ಆ್ಯಪ್ನಗರ

ಸಾಮಗ್ರಿ ಸಾಲ 70 ಸಾವಿರ, ಸಿಬ್ಬಂದಿ ಸಂಬಳ 1.60 ಲಕ್ಷ ಬಾಕಿ

ಮಾಜಿ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆ, ಹಸಿದವರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್‌ ವೇತನಬಾಕಿ, ದಿನಸಿ ಬಾಕಿ ಇರುವುದರಿಂದ ಗುಡಿಬಂಡೆ ಇಂದಿರಾ ಕ್ಯಾಂಟೀನ್‌ಗೆ ಸಿಬ್ಬಂದಿ ಬೀಗ ಹಾಕಿ ಪ್ರತಿಭಟಿಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

Vijaya Karnataka 8 Aug 2019, 6:39 pm
ಗುಡಿಬಂಡೆ: ಮಾಜಿ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆ, ಹಸಿದವರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್‌ ವೇತನಬಾಕಿ, ದಿನಸಿ ಬಾಕಿ ಇರುವುದರಿಂದ ಗುಡಿಬಂಡೆ ಇಂದಿರಾ ಕ್ಯಾಂಟೀನ್‌ಗೆ ಸಿಬ್ಬಂದಿ ಬೀಗ ಹಾಕಿ ಪ್ರತಿಭಟಿಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
Vijaya Karnataka Web equipment loan 70 thousand staff salary 1 60 lakh dues
ಸಾಮಗ್ರಿ ಸಾಲ 70 ಸಾವಿರ, ಸಿಬ್ಬಂದಿ ಸಂಬಳ 1.60 ಲಕ್ಷ ಬಾಕಿ


ಇಂದಿರಾ ಕ್ಯಾಂಟೀನ್‌ ಉಸ್ತುವಾರಿ ವ್ಯವಸ್ಥಾಪಕಿ ಕೆ. ಸುಮಿತ್ರಾ ಮಾತನಾಡಿ, ಕ್ಯಾಂಟೀನ್‌ ಪ್ರಾರಂಭವಾದ ನಂತರ 2 ತಿಂಗಳ ಮಾತ್ರ ವೇತನ ನೀಡಲಾಗಿತ್ತು. ಮೂರು ತಿಂಗಳಿಂದ ವೇತನವೂ ಇಲ್ಲ ಜತೆಗೆ ಇಂದಿರಾ ಕ್ಯಾಂಟೀನ್‌ ಟೆಂಡರ್‌ ಪಡೆದಿರುವವರು ಮೂರು ತಿಂಗಳಿಂದ ಅಡುಗೆ ಸಾಮಗ್ರಿಗಳನ್ನು ಸರಬರಾಜು ಮಾಡದೇ, ಸ್ಥಳೀಯವಾಗಿ ಸಾಮಗ್ರಿ ಖರೀದಿ ಮಾಡಿ, ಪ್ರತಿದಿನ ಜನರಿಗೆ ತಿಂಡಿ, ಊಟಕ್ಕೆ ಸಮಸ್ಯೆ ಅಗದಂತೆ ಸೂಚನೆ ನೀಡಲಾಗಿತ್ತು. ಅದರಂತೆ ಮೂರು ತಿಂಗಳಿಂದ ಖರೀದಿಸಿರುವ ಸಾಮಗ್ರಿಗಳ ಸಾಲ 70 ಸಾವಿರ ಲಕ್ಷ ರೂ., ಸಿಬ್ಬಂದಿ ಸಂಬಳ 1.60 ಲಕ್ಷ ರೂ.ಬಾಕಿ ಇದೆ ಎಂದು ತಿಳಿಸಿದರು.

ಅನುದಾನವೇ ಬಂದಿಲ್ಲ: ಒಂದು ಕಡೆ ಸಿಬ್ಬಂದಿ ವೇತನ, ಮತ್ತೊಂದು ಕಡೆ ಅಂಗಡಿ ಮಾಲೀಕರು ಹಣಕ್ಕೆ ಒತ್ತಾಯಿಸುತ್ತಿದ್ದು, ಕ್ಯಾಂಟೀನ್‌ ನಡೆಸುವುದು ಕಷ್ಟ ಸಾಧ್ಯವಾಗಿದೆ. ಈ ಬಗ್ಗೆ ಈಗಾಗಲೇ ಶಾಸಕರಿಗೆ, ತಹಸೀಲ್ದಾರ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮೂರು ತಿಂಗಳಿಂದ ಅನುದಾನ ಬಂದಿಲ್ಲ ಎಂದು ತಿಳಿಸಿದ್ದೆವು. ಎರಡು ತಿಂಗಳೊಳಗೆ ಸರಿಪಡಿಸುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಇದುವರೆಗೂ ಸಮಸ್ಯೆ ಸರಿಪಡಿಸಿಲ್ಲ. ಇಷ್ಟು ದಿನ ಕೈ ಸಾಲ ಮಾಡಿ ಮೂರು ತಿಂಗಳಿನಿಂದ ಕ್ಯಾಂಟೀನ್‌ ನಡೆಸಿಕೊಂಡು ಬಂದಿದ್ದೇವೆ. ಇನ್ನು ಮುಂದೆ ನಿಭಾಯಿಸುವುದು ಕಷ್ಷವಾಗಿರುವುದರಿಂದ ವಿಧಿ ಇಲ್ಲದೆ ಮುಚ್ಚಲಾಯಿತು ಎಂದು ತಿಳಿಸಿದ್ದಾರೆ.

ಮೂರು ತಿಂಗಳಿನಿಂದ ನಾವು ಖರ್ಚು ಮಾಡಿರುವ ಹಣ 70 ಸಾವಿರ ಹಾಗೂ 2 ತಿಂಗಳ ಸಿಬ್ಬಂದಿ ವೇತನ 1.60 ಲಕ್ಷ ಕೊಡಿಸಿ. ಕೂಲಿ ಮಾಡಿ ನಿತ್ಯ ಜೀವನ ನಡೆಸುವವರು ಸಂಬಳ ಇಲ್ಲದೆ ಜೀವನ ಅಯೋಮಯವಾಗಿದೆ ಎಂದು ಕ್ಯಾಂಟೀನ್‌ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡರು.

ಸಾಮಗ್ರಿ ಬಾಕಿ ಹಣ ಹಾಗೂ ಸಿಬ್ಬಂದಿ ವೇತನ ನೀಡುವಂತೆ ಗ್ರೇಡ್‌ - 2 ತಹಸೀಲ್ದಾರ್‌ ಸಿಗ್ಬತ್‌ ವುಲ್ಲಾ ಗೆ ಮನ ಸಲ್ಲಿಸಲಾಯಿತು.

ಇಂದಿರಾ ಕ್ಯಾಂಟೀನ್‌ನ ಅಡುಗೆ ಭಟ್ಟರಾದ ಎನ್‌. ಆನಂದ, ಶಿವ, ಸಹಾಯಕರಾದ ವೆಂಕಟೇಶ, ಕೆ.ಎನ್‌. ಯಶೋದಮ್ಮ, ಸ್ವಚ್ಛತಾ ಸಿಬಂದಿ ಮಂಜುಳಾ, ಸರಸ್ವತಮ್ಮ ಹಾಗೂ ಕಾವಲುಗಾರ ಲಕ್ಷ ್ಮಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ