯರ್ಥಿಗಳು ಕಣದಲ್ಲಿದ್ದು, ಅವರಿಗೆ ಚುನಾವಣೆ ಚಿಹ್ನೆ ಹಂಚಿಕೆ ಮಾಡಲಾಗಿದೆ.

ಇನ್ನು ನೋಂದಾಯಿತ ಪಕ್ಷಗಳಾದ ಉತ್ತಮ ಪ್ರಜಾಕೀಯ ಪಾರ್ಟಿ(ಆಟೋರಿಕ್ಷಾ)-ಜಿ. ಮುನಿರಾಜು, ಸಮಾಜವಾದಿ ಜನತಾ ಪಾರ್ಟಿ(ಟೋಪಿ)-ಖಾದರ್‌ ಸುಬಾನ್‌ ಖಾನ್‌, ಕರ್ನಾಟಕ ಕಾರ್ಮಿಕರ ಪಕ್ಷ (ಬ್ರೆಡ್‌ ಟೋಸ್ಟರ್‌)ದಿಂದ ನಜೀರ್‌ ಅಹಮದ್‌, ಅಂಬೇಡ್ಕರ್‌ ಸಮಾಜ ಪಾರ್ಟಿ(ಗಾಜಿನ ಲೋಟ)-ಎಸ್‌.ಆರ್‌.ನಾಗೇಶ್‌ರೆಡ್ಡಿ ಹಾಗೂ ಕರ್ನಾಟಕ ಜನತಾ ಪಕ್ಷ(ತೆಂಗಿನ ತೋಟ)-ನಾಗೇಂದ್ರರಾವ್‌ ಶಿಂದೆ ಅವರು ಕಣದಲ್ಲಿದ್ದಾರೆ.

ಯಾರಿಗೆ ಯಾವ್ಯಾವ ಚಿಹ್ನೆ

1. ಕನಕಲಕ್ಷ್ಮೇ-ದೂರದರ್ಶನ(ಟಿವಿ)

2. ಎಲ್‌.ನಾಗರಾಜ್‌-ಗ್ಯಾಸ್‌ ಸಿಲಿಂಡರ್‌

3. ನಸುರುಲ್ಲಾ-ಡೀಸೆಲ್‌ ಪಂಪ್‌

4. ಕೆ.ಎಸ್‌.ನಳಿನ-ಕಬ್ಬು ರೈತ

5. ಎಸ್‌.ವಿ.ಫಣಿರಾಜು-ಮೇಜು

6. ಅಬ್ದುಲ್‌ ಕರೀಂ ದೇಸಾಯಿ-ಹವಾ ನಿಯಂತ್ರಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ