ಆ್ಯಪ್ನಗರ

ಮೋದಿ, ಅಮಿತ್ ಶಾ ಸರ್ವಾಧಿಕಾರ ನಡೆಸಲು ಹೊರಟಿದ್ದಾರೆ: ರಮೇಶ್‌ ಕುಮಾರ್‌ ವಾಗ್ದಾಳಿ

“ದೇಶ ಇಂದು ಅಪಾಯದ ಅಂಚಿನಲ್ಲಿದ್ದು ಪಾರ್ಲಿಮೆಂಟ್ ಕೂಡ ಸಂವಿಧಾನಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಮೋದಿ, ಅಮಿತ್ ಶಾ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತ ನಿಟ್ಟಿನಲ್ಲಿ ಸರ್ವಾಧಿಕಾರ ಮಾಡಲು ಹೊರಟಿದ್ದಾರೆ,” ಎಂದು ರಮೇಶ್‌ ಕುಮಾರ್‌ ಕಿಡಿಕಾರಿದ್ದಾರೆ.

Vijaya Karnataka 24 Dec 2019, 4:34 pm

ಚಿಕ್ಕಬಳ್ಳಾಪುರ: ನೆಮ್ಮದಿಯಾಗಿದ್ದ ದೇಶದಲ್ಲಿ ಪೌರತ್ವ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಬಿಜೆಪಿ ಸರಕಾರ ಅನಾವಶ್ಯಕವಾಗಿ ಗಲಭೆ, ಅಶಾಂತಿ ಸೃಷ್ಟಿಸಿದೆ ಎಂದು ಮಾಜಿ ಸ್ಪೀಕರ್‌ ಕೆ ರಮೇಶ್‌ ಕುಮಾರ್‌ ದೂರಿದ್ದಾರೆ.
Vijaya Karnataka Web Ramesh Kumar


ಚಿಕ್ಕಬಳ್ಳಾಪುರದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ಕೊಟ್ಟಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ದೇಶ ಇಂದು ಅಪಾಯದ ಅಂಚಿನಲ್ಲಿದ್ದು ಪಾರ್ಲಿಮೆಂಟ್ ಕೂಡ ಸಂವಿಧಾನಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಮೋದಿ, ಅಮಿತ್ ಶಾ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಸರ್ವಾಧಿಕಾರ ನಡೆಸಲು ಹೊರಟಿದ್ದಾರೆ,” ಎಂದು ಕಿಡಕಾರಿದರು.

'ನಗರ ನಕ್ಸಲರು' ಹೇಳಿಕೆ: ಮೋದಿ ಕ್ಷಮೆಯಾಚನೆಗೆ ಡಿಕೆ ಶಿವಕುಮಾರ್‌ ಆಗ್ರಹ

“ಸಂವಿಧಾನದ ಜೊತೆಗೆ ರಾಷ್ಟ್ರಧ್ವಜ ಬದಲಾಯಿಸುವ ಹುನ್ನಾರವೂ ಒಳಗೊಳಗೆ ಮಾಡಲಾಗುತ್ತಿದೆ. ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು ಸಂವಿಧಾನ ಉಳಿವಿಗಾಗಿ ಹೋರಾಟ ಮುಂದುವರೆಸಬೇಕು,” ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ