ಆ್ಯಪ್ನಗರ

ಸುಧಾಕರ್‌ ಒಬ್ಬ ಪ್ರಾಮಾಣಿಕತೆ ಇಲ್ಲದ ನಯವಂಚಕ: ಸಿದ್ದರಾಮಯ್ಯ ವಾಗ್ದಾಳಿ

“ಸುಧಾಕರ್‌ಗೆ ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ಟು ನಾನೇ ದೊಡ್ಡ ತಪ್ಪು ಮಾಡಿದೆ. ಅದಕ್ಕೆ ಈಗ ಪಶ್ಚಾತ್ತಾಪ ಪಡ್ತಿದ್ದೀನಿ. 2013ರಲ್ಲೇ ಅಂಜಿನಪ್ಪಗೆ ಟಿಕೆಟ್ ಸಿಗಬೇಕಿತ್ತು. ನಾನು, ಪರಮೇಶ್ವರ್ ಸೇರಿ ಅವರಿಗೆ ಟಿಕೆಟ್ ತಪ್ಪಿಸಿ ‘ಇವನ್ನೊಬ್ಬ ಡಾಕ್ಟರ್, ಯುವಕ’ ಅಂತ ಹೇಳಿ ಸುಧಾಕರ್ ಗೆ ಟಿಕೆಟ್ ಕೊಡಿಸಿದ್ವಿ,” - ಸಿದ್ದರಾಮಯ್ಯ.

Vijaya Karnataka Web 2 Dec 2019, 4:30 pm

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಕೆ ಸುಧಾಕರ್‌ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ “ಅವನೊಬ್ಬ ಪ್ರಾಮಾಣಿಕತೆ ಇಲ್ಲದ ನಯವಂಚಕ” ಎಂದು ಜರೆದಿದ್ದಾರೆ.
Vijaya Karnataka Web Siddaramaiah Chikballapur


ಮಂಚನಬೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಂಜಿನಪ್ಪ ಪರ ಮತ ಬೇಟೆ ನಡೆಸಿದ ಅವರು ಅನರ್ಹ ಶಾಸಕನ ವಿರುದ್ಧ ಹರಿಹಾಯ್ದರು. “ಸುಧಾಕರ್‌ಗೆ ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ಟು ನಾನೇ ದೊಡ್ಡ ತಪ್ಪು ಮಾಡಿದೆ. ಅದಕ್ಕೆ ಈಗ ಪಶ್ಚಾತ್ತಾಪ ಪಡ್ತಿದ್ದೀನಿ. 2013ರಲ್ಲೇ ಅಂಜಿನಪ್ಪಗೆ ಟಿಕೆಟ್ ಸಿಗಬೇಕಿತ್ತು. ನಾನು, ಪರಮೇಶ್ವರ್ ಸೇರಿ ಅವರಿಗೆ ಟಿಕೆಟ್ ತಪ್ಪಿಸಿ ‘ಇವನ್ನೊಬ್ಬ ಡಾಕ್ಟರ್, ಯುವಕ’ ಅಂತ ಹೇಳಿ ಸುಧಾಕರ್ ಗೆ ಟಿಕೆಟ್ ಕೊಡಿಸಿದ್ವಿ,” ಎಂದರು.

“ಸುಧಾಕರ್‌ ಭಾರಿ ದೊಡ್ಡ ದೊಡ್ಡ ಮಾತುಗಳನ್ನು ಮಾತಾಡ್ತಾನೆ. ಆದರೆ ಮಾಡೋದು ಮಾತ್ರ ಸಣ್ಣ ಕೆಲಸ. ಟಿಕೆಟ್ ಕೊಟ್ಟ ನಮಗೇ ಸುಳ್ಳು ಹೇಳಿದ್ದಾನೆ ಅಂದ ಮೇಲೆ ನಿಮಗೆಷ್ಟು ಸುಳ್ಳು ಹೇಳಿರಬಾರದು ಈ ಗಿರಾಕಿ. ಇಂಥಹ ವ್ಯಕ್ತಿ ಯಾವ ಕಾರಣಕ್ಕೂ ರಾಜಕಾರಣದಲ್ಲಿ ಇರಬಾರದು,” ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಯಡಿಯೂರಪ್ಪ ಯಾವತ್ತಾದರೂ ಮುಂಬಾಗಿಲಿನಿಂದ ಬಂದು ಸಿಎಂ ಆಗಿದ್ದಾರಾ: ಸಿಎಂ ವಿರುದ್ಧ ಸಿದ್ದು ಟಾಂಗ್

ಅಪರೇಷನ್ ಕಮಲದ ಸೂತ್ರಧಾರಿಯೇ ಡಾ. ಕೆ. ಸುಧಾಕರ್ ಎಂದ ಅವರು, “ರಾಜೀನಾಮೆ ಸಂದರ್ಭದಲ್ಲಿ ನನ್ನ ಬಳಿ ಎಲ್ಲರೂ ಅಸಮಾಧಾನಗೊಂಡಿದ್ದಾರೆ ಎಂದು ಎಲ್ಲರ ಬಗ್ಗೆಯೂ ಹೇಳುತ್ತಿದ್ದ. ರಾಜೀನಾಮೆ ಸಲ್ಲಿಸಿದ ದಿನ ರಾತ್ರಿ 1 ಗಂಟೆ ಸಮಯದಲ್ಲಿ ‘ಯಾವ ಕಾರಣಕ್ಕೂ ಹೋಗಲ್ಲ. ಬೆಳಗ್ಗೆ ರಾಜೀನಾಮೆ ವಾಪಸ್’ ಎಂದು ಪ್ರಮಾಣ ಮಾಡಿದ. ಆದರೆ ಬೆಳಗ್ಗೆ 6 ಗಂಟೆಗೆ ಮುಂಬೈಗೆ ಹಾರಿದ್ದಾನೆ,” ಎಂದು ಹೇಳಿದರು.



ಎಂಟಿಬಿ ನಾಗರಾಜ್ ಮನೆಗೆ ಹೋದಾಗ ಆತ ಕೂಡ ನಾನು ಸುಧಾಕರ್ ಗೆ ಮಾತು ಕೊಟ್ಟೀದ್ದೀನಿ ಅಂತ ಹೇಳ್ತಾನೆ. ಇಂತಹ ಢೋಂಗಿ ವ್ಯಕ್ತಿಗಳನ್ನು ಯಾವ ಕಾರಣಕ್ಕೂ ಮತ್ತೊಮ್ಮೆ ಗೆಲ್ಲಿಸಬಾರದು,” ಎಂಬುದಾಗಿ ಸುಧಾಕರ್, ಎಂಟಿಬಿ ವಿರುದ್ಧ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ