ಆ್ಯಪ್ನಗರ

Seed Bank: ರೈತರಿಗೆ ಸಿಹಿ ಸುದ್ದಿ, ಶೀಘ್ರದಲ್ಲೆ ಬೀಜ ಬ್ಯಾಂಕ್‌ ಸ್ಥಾಪನೆ

ದೇಶಿ ಬೆಳೆಗಳ ಪ್ರೋತ್ಸಾಹ ಹಾಗು ರೈತರ ಅಭಿವೃದ್ಧಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೀಜ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಇದರಿಂದ ರೈತರು ವಿವಿಧ ತಳಿಯ ಬೀಜಗಳನ್ನು ಖರೀದಿಸಲು ಸಹಕಾರಿಯಾಗಿದೆ.

Vijaya Karnataka Web 3 Apr 2023, 7:43 am

ಹೈಲೈಟ್ಸ್‌:

  • ರೈತರ ಅನುಕೂಲಕ್ಕಾಗಿ ಬೀಜ ಬ್ಯಾಂಕ್‌ ಸ್ಥಾಪನೆ.
  • ಬೀಜ ಬ್ಯಾಂಕ್‌ನಲ್ಲಿ ವಿವಿಧ ತಳಿಯ ಬೀಜಗಳು ಲಭ್ಯ.
  • ರೈತರ ಸಬಲೀಕರಣಕ್ಕೆ ಈ ಹೊಸ ಯೋಜನೆ ಪೂರಕ.

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Seed Bank
Seed Bank
ಚಿಕ್ಕಬಳ್ಳಾಪುರ: ಶೀಘ್ರದಲ್ಲೇ ಆಶ್ರಮದಲ್ಲಿ ಬೀಜ ಬ್ಯಾಂಕ್‌ ಸ್ಥಾಪಿಸಲಾಗುವುದು, ಇದು ರೈತರಿಗೆ ವಿವಿಧ ತಳಿಗಳ ಬೀಜಗಳನ್ನು ಖರೀದಿಸಲು ಮತ್ತು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ಸದ್ಗುರು ಮಧುಸೂಧನ ಸಾಯಿ ತಿಳಿಸಿದರು.
ಸತ್ಯಸಾಯಿ ಲೋಕ ಸೇವಾ ಟ್ರಸ್ಟ್‌, ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿರಿಧಾನ್ಯಗಳು, ತರಕಾರಿ ಮತ್ತು ಹಣ್ಣುಗಳಲ್ಲಿನ ಬೀಜಗಳ ವೈವಿಧ್ಯತೆಯ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ಬೆಳೆ ಬೆಳೆಯುವ ಬಗ್ಗೆ ರೈತರಿಗೆ ತರಬೇತಿ ನೀಡಬೇಕಾದ ಅಗತ್ಯವಿದೆ ಎಂದರು.

ಬೀಜ ಬ್ಯಾಂಕ್‌ ಸ್ಥಾಪನೆ
ರೈತರ ಕೃಷಿ, ತೋಟಗಾರಿಕೆ ಪದ್ದತಿಯಲ್ಲಿ ಸಮಗ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ದೇಶಿಯ ತಳಿಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ರೈತರಿಗೆ ಹೊಸ ಹೊಸ ತಳಿಗಳ ಬಗ್ಗೆ ಪರಿಚಯಿಸಬಹುದು. ರೈತರ ಸಬಲೀಕರಣಕ್ಕೆ ಪೂರಕವಾಗಿ ಬೀಜ ಬ್ಯಾಂಕ್‌ ಸ್ಥಾಪಿಸಲಾಗುವುದು, ಇದು ರೈತರಿಗೆ ವಿವಿಧ ತಳಿಗಳ ಬೀಜಗಳನ್ನು ಖರೀದಿಸಲು ಮತ್ತು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಮಂದಗತಿಯಲ್ಲಿ ಸಾಗಿದೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ: ದೊಡ್ಡ ರೈತರಿಗೆ ಎದುರಾಗಿದೆ ಸಣ್ಣ ರೈತರನ್ನು ಬೇಡೋ ಪರಿಸ್ಥಿತಿ
ಪ್ರಾಚೀನ ಕೃಷಿ ಉಪಕರಣಗಳ ಪ್ರದರ್ಶನ
200ಕ್ಕೂ ಹೆಚ್ಚು ಬಗೆಯ ಭತ್ತದ ತಳಿಗಳು ಇವೆ. ಬದನೆಕಾಯಿ, ಮೆಣಸಿನಕಾಯಿಗಳೇ ಮೊದಲಾದ ತರಕಾರಿಗಳ ಬಿತ್ತನೆಗಳು ವಿವಿಧ ರೀತಿಯ ಸೊಪ್ಪುಗಳು ಹಲಸು, ಮಾವುಗಳಂತಹ ಋುತುಮಾನದ ಹಣ್ಣುಗಳ ವೈವಿಧ್ಯಮಯ ಬೀಜಗಳ ಪ್ರದರ್ಶನ ವೀಕ್ಷಕರ ಗಮನ ಸೆಳೆದವು. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಅಂಶವನ್ನು ಸಮೃದ್ಧಗೊಳಿಸುವ ಸಾವಯವ ಗೊಬ್ಬರಗಳ ಅಪರೂಪದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಹಳೆಯ ಕಾಲದಲ್ಲಿ ರೈತರು ಬಳಸುತ್ತಿದ್ದ ಪ್ರಾಚೀನ ಕೃಷಿ ಉಪಕರಣಗಳ ಪ್ರದರ್ಶನ ನಡೆಯಿತು.

ರೈತರು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ವಿವರಗಳನ್ನು ಪಡೆದರು. ವಿವಿಧ ಪ್ರಗತಿಪರ ಸಾವಯವ ಕೃಷಿಕ ರೈತರೊಂದಿಗೆ ಸಂವಾದ ನಡೆಸಿ ತರಬೇತಿ ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ನೆರವೇರಿಸಲಾಯಿತು. ಅಭಿಮುಖ ಸಂವಾದವಾದ ಈ ಅಧಿವೇಶನದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಅನೇಕ ರೈತರು, ನಾನಾ ಬಗೆಯ ಕೃಷಿ ಸಂಶೋಧಕರು, ಸಾವಯವ ಪರಿವಾರದ ಮುಖ್ಯಸ್ಥ ಆನಂದ, ಸತ್ಯಸಾಯಿ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಗೋವಿಂದ ರೆಡ್ಡಿ ಇದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸತ್ಯ ಸಾಯಿ ಆಶ್ರಮದಲ್ಲಿನಡೆದ ತರಕಾರಿ ಮತ್ತು ಹಣ್ಣುಗಳಲ್ಲಿನ ಬೀಜಗಳ ವೈವಿಧ್ಯತೆಯ ಪ್ರದರ್ಶನದಲ್ಲಿಇರಿಸಿದ್ದ ವಿವಿಧ ತಳಿಯ ಬೀಜಗಳನ್ನು ಸದ್ಗುರು ಮಧುಸೂಧನ ಸಾಯಿ ವೀಕ್ಷಿಸಿದರು.
Corruption: ಲಂಚ ಕೇಳುವ ಅಧಿಕಾರಿಗಳಿಗೆ ಬಾರುಕೋಲು ಏಟಿನ ರುಚಿ ತೋರಿಸಿ- ರೈತ ಸಂಘದಿಂದ ಅನ್ನದಾತನಿಗೆ ಸಲಹೆ
ರೈತ ಕುಟುಂಬಗಳ ಸಂಚಾರಕ್ಕೆ ಅಡ್ಡಿ, ಆರೋಪ
ಶಿವಮೊಗ್ಗ ಜಿಲ್ಲೆಯ ಆನಂದಪುರಂ ಸಮೀಪದ ಇರುವಕ್ಕಿಯಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ಮೂಲ ನಿವಾಸಿ ರೈತ ಕುಟುಂಬಗಳಿಗೆ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ ಎಂದು ಯಡೇಹಳ್ಳಿ ಗ್ರಾ.ಪಂ. ಸದಸ್ಯ ಅರುಣ್‌ ಕುಮಾರ್‌ ಗೌಡ ಕರಡಿಮನೆ ಮತ್ತು ಸಮಾಜ ಸೇವಕ ಗುರುಪ್ರಸಾದ್‌ ಆರೋಪಿಸಿದ್ದಾರೆ.

ಕೃಷಿ ವಿ.ವಿ.ಮಂಜೂರಾಗುವ ಮೊದಲು ಸುಮಾರು ಮೂರು ತಲೆಮಾರುಗಳಿಂದ ರೈತರು ಕೃಷಿ ನಡೆಸುತ್ತಾ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ವಿ.ವಿ. ಆಡಳಿತ ತಮ್ಮ ಕಟ್ಟಡ ವಿಸ್ತರಣೆ ಮಾಡುತ್ತಾ ರೈತರು ಓಡಾಡುವ ದಾರಿಯನ್ನು ಬಂದ್‌ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇರುವಕ್ಕಿ ಗ್ರಾಮದ ಮಂಜಪ್ಪ, ಚಂದ್ರಶೇಖರ್‌, ಅಣ್ಣಪ್ಪ, ಯುವರಾಜ, ರುದ್ರಮ್ಮ, ಲೋಕೇಶ ಎಂಬ ರೈತ ಕುಟುಂಬದವರು ಶರಾವತಿ ಯೋಜನೆಯಿಂದ ನಿರಾಶ್ರಿತರಾಗಿ ಇಲ್ಲಿ ನೆಲೆಸಿದ್ದಾರೆ. ವಿ.ವಿ. ಯಿಂದ ಈ ಕುಟುಂಬಗಳ ಓಡಾಟದ ದಾರಿಯಲ್ಲಿ ಹೊಸ ಕಟ್ಟಡ ನಿರ್ಮಾಣ ಆರಂಭವಾಗಿದೆ. ರೈತರು ತಮ್ಮ ಸಮಸ್ಯೆ ಕುರಿತು ಶಾಸಕರಿಗೆ ಮಾ.16ರಂದು ಮನವಿ ಸಹ ಸಲ್ಲಿಸಿದ್ದು, ಪ್ರತಿಯನ್ನು ಸಾಗರ ತಹಸೀಲ್ದಾರ್‌ಗೆ ಸಲ್ಲಿಸಲಾಗಿದೆ. ಆದರೂ ಸಹ ವಿ.ವಿ.ಯವರು ರೈತರಿಗೆ ತೊಂದರೆಯಾಗುವಂತೆ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ನಿರ್ಮಿಸುತ್ತಿದ್ದಾರೆ. ತಕ್ಷಣ ರೈತರಿಗೆ ನ್ಯಾಯ ಸಿಗುವಂತೆ ತಹಸೀಲ್ದಾರ್‌ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ