ಆ್ಯಪ್ನಗರ

ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಭೇಟಿ‌ ನೀಡಿದ ನಕಲಿ ಸಿಇಒ: ದಂಗಾದ ಆಸ್ಪತ್ರೆ ಸಿಬ್ಬಂದಿ!

ನಕಲಿ‌ ಸಿಇಒ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಚಳಿ ಬಿಡಿಸಿದ ಘಟನೆ ಜಿಲ್ಲೆಯ ನೂತನ ತಾಲೂಕು ಚೇಳೂರಿನಲ್ಲಿ ನಡೆದಿದೆ. ಈ ನಕಲಿ ಸಿಇಒ ಡಾಕ್ಟರ್​ಗಳ‌ ಬಳಿ ಹಣ ಪೀಕಲು ಯತ್ನಿಸಿದ್ದು, ಡಾಕ್ಟರ್​ಗಳಿಗೆ ಆವಾಜ್​ ಹಾಕಿ ಚಳಿ ಬಿಡಿಸಿದ್ದಾನೆ.

Vijaya Karnataka Web 20 Feb 2020, 5:37 pm
ಚಿಕ್ಕಬಳ್ಳಾಪುರ: ನಕಲಿ‌ ಸಿಇಒ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಚಳಿ ಬಿಡಿಸಿದ ಘಟನೆ ಜಿಲ್ಲೆಯ ನೂತನ ತಾಲೂಕು ಚೇಳೂರಿನಲ್ಲಿ ನಡೆದಿದೆ. ಕಾರು ಚಾಲಕನ ಜೊತೆ ಬಂದ ನಾಗೇಶ್ ಎಂಬ ನಕಲಿ ಸಿಇಒ ಡಾಕ್ಟರ್ಗಳ‌ ಬಳಿ ಹಣ ಪೀಕಲು ಯತ್ನಿಸಿದ್ದು, ಡಾಕ್ಟರ್ಗಳಿಗೆ ಆವಾಜ್ ಹಾಕಿ ಚಳಿ ಬಿಡಿಸಿದ್ದಾನೆ. ಸದ್ಯ ಜಿಲ್ಲೆಯ ಚೇಳೂರು ಹಾಗೂ ಚಾಕುವೇಲು ಆಸ್ಪತ್ರೆಗೆ ಭೇಟಿ ನೀಡಿ ಎರಡೂ ಕಡೆ ಆಸ್ಪತ್ರೆ ಸಿಬ್ಬಂದಿಗೆ ಆವಾಜ್ ಹಾಕಿ ಚಳಿ ಬಿಡಿಸಿದ್ದಾನೆ ಎನ್ನಲಾಗಿದೆ.
Vijaya Karnataka Web fake ceo


ಕಳೆದ ವರ್ಷ ಕೂಡಾ ಬಾಗೇಪಲ್ಲಿಗೆ ಹ್ಯೂಮನ್ ರೈಟ್ಸ್ ಅಧಿಕಾರಿಯಾಗಿ ಹೋಗಿದ್ದು, ಅಲ್ಲಿಯೂ ತನ್ನ ನಟನೆ ತೋರಿ ಎಸ್ಕೇಪ್ ಆಗಿದ್ದ ಭೂಪ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದ್ದ. ಸ್ಕಾರ್ಪಿಯೋ ವಾಹನದಲ್ಲಿ ಬಂದ ಕಳ್ಳ ಸಿಇಒ, ಅಧಿಕಾರಿಗಳ ಆಸನ ಅಲಂಕರಿಸಿ ಸಿಬ್ಬಂದಿಯನ್ನು ಕರೆದು ತರಾಟೆಗೆ ತಗೆದುಕೊಂಡಿದ್ದಾನೆ‌. ಮೊದಲು ಚೇಳೂರು ಆಸ್ಪತ್ರೆಗೆ ಭೇಟಿ ನೀಡಿ ನಂತರ ಚಾಕುವೇಲು ಆಸ್ಪತ್ರೆಯಲ್ಲಿ ತನ್ನ ನಟನೆ ಮಾಡಿದ್ದಾನೆ.

ಡಾಕ್ಟರ್ಗಳ ಮೇಲೆ ಆ್ಯಕ್ಷನ್ ತಗೆದುಕೊಂಡು ವಜಾ ಮಾಡುವುದಾಗಿ ಎಚ್ಚರಿಕೆ ನೀಡಿ ಅಧಿಕಾರಿಗಳ ಪುಸ್ತಕದಲ್ಲಿ ಮೇಲಿನ ಅಧಿಕಾರಿಗಳಿಗೆ ಪತ್ರ ಬರೆದು ತನ್ನ ಸಹಿ ಹಾಕಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನಂತೆ. ಇನ್ನು ಸ್ಕಾರ್ಪಿಯೋ ವಾಹನಕ್ಕೆ ಸಿಇಒ ಅಧಿಕಾರಿಯ ನಂಬರ್ ಸೇರಿದಂತೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಂಬ ಸೂಚನಾ ಫಲಕದೊಂದಿದೆ ಬಂದಿದ್ದು, ಆಸ್ಪತ್ರೆ ಸಿಬ್ಬಂದಿಗೆ ದೊಡ್ಡ ಶಾಕ್ ಆಗಿದೆ.

ಈ ದೃಶ್ಯಗಳನ್ನು ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ. ಸತ್ಯನಾರಾಯನ ರೆಡ್ಡಿ ಮಾಧ್ಯಮಳಿಗೆ ನೀಡಿದ್ದಾರೆ. ವೈದ್ಯಾಧಿಕಾರಿಗಳ ಪ್ರಕಾರ, ಈತನು ನಾರೆಮದ್ದೇಪಲ್ಲಿ ಗ್ರಾಮಸ್ತನಾಗಿದ್ದು,ಅವನೊಬ್ಬ ಮಾನಸಿಕ ಅಸ್ವಸ್ಥನಾಗಿದ್ದು, ಸ್ನಾತಕೋತ್ತರ ಪದವೀಧರನಾಗಿದ್ದು, ನಿರುದ್ಯೋಗ ಸಮಸ್ಯೆಯಿಂದ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಪೊಲೀಸರ ಹಾಗೂ ವೈದ್ಯಾದಿಕಾರಿಗಳ ತಪಾಸಣೆಯಿಂದ ಹೊರೆಬಿದ್ದಿದೆ.

ತಾನು ಮಾಡಿದ ತಪ್ಪಿಗೆ ತಾನು ಸತ್ತುಹೋಗುತ್ತೇನೆಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ