ಆ್ಯಪ್ನಗರ

ಕಿಡಿಗೇಡಿಗಳಿಂದ ನಂದಿಬೆಟ್ಟಕ್ಕೆ ಬೆಂಕಿ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

ತಾಲೂಕಿನ ಐತಿಹಾಸಿಕ ನಂದಿಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗಿರಿಧಾಮದ ನೂರಾರು ಎಕರೆ ಅರಣ್ಯ ಪ್ರದೇಶ ಹಾಗೂ ಪ್ರಾಕೃತಿಕ ಸಂಪತ್ತು ಬೆಂಕಿಗಾಹುತಿಯಾಗಿದೆ.

Vijaya Karnataka 24 Feb 2019, 5:00 am
ಚಿಕ್ಕಬಳ್ಳಾಪುರ: ತಾಲೂಕಿನ ಐತಿಹಾಸಿಕ ನಂದಿಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗಿರಿಧಾಮದ ನೂರಾರು ಎಕರೆ ಅರಣ್ಯ ಪ್ರದೇಶ ಹಾಗೂ ಪ್ರಾಕೃತಿಕ ಸಂಪತ್ತು ಬೆಂಕಿಗಾಹುತಿಯಾಗಿದೆ.
Vijaya Karnataka Web fire on nandi hills thousands of acres of forest fire
ಕಿಡಿಗೇಡಿಗಳಿಂದ ನಂದಿಬೆಟ್ಟಕ್ಕೆ ಬೆಂಕಿ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ


ಇಲ್ಲಿನ ಸುಲ್ತಾನ್‌ಪೇಟೆ ಗ್ರಾಮದ ಕಡೆಯ ಬೆಟ್ಟದ ತಪ್ಪಲಲ್ಲಿ ಭಾನುವಾರ ಸುಮಾರು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಿರುಬಿಸಿಲಿಗೆ ಗಿಡ ಮರಗಳ ಎಲೆಗಳು ಒಣಗಿ ಕೆಳಗೆ ಬಿದ್ದಿದ್ದು. ಇದರ ಪರಿಣಾಮ ಬಹುಬೇಗನೇ ಬೆಂಕಿ ನೂರಾರು ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ರಾತ್ರಿ 8 ಗಂಟೆ ವೇಳೆಗೆ ಸುಮಾರು 100 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ.

ಸಸ್ಯ, ಜೀವಸಂಕುಲ ನಾಶ: ಬೆಂಕಿ ಬಿದ್ದ ಕಾರಣ ಬೆಟ್ಟದಲ್ಲಿನ ಅಪಾರ ಪ್ರಮಾಣದ ಸಸ್ಯ ಸಂಪತ್ತು ಹಾಗೂ ಜೀವ ಸಂಕುಲ ನಾಶವಾಗಿದೆ. ನಂದಿ ಗಿರಿಧಾಮವು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು, ಪ್ರಾಣಿ ಸಂಕುಲವನ್ನು ಒಳಗೊಂಡಿದೆ. ಪರಿಸರ ಸಂರಕ್ಷಣೆ ಹಾಗೂ ಕಾಡಿನ ಮಹತ್ವ ತಿಳಿಯದ ಕೆಲವರು ಉದ್ದೇಶಪೂರ್ವಕವಾಗಿ, ಉರುವಲಿಗಾಗಿ, ಇಲ್ಲವೇ ಬೀಡಿ ಸಿಗರೇಟು ಸೇದಿ ಎಸೆಯುವುದರಿಂದ ಬೆಂಕಿ ಹತ್ತಿಕೊಳ್ಳುವ ಸಂಭವ ಇದ್ದು, ಈ ಬಗ್ಗೆ ಜನರು ಜಾಗೃತರಾಗಬೇಕು. ಕಾಡಿನಿಂದ ನಾಡು, ನಾಡಿನಿಂದ ಜನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಂದಿಗಿರಿಧಾಮದ ವಿಶೇಷ ಅಧಿಕಾರಿ ರಮೇಶ್‌ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ