ಆ್ಯಪ್ನಗರ

ಮಡಬಹಳ್ಳಿ ಬೆಟ್ಟಕ್ಕೆ ಬೆಂಕಿ

ತಾಲೂಕಿನ ಕೈವಾರ ಹೋಬಳಿಯ ಮಡಬಹಳ್ಳಿ ಸಮೀಪದಲ್ಲಿರುವ ಬೆಟ್ಟಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಎರಡು ದಿನಗಳಿಂದ ಹೊತ್ತಿಕೊಂಡು ಉರಿಯುತ್ತಿರುವ ಬೆಟ್ಟದಲ್ಲಿ ವಾಸವಾಗಿದ್ದ ಸಣ್ಣ ಪುಟ್ಟ ಜೀವಜಂತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

Vijaya Karnataka 4 Feb 2019, 5:00 am
ಚಿಂತಾಮಣಿ: ತಾಲೂಕಿನ ಕೈವಾರ ಹೋಬಳಿಯ ಮಡಬಹಳ್ಳಿ ಸಮೀಪದಲ್ಲಿರುವ ಬೆಟ್ಟಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಎರಡು ದಿನಗಳಿಂದ ಹೊತ್ತಿಕೊಂಡು ಉರಿಯುತ್ತಿರುವ ಬೆಟ್ಟದಲ್ಲಿ ವಾಸವಾಗಿದ್ದ ಸಣ್ಣ ಪುಟ್ಟ ಜೀವಜಂತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
Vijaya Karnataka Web fire on madabahalli hill
ಮಡಬಹಳ್ಳಿ ಬೆಟ್ಟಕ್ಕೆ ಬೆಂಕಿ


ಹುಳ ಉಪ್ಪಟೆಗಳು ಗ್ರಾಮಕ್ಕೆ ನುಗ್ಗವ ಭೀತಿ: ಇನ್ನು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದಲ್ಲಿ ಬೆಂಕಿ ಬಿದ್ದಿರುವುದರಿಂದ ಬೆಟ್ಟದಲ್ಲಿರುವ ಹಾವು ಮುಂತಾದ ಹುಳ ಉಪ್ಪಟೆಗಳು ಗ್ರಾಮಕ್ಕೆ ನುಗ್ಗುವ ಭೀತಿಯಲ್ಲಿ ಜನರಿದ್ದಾರೆ.

ದನ ಮೇಯಿಸುವವರ ಪರದಾಟ: ಮಡಬಹಳ್ಳಿ ಸೇರಿದಂತೆ ಬೆಟ್ಟದ ಸುತ್ತಮುತ್ತಲೂ ಇದ್ದ ಗ್ರಾಮಗಳ ಜನ ತಮ್ಮ ಕುರಿ, ಮೇಕೆ ಮುಂತಾದ ಜಾನುವಾರುಗಳನ್ನು ಮೇಯಿಸಲು ಬೆಟ್ಟವನ್ನು ನೆಚ್ಚಿಕೊಂಡಿದ್ದು, ಇದೀಗ ಆಸರೆಯಿಲ್ಲದೆ ಪರದಾಡುವಂತಾಗಿದೆ.

ಇಲಾಖೆಯ ನಿರ್ಲಕ್ಷ ್ಯ: ಬೆಟ್ಟಕ್ಕೆ ಬೆಂಕಿ ಬಿದ್ದು ಎರಡು ದಿನಗಳಾಗಿ, ಹಲವು ಎಕರೆಗಳಷ್ಟು ಬೆಟ್ಟ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಆದರೆ ಈವರೆಗೂ ಅರಣ್ಯ ಇಲಾಖೆ ಇತ್ತ ಸುಳಿದಿಲ್ಲ. ಬೆಟ್ಟಕ್ಕೆ ಬೆಂಕಿ ಬಿದ್ದ ತಕ್ಷ ಣ ಅದನ್ನು ಆರಿಸುವ ಕೆಲಸವನ್ನು ಮಾಡಿದ್ದರೆ ಬೆಂಕಿಯನ್ನು ನಿಯಂತ್ರಿಸಬಹುದಿತ್ತು.

ಬರಗಾಲದಿಂದ ತತ್ತರಿಸಿರುವ ಇಂತಹ ಸಂದರ್ಭದಲ್ಲಿ ಪ್ರಾಕೃತಿಕವಾಗಿ ಮೇವು ಲಭ್ಯವಿರುವುದು ಬೆಟ್ಟಗಳಲ್ಲಿ. ಆದರೆ ಕಿಡಿಗೇಡಿಗಳ ತಪ್ಪಿನಿಂದ ಇಂದು ದನಗಳಿಗೆ ಮೇವು ಇಲ್ಲದಂತಾಗಿದೆ ಎನ್ನುವುದು ಗ್ರಾಮಸ್ಥರ ಅಳಲು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ