ಆ್ಯಪ್ನಗರ

ಬಾಲಕಿ ಮೇಲೆ ಅತ್ಯಾಚಾರ ದೂರು: ಆರೋಪಿ ಆತ್ಮಹತ್ಯೆ ಯತ್ನ

ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗ್ರಾಮಾಂತರ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

Vijaya Karnataka 4 Jun 2018, 4:24 pm
ಚಿಂತಾಮಣಿ: ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗ್ರಾಮಾಂತರ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
Vijaya Karnataka Web girl raped accused committed suicide
ಬಾಲಕಿ ಮೇಲೆ ಅತ್ಯಾಚಾರ ದೂರು: ಆರೋಪಿ ಆತ್ಮಹತ್ಯೆ ಯತ್ನ


ಆತ್ಮಹತ್ಯೆಗೆ ಯತ್ನಿಸಿದ ಅರೋಪಿಯನ್ನು ಚನ್ನಕೇಶವಪುರ ಗ್ರಾಮದ ಮಣಿಕಂಠ ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಮೇ 26 ರಂದು ಗ್ರಾಮಾಂತರ ಠಾಣೆಗೆ ದೂರು ನೀಡಿ ತನ್ನ ಮಗಳನ್ನು ಚನ್ನಕೇಶವ ಪುರದ ಮಣಿಕಂಠ, ಗಂಗಾಧರ , ಮತ್ತು ಹರೀಶ್‌ ಮತ್ತು ಬೆಂಗಳೂರಿನ ಚಿಕ್ಕಜಾಲದ ಮಧು ಮತ್ತು ಭಾಗ್ಯ ಎಂಬವರು ಅಪಹರಣ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ನಂತರ ಅಪಹೃತಳಾದ ಬಾಲಕಿಯನ್ನು ಪತ್ತೆಹಚ್ಚಿ ಆಕೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಪೊಲಿಸರು ಪ್ರಕರಣದ 3 ನೇ ಆರೋಪಿ ಹರೀಶ ಎಂಬಾತನನ್ನು ಜೂನ್‌ 1ರಂದು ಕೈವಾರ ಕ್ರಾಸ್‌ನಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅತ್ಯಚಾರ ಎಸಗಿದ ಆರೋಪಿಯ ಬಂಧನಕ್ಕೆ ಬಲೆ ಬೀಸಿದ ಬೆನ್ನಲ್ಲೆ ಆರೋಪಿ ಮಣಿಕಂಠ ಜೂನ್‌ 2ರಂದು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪೊಲೀಸರು ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ವಶಕ್ಕೆ ಪಡೆಯಲು ಕಾಯುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ: ಬಾಲಕಿ ನೀಡಿರುವ ದೂರಿನಲ್ಲಿ ಮೇ 26 ರಂದು ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ತನ್ನನ್ನು ತಾಲೂಕಿನ ಚೆನ್ನಕೇಶವಪುರ ಗ್ರಾಮದ ವಾಸಿಯಾದ ಮಣಿ ಅಲಿಯಾಸ್‌ ಮಣಿಕಂಠ, ತನ್ನ ಮನೆಯಲ್ಲಿನ ಚಿನ್ನಾಭರಣ ಸಮೇತ ಮದುವೆಯಾಗುವುದಾಗಿ ನಂಬಿಸಿ ಕರೆದೊಯ್ದಿದ್ದು, ಈ ಕಾರ‍್ಯಕ್ಕೆ ಆತನ ಸ್ನೇಹಿತರಾದ ಗಂಗಾಧರ, ಹರೀಶ ಸಹಕರಿಸಿದ್ದರು. ಬಳಿಕ ಬೆಂಗಳೂರಿನ ಚಿಕ್ಕಜಾಲದಲ್ಲಿರುವ ಮಣಿಕಂಠನ ಸ್ನೇಹಿತ ಮಧು ಮನೆಯಲ್ಲಿರಿಸಿದ್ದು, ಆ ದಿನ ತನ್ನನ್ನು ಬಲವಂತವಾಗಿ ದೈಹಿಕ ಹಿಂಸೆ ಕೊಟ್ಟಿದ್ದನು. ಬಳಿಕ ಮೇ.30 ರಂದು ರಾತ್ರಿ ಸುಮಾರು 9ರ ಸಮಯದಲ್ಲಿ ಮಣಿಕಂಠ ತನ್ನನ್ನು ಹೊಸಕೋಟೆಯ ಯಾರೋ ಒಬ್ಬ ಲಾಯರ್‌ ಆಫೀಸ್‌ನಲ್ಲಿ ಬಿಟ್ಟು ಹೊರಟು ಹೋಗಿದ್ದ. ಕೊನೆಗೆ ತಾನು ಲಾಯರ್‌ ಮುಖಾಂತರ ತನ್ನ ತಂದೆಯವರಿಗೆ ಪೋನ್‌ ಮಾಡಿ ವಿಷಯ ತಿಳಿಸಿ, ಲಾಯರ್‌ ರವರು ನ್ನನ್ನನ್ನು ಹೊಸಕೋಟೆ ಪೊಲೀಸ್‌ ಸ್ಟೇಷನ್‌ಗೆ ಕರೆದೊಯ್ದು ರಕ್ಷಣೆ ಕೊಡಿಸಿದರು ಎಂದು ತಿಳಿಸಿದ್ದಾಳೆ.

ಬಾಲಕಿ ನೀಡಿದ ಹೇಳಿಕೆಯ ಮೇಲೆ ಗ್ರಾಮಾಂತರ ಠಾಣೆ ಪಿ.ಎಸ್‌.ಐ ಜಗದಿಶ್‌ ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಆರೋಪಿಗಳ ಪತ್ತೆಗೆ ಬಲೆಬೀಸಿ ಮೂರನೇ ಆರೋಪಿಯನ್ನು ಬಂಧಿಸಿದರು. ಒಂದನೇ ಅರೋಪಿ ಪೊಲೀಸರು ಬೆನ್ನಟ್ಟಿರುವ ವಿಷಯ ತಿಳಿದು ವಿಷ ಸೇವನೆ ಮಾಡಿ ಅತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಚಿಂತಾಮಣಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ